ಶ್ರೀಗುರು ವೀರಗಂಟ್ಟಿ ಮಡಿವಾಳೇಶ್ವರ ಜಾತ್ರೆ ನಿಮಿತ್ಯವಾಗಿ ಕಲಕೇರಿ ಪೊಲೀಸ್ ಠಾಣೆಯಲ್ಲಿ – ಪೂರ್ವಭಾವಿ ಸಭೆ.

ಕಲಕೇರಿ ಡಿ.04

ಶ್ರೀಗುರು ವೀರಗಂಟ್ಟಿ ಮಡಿವಾಳೇಶ್ವರ ಜಾತ್ರೆ ನಿಮಿತ್ಯವಾಗಿ ಕಲಕೇರಿ ಪೊಲೀಸ್ ಠಾಣೆಯಲ್ಲಿ ಪೂರ್ವಭಾವಿ ಸಭೆ ಜರುಗಿತು. ಪಿ.ಎಸ್.ಐ ಸುರೇಶ ಮಂಟೂರ್ ಇವರ ನೇತೃತ್ವದಲ್ಲಿ ಕಲಕೇರಿ ಜಾತ್ರೆ ಬಹಳ ವಿಜೃಂಭಣೆಯಿಂದ ಶಾಂತಿ ರೀತಿಯಿಂದ ಯಾವು ಘಟನೆಗಳು ನಡೆಯದಂತೆ ಎಲ್ಲಾ ಗ್ರಾಮ ಪಂಚಾಯತಿಯವರು ಗ್ರಾಮಸ್ಥರು ಮತ್ತು ಎಲ್ಲಾ ಕಮಿಟಿಯವರು ಮುನ್ನೆಚ್ಚರಿಕೆ ವಹಿಸಬೇಕು ಎಂದು ತಿಳಿಸಿದರು. ಕಲಕೇರಿ ಗ್ರಾಮ ಪಂಚಾಯತಿ ಅಧ್ಯಕ್ಷರು ರಾಜ ಅಹ್ಮದ್ ಸಿರಸಗಿ. ಉಪಾಧ್ಯಕ್ಷರು ವಿಜಯಲಕ್ಷ್ಮಿ ಪರಶುರಾಮ್ ಬೇಡರ್. ಗ್ರಾಮ ಪಂಚಾಯತಿ ಸದಸ್ಯರು ಸುಧಾಕರ್ ಅಡಿಕಿ ಇವರು ನಮ್ಮ ಕಲಕೇರಿ ಶ್ರೀಗುರು ವೀರಗಂಟ್ಟಿ ಮಡಿವಾಳೇಶ್ವರ ಜಾತ್ರೆ ಜೋಡು ತೇರಿನ ರಥೋತ್ಸವ ನಡೆಯುವುದು ದಿನಾಂಕ ಡಿಸೆಂಬರ್. 15,12,2024, ಸಾಯಂಕಾಲ 5:00 ಗಂಟೆಗೆ ರಥೋತ್ಸವ ನಡೆಯುವದು ಎಲ್ಲಾ ಪೊಲೀಸ್ ಸಿಬ್ಬಂದಿ ವರ್ಗದವರು ಎಲ್ಲಾ ಊರಿನ ಗ್ರಾಮಸ್ಥರು ಗ್ರಾಮ ಪಂಚಾಯತಿಯವರು ಸೇರಿ ಯಾವ ಘಟನೆಗಳು ನಡೆಯದಂತೆ ಶಾಂತ ರೀತಿಯಲ್ಲಿ ನಡೆಸಬೇಕು ತಿಳಿಸಿದರು. ನಬಿಲಾಲ್ ನಾಯ್ಕೋಡಿ ಇವರು ಗ್ರಾಮ ಪಂಚಾಯತಿ ವತಿಯಿಂದ ಎಲ್ಲಾ ರಸ್ತೆಗಳು ದುರಸ್ತಿ ಗ್ರಾಮದೊಳಗೆ ಎಲ್ಲಾ ಬೆಳಕಿನ ವ್ಯವಸ್ಥೆ ಬಂದಂತಹ ಭಕ್ತರಿಗೆ ನೀರಿನ ವ್ಯವಸ್ಥೆ ಮಾಡುತ್ತೇವೆ ಎಂದು ತಿಳಿಸಿದರು.

ತಾಲೂಕ ಪಂಚಾಯತಿಯ ಮಾಜಿ ಸದಸ್ಯರ ಲಕ್ಕಪ್ಪ ಬಡಿಗೇರ್ ಇವರು ನಮ್ಮೂರ ಜಾತ್ರೆ ಜೋಡು ರಥೋತ್ಸವ ನಡೆಯುವುದು ಜಾತಿ ಮತ ಎನ್ನದೆ ಎಲ್ಲರೂ ಒಂದಾಗಿ ಜಾತ್ರೆಯನ್ನು ಅದ್ದೂರಿಯಿಂದ ಶಾಂತಿ ರೀತಿಯಿಂದ ನಡೆಯುತ್ತದೆ ಎಂದು ತಿಳಿಸಿದರು. ಕಾಸಿಂಸಾಬ್ ನಾಯ್ಕೋಡಿ. ಹುಸೇನ್ ನಾಯ್ಕೋಡಿ. ವಿಶ್ವನಾಥ್ ರಾಠೋಡ. ಮಹಿಮದ್ ಕೆಂಭಾವಿ. ವಿನೋದ್ ವಡಿಗೇರಿ. ಜಾತ್ರೆಯ ತೇರಿನ ಕಮಿಟಿಯ ಸಣ್ಣ ಶರದಯ್ಯ ಗದ್ದಿಗಿ ಮಠ .ದೇವು ಕಡಕೋಳ. ಸಂಗಪ್ಪ ಬೈಚ್ಬಾಳ. ಸಂಗು ದೇಸಾಯಿ. ಪರಶುರಾಮ್ ವಡ್ಡರ್. ಸಂತೋಷ್ ಕಡಕೋಳ. ಈರಯ್ಯ ಕದ್ದಿಗಿ ಮಠ. ಮಡಿವಾಳಪ್ಪ ಗೊಮ ಶೆಟ್ಟಿ. ಪ್ರಶಾಂತ್ ಬಡಿಗೇರ್. ದೇವು ಮಾಗಣಗೇರಿ. ರವಿ ಹಿರೇಮಠ. ಕಲಕೇರಿಯ ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರು ಮತ್ತು ಗ್ರಾಮಸ್ಥರು ಎಲ್ಲಾ ಪೊಲೀಸ್ ಸಿಬ್ಬಂದಿ ವರ್ಗದವರು ಊರಿನ ಹಿರಿಯರು ಉಪಸ್ಥಿತರಿದ್ದರು.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಮೈಬೂಬಬಾಷ ಮನಗೂಳಿ.ತಾಳಿಕೋಟೆ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button