ಶತಾಧಿಪತಿ ವಿಶೇಷ ಎಪಿಸೋಡ್ : ಬೆಳಗಾವಿಯ ಸರ್ಕಾರಿ ಶಾಲೆಯ ವಿಜ್ಞಾನ ಶಿಕ್ಷಕನ ಪ್ರಯೋಗಕ್ಕೆ ವಿದ್ಯಾರ್ಥಿಗಳು ಫಿದಾ, ಸಿಕ್ರೆ ಇಂತಹ ಗುರುಗಳು ಸಿಗಬೇಕು ಎಂದ ವಿಧ್ಯಾರ್ಥಿಗಳು…!

ಬೆಳಗಾವಿ(ಭೂತ್ರಾಮನಹಟ್ಟಿ) :

ಬೆಳಗಾವಿ ಜಿಲ್ಲೆಯ ಭೂತ್ರಾಮನಹಟ್ಟಿ ಸರ್ಕಾರಿ ಶಾಲೆಯನ್ನು ಕರ್ನಾಟಕದಲ್ಲಿರುವ ಮಾದರಿ ಶಾಲೆ ಎಂದು ಕರೆದರೆ ತಪ್ಪಾಗಲಾರದು . ಏಕೆಂದರೆ ಇಲ್ಲಿನ ವಿಜ್ಞಾನ ಗುರುಗಳಾದ ಶ್ರೀ ಬಸವ ಸುಂಗಾರಿ ಅವರು ತಮ್ಮ ಕ್ರಿಯಾತ್ಮಕ , ಸುಂದರ , ಸರಳ, ಮನಮೋಹಕ ಪ್ರಯೋಗಗಳಿಂದ ಸರಳವಾಗಿ ಮಕ್ಕಳಿಗೆ ಬೋಧಿಸುವ ಹೊಸ ಮಾರ್ಗವನ್ನು ಕಂಡುಕೊಂಡಿದ್ದಾರೆ .

ಅದೇನೆಂದರೆ, ಈ ಶಿಕ್ಷಕ ಇದೀಗ ಭಿನ್ನ ಪ್ರಯೋಗಕ್ಕೆ ಮುಂದಾಗಿಡಿದ್ದು ಈ ಮೂಲಕ ಎಲ್ಲಾ ಗುರು ವೃಂದದವರಿಗೆ ಮಾದರಿಯಾಗಿದ್ದಾರೆ . ಇವರು ಈ ಶಾಲೆಯಲ್ಲಿ “ಕನ್ನಡದ ಕೋಟ್ಯಾಧಿಪತಿ” ಕಾರ್ಯಕ್ರಮದಂತೆಯೇ, “ಕನ್ನಡದ ಶತಾಧಿಪತಿ” ಕಾರ್ಯಕ್ರಮವನ್ನು ಆಯೋಜಿಸುತ್ತದೆ, ಪ್ರಶ್ನೆಗಳನ್ನು ಸಿದ್ಧಪಡಿಸಿ, ನಿಗದಿತವಾಗಿ ಸಮಯವನ್ನು ಅಳವಡಿಸಿ, ಮಕ್ಕಳು ಭಾಗವಹಿಸುವಂತೆ ಮಾಡಿದ್ದಾರೆ. ವಿಶೇಷವೆಂದರೆ ಪ್ರತಿ ಸರಿ ಉತ್ತರಕ್ಕೆ ೧೦ ರೂ ನೀಡುತ್ತಾರೆ.

ಆದ್ದರಿಂದ ಈ ಕಾರ್ಯಕ್ರಮಕ್ಕೆ ಇವರು ಇಟ್ಟ ಹೆಸರು ಶತಾಧಿಪತಿ.ಇಂತಾ ಮೇಷ್ಟ್ರು ಎಲ್ಲ ಸರ್ಕಾರಿ ಶಾಲೆಯಲ್ಲಿ ಇರಬೇಕು ಎಂಬುದು ವಿಧ್ಯಾರ್ಥಿಗಳ ಅನಿಸಿಕೆಯಾಗಿದೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button