🚨BREAKING NEWS, ಇತಿಹಾಸದಲ್ಲೇ ಮೊದಲು! ವಿಧಾನ ಸೌಧದ ಮೆಟ್ಟಿಲುಗಳ – ಮೇಲೆ ‘ಯಕ್ಷ ವೈಭವ’🚨
ಬೆಂಗಳೂರು/ಉಡುಪಿ ಫೆ.26

ರಾಜ್ಯದ ಶಕ್ತಿ ಕೇಂದ್ರವಾದ ಬೆಂಗಳೂರಿನ ವಿಧಾನ ಸೌಧದ ಮೆಟ್ಟಿಲುಗಳು ಮೇಲೆ ಇದೇ ಮೊದಲ ಬಾರಿಗೆ ಕರಾವಳಿಯ ಗಂಡು ಕಲೆ ‘ಯಕ್ಷಗಾನ’ ದ ಅಬ್ಬರಕ್ಕೆ ಸಾಕ್ಷಿ ಯಾಗಲಿವೆ..!
ಕರ್ನಾಟಕ ಯಕ್ಷಗಾನ ಅಕಾಡೆಮಿಯ ಆಶಯದಂತೆ, ಮುಂಬರುವ ಮೇ ತಿಂಗಳಲ್ಲಿ ವಿಧಾನ ಸೌಧದ ಮುಂಭಾಗದಲ್ಲಿ ಅದ್ಧೂರಿ ಯಕ್ಷಗಾನ ಪ್ರದರ್ಶನವನ್ನು ಆಯೋಜಿಸಲು ಸಭಾಧ್ಯಕ್ಷರಾದ ಯು.ಟಿ ಖಾದರ್ ಅವರು ಹಸಿರು ನಿಶಾನೆ ತೋರಿದ್ದಾರೆ.
🎭 ಸುದ್ದಿಯ ಪ್ರಮುಖ ಮುಖ್ಯಾಂಶಗಳು:
ಸ್ಥಳ:-
ವಿಧಾನ ಸೌಧದ ಭವ್ಯ ಮೆಟ್ಟಿಲುಗಳ ಮೇಲೆ.
ಸಮಯ:-
ಮುಂಬರುವ ಮೇ ತಿಂಗಳು. ಸಹಕಾರ:-ವಿಧಾನ ಸಭಾ ಸಚಿವಾಲಯ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ. ವಿಶೇಷತೆ:-ಇದೇ ಮೊದಲ ಬಾರಿಗೆ ಉಭಯ ತಿಟ್ಟುಗಳ (ತೆಂಕು ಮತ್ತು ಬಡಗು) ಖ್ಯಾತ ಕಲಾವಿದರ ಸಮಾಗಮ.
🤝 ಸ್ಪೀಕರ್ ಭೇಟಿ ಮತ್ತು ಮಹತ್ವದ ನಿರ್ಧಾರ:-
ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾದ ಡಾ, ತಲ್ಲೂರು ಶಿವರಾಮ ಶೆಟ್ಟಿ ಅವರ ನೇತೃತ್ವದ ನಿಯೋಗವು ಮಂಗಳವಾರ ವಿಧಾನಸೌಧದಲ್ಲಿ ಸ್ಪೀಕರ್ ಯು.ಟಿ ಖಾದರ್ ಅವರನ್ನು ಭೇಟಿ ಮಾಡಿ ಈ ಕುರಿತು ಸುದೀರ್ಘ ಸಮಾಲೋಚನೆ ನಡೆಸಿತು. ಅಕಾಡೆಮಿಯ ಮನವಿಗೆ ತಕ್ಷಣ ಸ್ಪಂದಿಸಿದ ಸ್ಪೀಕರ್ ಅವರು, ರಾಜ್ಯದ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿ ಬಿಂಬಿಸುವ ಯಕ್ಷಗಾನ ಪ್ರದರ್ಶನಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
🏛️ ಜನ ಪ್ರತಿನಿಧಿಗಳಿಗಾಗಿ ಯಕ್ಷಗಾನದ ರಸ ದೌತಣ:-
ಕೇವಲ ಸಾರ್ವಜನಿಕರಿಗಷ್ಟೇ ಅಲ್ಲದೆ, ರಾಜ್ಯದ ಎಲ್ಲಾ ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರು ಒಟ್ಟಾಗಿ ಕುಳಿತು ವೀಕ್ಷಿಸಲು ಅನುಕೂಲವಾಗುವಂತೆ ಈ ಕಾರ್ಯಕ್ರಮವನ್ನು ರೂಪಿಸಲಾಗುತ್ತಿದೆ. ಹೆಸರಾಂತ ಮತ್ತು ಹಿರಿಯ ಯಕ್ಷಗಾನ ಕಲಾವಿದರು ಈ ಪ್ರದರ್ಶನದಲ್ಲಿ ಭಾಗವಹಿಸಲಿದ್ದು, ಬೆಂಗಳೂರಿನ ಹೃದಯ ಭಾಗದಲ್ಲಿ ಕರಾವಳಿ-ಮಲೆನಾಡಿನ ಕಲೆ ಮೇಳೈಸಲಿದೆ.
👥 ಸಭೆಯಲ್ಲಿ ಉಪಸ್ಥಿತರಿದ್ದ ಗಣ್ಯರು:-
ಈ ಮಹತ್ವದ ಸಮಾಲೋಚನೆಯ ಸಂದರ್ಭದಲ್ಲಿ
ವಿಶಾಲಾಕ್ಷಿ:-
ಕಾರ್ಯದರ್ಶಿಗಳು, ವಿಧಾನ ಸಭಾ ಸಚಿವಾಲಯ.
ನಮೃತಾ ಎನ್:-
ರಿಜಿಸ್ಟ್ರಾರ್ ಯಕ್ಷಗಾನ ಅಕಾಡೆಮಿ.
ಸದಸ್ಯರು:-
ಕೊಪ್ಪಲ ಮೋಹನ್ ಕದ್ರಿ, ಸುಧಾಕರ ಶೆಟ್ಟಿ, ಪುಟ್ಟಸ್ವಾಮಿ.ಎ ಆರ್.
“ರಾಜ್ಯದ ಶಾಸಕಾಂಗದ ಶಕ್ತಿ ಕೇಂದ್ರದಲ್ಲಿ ಕಲೆ ಮತ್ತು ಸಂಸ್ಕೃತಿಯ ಅನಾವರಣ ವಾಗುತ್ತಿರುವುದು ಹೆಮ್ಮೆಯ ವಿಷಯ. ಇದು ಯಕ್ಷಗಾನದ ಇತಿಹಾಸದಲ್ಲಿ ಒಂದು ಮೈಲಿಗಲ್ಲಾಗಲಿದೆ.”
ವರದಿ:ಆರತಿ.ಗಿಳಿಯಾರು.ಉಡುಪಿ

