ಶ್ರೀಶಾರದಾಶ್ರಮದಲ್ಲಿ ಸ್ವಾಮಿ ವಿವೇಕಾನಂದರ – ಜಯಂತ್ಯುತ್ಸವ 10 ರಿಂದ 12 ವರೆಗೆ.
ಚಳ್ಳಕೆರೆ ಜ.08

ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ ಜನವರಿ 10 ರಿಂದ 12 ವರೆಗೆ ಸ್ವಾಮಿ ವಿವೇಕಾನಂದರ 164 ನೇ. ಜಯಂತ್ಯುತ್ಸವ ಸತ್ಸಂಗ ಕಾರ್ಯಕ್ರಮವನ್ನು ಆಯೋಜಿಸಿದ್ದು ಪ್ರತಿ ದಿನ ಸಂಜೆ 5.30 ರಿಂದ 7.30 ರ ವರೆಗೆ ಕಾರ್ಯಕ್ರಮಗಳು ನಡೆಯಲಿದ್ದು ಮೊದಲ ದಿನ ಶ್ರೀಶಾರದಾಶ್ರಮದ ಯುವ ಸಂಘದಿಂದ “ವಿವೇಕ ಸ್ಪೂರ್ತಿ” ನಾಟಕ ಪ್ರದರ್ಶನ, ಎರಡು ಮತ್ತು ಮೂರನೇ ದಿನ ಜೀವ ಶಿವ ಸೇವೆಯ ಕುರಿತು ಯುವಕ-ಯುವತಿಯರಿಂದ ಅನಿಸಿಕೆಗಳು, ಚಳ್ಳಕೆರೆಯ ಬಾಪೂಜಿ ಆಯುರ್ವೇದ ಕಾಲೇಜಿನ ಪ್ರಾಂಶುಪಾಲರಾದ ಡಾ, ಸಿ.ಟಿ ಬಸವರಾಜಪ್ಪ ಅವರಿಂದ ವಿಶೇಷ ಉಪನ್ಯಾಸ, ಪೂಜ್ಯ ಮಾತಾಜೀ ತ್ಯಾಗಮಯೀ ಅವರಿಂದ ಸ್ವಾಮಿ ವಿವೇಕಾನಂದರ ಬಗ್ಗೆ ವಿಶೇಷ ಪ್ರವಚನ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಶ್ರೀಶಾರದಾಶ್ರಮದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

