ವಿಶ್ವ ಪತ್ರಿಕಾ ದಿನಾಚರಣೆ ಉದ್ಘಾಟನಾ ಮಾಡಿದ ಶಾಸಕರು ಸರ್ಕಾರ ಮಟ್ಟದಲ್ಲಿ ಭರವಸೆ ಈಡೇರಿಸುವ ಆಶ್ವಾಸನೆ ನೀಡಿದರು.
ಇಲಕಲ್ಲ ಜುಲೈ.30

ಡಾll ಬಾಬು ಜಗಜೀವನ್ ರಾಮ್ ಭವನದಲ್ಲಿ ಇಂದು ವಿಶ್ವ ಪತ್ರಿಕಾ ದಿನಾಚರಣೆ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಜಿಲ್ಲಾ ಘಟಕದ ಉದ್ಘಾಟನೆ ಮತ್ತು ಸಾಧಕರಿಗೆ ಗೌರವದ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟನಾ ಮಾಡಿದ ಜನಪ್ರಿಯ ಶಾಸಕರಾದ ಡಾll ವಿಜಯಾನಂದ ಕಾಶಪ್ಪನವರ ಮಾಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಘಟಕದ ರಾಜ್ಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಬಂಗ್ಲೆ ಅವರು ರಾಜ್ಯ ವ್ಯಾಪಕವಾಗಿ ಈಗಾಗಲೇ ಸುತ್ತಾಡಿ ಒಂದು ಪ್ರಬಲವಾದ ಸಂಘದ ಮೂಲಕ ರಾಜ್ಯ ಸರ್ಕಾರದ ವಿರುದ್ಧ ಹೋರಾಟ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.

ಉದ್ಘಾಟನೆ ಮಾಡಿದ ಶಾಸಕರು ಮಾತನಾಡುತ್ತಾ ಹೇಳಿದರು ನೈಜ ಮತ್ತು ನಿಷ್ಠೆ ಹಾಗೂ ವಾಸ್ತುವಾಂಶದ ವರದಿಗೆ ಜೀವದ ಹಂಗು ತೊರೆದು ಮಾಡುವ ವರದಿಗೆ ಸರ್ಕಾರ ಮಟ್ಟದಲ್ಲಿ ಭರವಸೆ ಈಡೇರಿಸುವ ಆಶ್ವಾಸನೆ ನೀಡಿದರು. ಶ್ರೀ ಮ.ನಿ.ಪ್ರ.ಗುರುಮಹಾಂತ ಸ್ವಾಮಿಗಳು.ಪೂಜ್ಯಶ್ರೀ ಪೂರ್ಣಾನಂದ ಭಾರತಿ ಸ್ವಾಮಿಗಳು. ಪರಶುರಾಮ ಮಹಾರಾಜನವರ.ವಿವೇಕಾಂನದ ಎಚ್.ಕೆ. ಹಾಗೂ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಡಾll ಸಿತಿಮಾ ವಜ್ಜಲ ಮಾತನಾಡಿದರು. ಡಾll ಆಯ್.ಎನ್. ಹುರುಳಿ ಸ್ವಾಗತಿಸಿದರು. ಈ.ಸಿ.ಕುಂಬಾರವರು ಕಾರ್ಯಕ್ರಮವನ್ನು ನಿರೂಪಿಸಿ ವಂದನಾರ್ಪಿಸಿದರು.