“ಮನದ ತತ್ವ ಜಗದಿ ಸಾರಿದ ಸಂತ ಶಿಶುನಾಳ ಶರೀಫರು”…..

ಮನುಜ ಕುಲದ ಮಹಾತ್ಮನು
ತತ್ವಪದಗಳ ಪಿತಾಮಹನು
ಗೋವಂದ ಭಟ್ಟರ ಶಿಷ್ಯೋತ್ಮನು
ಸಜ್ಜನರ ಸ್ನೇಹತನವ ಸಿರಿದಾತನು
ಆಧ್ಯಾತ್ಮಿಕ ತತ್ವ ಜ್ಞಾನದ ನಿಧಿಯು
ಜೀವನದ ಅನುಭವ ತತ್ವಮಸಿ
ಮಹಾನ್ ಸಾಧು
ಆಡುಭಾಷೆ ತತ್ವ ಗೀತ ರಚನೆಕಾರನು
ಮನದ ಮಂತ್ರ ಜಗದಿ ಅರಳಿಸಿದ
ಶಿವಯೋಗಿಯು
ಸೋಹಂ ತತ್ವ ದಾಸೋಹಂ ಸಾರಿದ
ಪುಣ್ಯಾತ್ಮನು
ಧರ್ಮ ನೀತಿ ಜ್ಯೋತಿ ಹೊಂಗಿರಣನು
ಆತ್ಮತತ್ವವ ಜಗದಿ ಸಾರಿದ ಸಂತನು
ಜಗವ ಸುತ್ತಿ ಆತ್ಮ ಜ್ಞಾನವ ಬೋಧಿಸಿದ ಪರಂಜ್ಯೋತಿಯು
ಭೋದ ವಂದೇ ಬ್ರಹ್ಮನಾದವ ಬಿತ್ತಿಹ
ಯತಿವರ್ಯನು
ಮೂಢನಂಬಿಕೆ ಅಳಸಿ ದೇಹ ದೇಗುಲ
ನಿರ್ಮಾತೃ ಜ್ಞಾನಿಯು
ಅನುಭಾವಿ ಕವಿ ಸಂತ ಶಿಶುನಾಳದ
ಕರ್ನಾಟಕ ಕಬೀರ ವಿಶ್ವದೆಲ್ಲೆಡೆ
ಸದಾ ಬೆಳಗುವನು
ಶ್ರೀಸುರೇಶ ಶಂಕ್ರೆಪ್ಪ ಅಂಗಡಿ
ದೇಶಂಸು ದೇವರ ಹಿಪ್ಪರಗಿ

