ಕರವೇ ವತಿಯಿಂದ ಸಾರಿಗೆ ಬಸ್ ಮೇಲಿರುವ ಖಾಸಿಗೆ ಬಿತ್ತಿ ಚಿತ್ರಗಳನ್ನು – ತೆರವು ಗೊಳಿಸಲಾಯಿತು.
ದೇವರ ಹಿಪ್ಪರಗಿ ಫೆ.21

ಕರ್ನಾಟಕ ರಕ್ಷಣಾ ವೇದಿಕೆ ತಾಲೂಕ ಘಟಕ ದೇವರ ಹಿಪ್ಪರಗಿ ವತಿಯಿಂದ ದೇವರ ಹಿಪ್ಪರಗಿಯ ಬಸ್ ನಿಲ್ದಾಣದಲ್ಲಿ ಕರ್ನಾಟಕ ಸಾರಿಗೆ ಇಲಾಖೆಯ ಬಸ್ಸಿನ ಮೇಲಿರುವ ಖಾಸಗಿ ಬಿತ್ತಿ ಚಿತ್ರಗಳನ್ನು ತೆರವು ಗೊಳಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ತಾಲೂಕ ಅಧ್ಯಕ್ಷರಾದ ಶ್ರೀ ರಹಿಮಾನಸಾಬ್ ಕನಕಾಲ ಸರ್ಕಾರ ಆದೇಶ ನೀಡಿದರು ನಮ್ಮ ತಾಲೂಕಿನಲ್ಲಿ ಇನ್ನೂ ಕೂಡ ಸಾರಿಗೆ ಬಸ್ಸಿನ ಮೇಲೆ ತಂಬಾಕು ಹಾಗೂ ಚಪ್ಪಲಿಯ ಬಿತ್ತಿ ಚಿತ್ರಗಳನ್ನು ತೆರೆವು ಗೊಂಡಿಲ್ಲ ಹಾಗಾಗಿ ನಾವು ತಾಲೂಕ ಘಟಕದ ವತಿಯಿಂದ ಇಂದು ಸುಮಾರು ಬಸ್ಸುಗಳ ಮೇಲಿರುವ ತಂಬಾಕು ಸೇವನೆ ಚಿತ್ರಗಳನ್ನು ತೆರೆವು ಗೊಳಿಸಿ ಬೆಂಕಿ ಹಚ್ಚಲಾಯಿತು.

ಅದೇ ರೀತಿ ಸಿಂದಗಿಯ ಡಿಪೋ ಮ್ಯಾನೇಜರ್ ಅವರಿಗೆ ಕೂಡ ಕರೆಯ ಮುಖಾಂತರ ಶೀಘ್ರದಲ್ಲೇ ಬಸ್ಸುಗಳ ಮೇಲಿರುವ ಖಾಸಗಿ ಬಿತ್ತಿ ಚಿತ್ರಗಳನ್ನು ತೆರವು ಮಾಡಬೇಕೆಂದು ಎಚ್ಚರಿಕೆ ಸಂದೇಶವನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ತಾಲೂಕ ಉಪಾಧ್ಯಕ್ಷರಾದ ನಾಗೇಶ್ ಕಮತಗಿ ಪ್ರಧಾನ ಕಾರ್ಯದರ್ಶಿ ಅಶೋಕ್ ಗೊಲ್ಲಾರ್ ಸಂಚಾಲಕರಾದ ಸಂತೋಷ್ ರಾಥೋಡ್ ಕಾರ್ಮಿಕ ಘಟಕ ಅಧ್ಯಕ್ಷರಾದ ಹಸನಸಾಬ್ ಭಾಗವಾನ್ ದಿಲೀಪ್ ದೊಡ್ಡಮನಿ ಹಾಗೂ ಕರವೇ ಕಾರ್ಯಕರ್ತರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಭೀಮಪ್ಪ ಹಚ್ಯಾಳ ದೇವರ ಹಿಪ್ಪರಗಿ

