“ವೈರಾಗ್ಯ ನಿಧಿ”…..

ಉಡುತಡಿಯಲಿ ಜನಿಸಿ ಬಾಲ್ಯದಿ ಶಿವನ

ಆರಾಧಿಸಿ

ಚೆನ್ನಮಲ್ಲಿಕಾರ್ಜುನನ ಪತಿಯೆಂದು ಸ್ವೀಕರಿಸಿ

ಕೇಶಾಂಬರಿಯಾಗಿ ಲೌಕಿಕ ಜಗವ ದಿಕ್ಕರಿಸಿ

ಹೊರಟಳು ಅಲೆಯುತ ಪರಶಿವನ ಬಯಸಿ

ಪ್ರಸಿದ್ದಿ ಪಡೆದಳು ಶ್ರೇಷ್ಠ ವಚನಗಾರ್ತಿಯಾಗಿ

ಬಂಡಾಯದ ದನಿಯೆತ್ತಿದಳು ಸ್ತ್ರೀಯರಿಗಾಗಿ

ನೆಡೆದಳು ಅನುಭವ ಮಂಟಪಕೆ

ದಿಗಂಬರಳಾಗಿ

ಶಿವ ಶರಣರ ಮೆಚ್ಚುಗೆ ಪಡೆದಳು ಅಕ್ಕರೆಯ

ಅಕ್ಕಳಾಗಿ

ಮೊದಲ ಕವಯತ್ರಿಯಿವಳು ಕನ್ನಡ ಸಾಹಿತ್ಯಕೆ

ಏರಿದಳು ಆತ್ಮ ಬಲದಿಂದ ಆಧ್ಯಾತ್ಮದ

ಉತ್ತುಂಗಕೆ

ವೀರ ವಿರಾಗಿಣಿಯಾಗಿ ಅರಿಷಡ್ವರ್ಗಗಳ

ಜಯಿಸಿದಾಕೆ

ಸಾಕಾರಮೂರ್ತಿಯಿವಳು ನಿಷ್ಠೆ ಭಕ್ತಿ ವೈರಾಗ್ಯಕೆ

ತೆರಳಿದಳು ಶ್ರೀಶೈಲಕೆ ತನ್ನ ಆರಾಧ್ಯ ಪತಿಯ

ಅರಸುತ

ಉಗ್ರಸಾದನೆಯಲಿ ತಲ್ಲಿನನಾದಳಾಕೆ ಹರನ

ಜಪಿಸುತ

ಕದಳಿವನದಲಿ ಬಯಲಾದಳು ತನ್ನ ಪತಿಯ

ಸೇರುತ

ಮನವಾಗಿದೆ ಭಾವುಕ ವೈರಾಗ್ಯ ನಿಧಿಯ

ನೆನೆಯುತ

ಡಾ, ಆರ್.ಗೌರಮ್ಮ, ಚಿತ್ರದುರ್ಗ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button