💥ಬ್ರೇಕಿಂಗ್ ನ್ಯೂಸ್💥🌟 ||ಶ್ರೀ ಕ್ಷೇತ್ರ ಅಮೃತೇಶ್ವರೀ ಸನ್ನಿಧಿಯಲ್ಲಿ ಮಾನ್ಯ ಸಂತೋಷ್ ಶೆಟ್ಟಿ ಭೇಟಿ – ದೈವೀ ಕೃಪೆಗೆ ಪಾತ್ರರಾದ ಗಣ್ಯರು|| 🌟

ಕೋಟ ಮಾ.29

ಭಕ್ತರ ಆರಾಧ್ಯ ದೈವ, ಶಕ್ತಿಯ ನೆಲೆಬೀಡು ಶ್ರೀ ಕ್ಷೇತ್ರ ಅಮೃತೇಶ್ವರೀ ಹಲವು ಮಕ್ಕಳ ತಾಯಿ ಅಮ್ಮನವರ ಸನ್ನಿಧಿಗೆ ಇಂದು ಗಣ್ಯರ ಭೇಟಿಯೊಂದಿಗೆ ಭಕ್ತಿಯ ಸಂಭ್ರಮ ಮನೆ ಮಾಡಿತ್ತು.ಕರ್ನಾಟಕ ಸರ್ಕಾರದ ಅಕ್ರಮ ಸಕ್ರಮ ಕಮಿಟಿ ಸದಸ್ಯರು ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಕುಂದಾಪುರ ತಾಲೂಕು ಅಧ್ಯಕ್ಷರಾದ ಮಾನ್ಯ ಸಂತೋಷ್ ಶೆಟ್ಟಿ (ಸಚಿವ ಡಿ.ಕೆ. ಶಿವಕುಮಾರ್ ಅವರ ಪರಮಾಪ್ತರು) ಅವರು ಇಂದು ಕ್ಷೇತ್ರಕ್ಕೆ ಭೇಟಿ ನೀಡಿ, ತಾಯಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.

🔷 ಗಂಧ ಪ್ರಸಾದದೊಂದಿಗೆ ಗೌರವಾರ್ಪಣೆ:-

ದೇವಸ್ಥಾನಕ್ಕೆ ಆಗಮಿಸಿದ ಮಾನ್ಯ ಸಂತೋಷ್ ಶೆಟ್ಟಿ ಅವರಿಗೆ ಕ್ಷೇತ್ರದ ಅರ್ಚಕ ವೃಂದದವರು ಹಾಗೂ ಗಣ್ಯರು ಭಕ್ತಿಪೂರ್ವಕವಾಗಿ ಸ್ವಾಗತ ಕೋರಿದರು. ದೇವಸ್ಥಾನದ ಸಂಪ್ರದಾಯದಂತೆ ಅವರಿಗೆ ಗಂಧ ಪ್ರಸಾದವನ್ನು ನೀಡಿ ಗೌರವ ಸಲ್ಲಿಸಲಾಯಿತು.

🔷 ಒಂದೆಡೆ ಸೇರಿದ ಗಣ್ಯರು:-

ಈ ಸಂದರ್ಭದಲ್ಲಿ ಸಾಲಿಗ್ರಾಮದ ಗಣೇಶ್ ನೆಲ್ಲಿ ಬೆಟ್ಟು, ಗಿಳಿಯಾರು ಗರಡಿ ಮಕ್ಕಿಯ ಸುಭಾಷ್ ಶೆಟ್ಟಿ, ಸಾಲಿಗ್ರಾಮದ ರಾಜೇಶ್ ನೆಲ್ಲಿ ಬೆಟ್ಟು ಹಾಗೂ ಚಂದ್ರ ಆಚಾರ್ ಮತ್ತು ಅರ್ಚಕ ವೃಂದದವರು ಉಪಸ್ಥಿತರಿದ್ದರು. ಕ್ಷೇತ್ರಕ್ಕೆ ಭೇಟಿ ನೀಡಿದ ಈ ಎಲ್ಲಾ ಗಣ್ಯರಿಗೂ ದೇವಸ್ಥಾನದ ಪರವಾಗಿ ಗಂಧ ಪ್ರಸಾದ ನೀಡಿ ಗೌರವಿಸಲಾಯಿತು.

ದೇವಿಯ ಅನುಗ್ರಹ:-

ಅಮ್ಮನವರ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಿದ ಮಾನ್ಯ ಸಂತೋಷ್ ಶೆಟ್ಟಿ ಮತ್ತು ಇತರ ಗಣ್ಯರು, ದೇವಿಯ ವಿಶೇಷ ಕೃಪೆಗೆ ಪಾತ್ರರಾದರು. ಅರ್ಚಕ ವೃಂದದ ಆಶೀರ್ವಾದದೊಂದಿಗೆ ಕ್ಷೇತ್ರದ ಪಾವಿತ್ರ್ಯತೆಯನ್ನು ಕಣ್ತುಂಬಿಕೊಂಡರು.

📢 ವರದಿ:ಆರತಿ.ಗಿಳಿಯಾರು.ಉಡುಪಿ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button