🚨 BREAKING NEWS, ಬೆಂಗಳೂರಿನಲ್ಲಿ ಕಿರಣ್ ಹೆಗ್ಡೆ ಅವರಿಂದ ಬೀಡಿ ಕಾರ್ಮಿಕರ ಪರವಾಗಿ ಬಲವಾದ ಮಂಡನೆ – ಸರ್ಕಾರದಿಂದ ಗ್ರೀನ್ ಸಿಗ್ನಲ್..! 🚨

ಬೆಂಗಳೂರು ಜ.11

ರಾಜ್ಯದ ಲಕ್ಷಾಂತರ ಬೀಡಿ ಕಾರ್ಮಿಕರ ಬದುಕಿನ ಆಧಾರವಾಗಿರುವ ಕನಿಷ್ಠ ವೇತನ (Minimum Wages) ನಿಗದಿಪಡಿಸುವ ಪ್ರಕ್ರಿಯೆಗೆ ಚಾಲನೆ ನೀಡಲು ಕರ್ನಾಟಕ ಸರ್ಕಾರದ ಕಾರ್ಮಿಕ ಇಲಾಖೆಯು ಬೆಂಗಳೂರಿನ ವಿಕಾಸ ಸೌಧದಲ್ಲಿ ಹಮ್ಮಿಕೊಂಡಿದ್ದ ಉನ್ನತ ಮಟ್ಟದ ಸಭೆಯು ಯಶಸ್ವಿಯಾಗಿ ಜರುಗಿತು.

📌 ವಿಕಾಸ ಸೌಧದಲ್ಲಿ ಕಾರ್ಮಿಕ ಸಚಿವರ ನೇತೃತ್ವದಲ್ಲಿ ಮಹತ್ವದ ಸಭೆ ಸಂಪನ್ನ:-

ಸನ್ಮಾನ್ಯ ಕಾರ್ಮಿಕ ಸಚಿವರ ಅಧ್ಯಕ್ಷತೆಯಲ್ಲಿ ವಿಕಾಸ ಸೌಧದ ಕೊಠಡಿ ಸಂಖ್ಯೆ 222 ರಲ್ಲಿ ಜರುಗಿದ ಈ ಸಭೆಯಲ್ಲಿ, ಬೀಡಿ ಕಾರ್ಮಿಕರ ಕನಿಷ್ಠ ವೇತನ ದರಗಳನ್ನು ಜಾರಿ ಗೊಳಿಸುವ ಕುರಿತು ಸುದೀರ್ಘ ಚರ್ಚೆ ನಡೆಸಲಾಯಿತು. ಈ ಹಿಂದೆ ನಿಗದಿಯಾಗಿದ್ದ ಸಮಯವನ್ನು ಬದಲಾಯಿಸಿ, ಸಂಜೆ 4:00 ಗಂಟೆಗೆ ಈ ಮಹತ್ವದ ಸಭೆಯನ್ನು ಏರ್ಪಡಿಸಲಾಗಿತ್ತು. ಕಳೆದ ಕೆಲವು ಸಮಯದಿಂದ ಬಾಕಿ ಉಳಿದಿದ್ದ ಕನಿಷ್ಠ ವೇತನ ಪರಿಷ್ಕರಣೆ ಮತ್ತು ಕಾರ್ಮಿಕರಿಗೆ ಸಿಗಬೇಕಾದ ಮೂಲಭೂತ ಸೌಕರ್ಯಗಳ ಕುರಿತು ಇಲ್ಲಿ ಗಂಭೀರ ಚರ್ಚೆ ನಡೆಸಲಾಯಿತು.

💥 ಕಾರ್ಮಿಕರ ಧ್ವನಿಯಾದ ಉಡುಪಿ ಇಂಟೆಕ್ ಅಧ್ಯಕ್ಷ ಕಿರಣ್ ಹೆಗ್ಡೆ:-

ಈ ಅತ್ಯಂತ ಪ್ರಮುಖವಾದ ರಾಜ್ಯ ಮಟ್ಟದ ಸಭೆಯಲ್ಲಿ ಉಡುಪಿ ಜಿಲ್ಲಾ ಇಂಟೆಕ್ (INTUC) ಅಧ್ಯಕ್ಷರಾದ ಕಿರಣ್ ಹೆಗ್ಡೆ ಅವರು ಜಿಲ್ಲೆಯ ಸಾವಿರಾರು ಕಾರ್ಮಿಕರ ಹಿತರಕ್ಷಣೆಗಾಗಿ ವಿಶೇಷ ಆಹ್ವಾನಿತರಾಗಿ ಪಾಲ್ಗೊಂಡಿದ್ದರು. ಸಭೆಯಲ್ಲಿ ಕಾರ್ಮಿಕರ ಪರವಾಗಿ ದನಿಯೆತ್ತಿದ ಕಿರಣ್ ಹೆಗ್ಡೆ ಅವರು, “ಕಾರ್ಮಿಕರ ಬೆವರಿನ ಹನಿಗೆ ನ್ಯಾಯ ಸಿಗಬೇಕು, ತಕ್ಷಣ ಆದೇಶ ಜಾರಿಯಾಗಲಿ” ಎಂದು ಪ್ರಬಲವಾಗಿ ಒತ್ತಾಯಿಸಿದರು.

⚠️ ಬೀಡಿ ಮಾಲೀಕರಿಗೆ ಕಿರಣ್ ಹೆಗ್ಡೆ ಛೀಮಾರಿ – ಸಚಿವರ ಖಡಕ್ ಎಚ್ಚರಿಕೆ:-

ಬೀಡಿ ಮಾಲೀಕರ ವಿರುದ್ಧ ತೀಕ್ಷಣವಾಗಿ ಮಾತನಾಡಿದ ಕಿರಣ್ ಹೆಗ್ಡೆ, ಕಾರ್ಮಿಕರಿಗೆ ಚುಟ್ಟಿ ಭತ್ಯ, ಸಂಬಳ ಹಾಗೂ ತುಟ್ಟಿ ಭತ್ಯಗಳು ಸರಿಯಾಗಿ ಮತ್ತು ಪೂರ್ಣ ಪ್ರಮಾಣದಲ್ಲಿ ದೊರೆಯುತ್ತಿಲ್ಲ ಎಂದು ಖಂಡಿಸಿದರು. ಈ ಸಂದರ್ಭದಲ್ಲಿ ಸಭೆಯಲ್ಲಿ ಪರಸ್ಪರ ವಿರೋಧ ವ್ಯಕ್ತವಾದಾಗ ತಕ್ಷಣವೇ ಸ್ಪಂದಿಸಿದ ಕಾರ್ಮಿಕ ಸಚಿವರು, “ಕಾರ್ಮಿಕರಿಗೆ ಇದೇ ರೀತಿ ತೊಂದರೆ ಮುಂದುವರಿದರೆ MSAL ರೀತಿಯಲ್ಲಿ ಬೀಡಿ ಖರೀದಿಗೆ ಸರ್ಕಾರವೇ ಮುಂದಾಗಲಿದೆ” ಎಂದು ಮಾಲೀಕರಿಗೆ ಸೂಕ್ತ ಎಚ್ಚರಿಕೆ ನೀಡಿದರು.

🗓️ ಜೂನ್ 30 ಕ್ಕೆ ಅಂತಿಮ ತೀರ್ಮಾನದ ಗಡುವು:-

ಸಭೆಯ ಚರ್ಚೆಯನ್ನು 30/1/2026 ಕ್ಕೆ ಮುಂದೂಡಲಾಗಿದ್ದು, ಅಂದೇ ಅಂತಿಮ ತೀರ್ಮಾನ ತೆಗೆದು ಕೊಳ್ಳಲಾಗುವುದು ಎಂದು ಸಚಿವರು ತಿಳಿಸಿದ್ದಾರೆ. ಒಂದು ವೇಳೆ ಒಮ್ಮತದ ತೀರ್ಮಾನ ಆಗದೆ ಹೋದಲ್ಲಿ, ಕೂಡಲೇ ಸರ್ಕಾರವು ಕಾರ್ಮಿಕರ ಪರವಾಗಿ ಸೂಕ್ತ ಕ್ರಮ ತೆಗೆದು ಕೊಳ್ಳಲಿದೆ ಎಂದು ಸಚಿವರು ಭರವಸೆ ನೀಡಿದರು.

👥 ಪ್ರಮುಖರ ಉಪಸ್ಥಿತಿ:-

ಸಭೆಯಲ್ಲಿ ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ ಮತ್ತು ಐವನ್ ಡಿಸೋಜ ಅವರು ಉಪಸ್ಥಿತರಿದ್ದು ಕಾರ್ಮಿಕರ ಪರವಾಗಿ ಬೆಂಬಲ ವ್ಯಕ್ತಪಡಿಸಿದರು. ಕಾರ್ಮಿಕ ಇಲಾಖೆಯ ಆಯುಕ್ತರು, ಅಪರ ಕಾರ್ಯದರ್ಶಿಗಳು ಹಾಗೂ ಮಂಗಳೂರು ಗಣೇಶ್ ಬೀಡಿ, ಭರತ್ ಬೀಡಿ ಸೇರಿದಂತೆ ರಾಜ್ಯದ ಪ್ರಮುಖ ಬೀಡಿ ಉದ್ದಿಮೆಗಳ ಮಾಲೀಕರು ಮತ್ತು ವ್ಯವಸ್ಥಾಪಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

🌟 ಕಾರ್ಮಿಕ ವಲಯದಲ್ಲಿ ಹರ್ಷ:-

ರಾಜ್ಯ ಮಟ್ಟದ ವೇದಿಕೆಯಲ್ಲಿ ಉಡುಪಿ ಜಿಲ್ಲೆಯ ಕಾರ್ಮಿಕರ ನೋವಿಗೆ ದನಿಯಾದ ಕಿರಣ್ ಹೆಗ್ಡೆ ಅವರ ಕಾರ್ಯವೈಖರಿಗೆ ಜಿಲ್ಲೆಯ ಕಾರ್ಮಿಕ ವಲಯದಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಸಭೆಯ ತೀರ್ಮಾನದಂತೆ ಶೀಘ್ರದಲ್ಲೇ ರಾಜ್ಯ ಸರ್ಕಾರದಿಂದ ಅಧಿಕೃತ ಗೆಜೆಟ್ ನೋಟಿಫಿಕೇಶನ್ ಹೊರಬೀಳುವ ಸಾಧ್ಯತೆ ಇದ್ದು, ಇದು ಲಕ್ಷಾಂತರ ಕಾರ್ಮಿಕರ ಬದುಕಿನಲ್ಲಿ ಹೊಸ ಭರವಸೆ ಮೂಡಿಸಿದೆ.

ವರದಿ:ಆರತಿ.ಗಿಳಿಯಾರು.ಉಡುಪಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button