“ಮಾನವೀಯತೆ ಮೆರೆದ ಪಿ.ಎಸ್.ಐ ಗೀತಾಂಜಲಿ ಶಿಂಧೆ”.
ಕೊಟ್ಟೂರು ಸಪ್ಟೆಂಬರ್.15

ಪಟ್ಟಣದ ಬುದ್ಧಿ ಮಾಂಧ್ಯರನ್ನು ಧಾರವಾಡ ನಿಮಾನ್ಸ್ ಕೇಂದ್ರಕ್ಕೆ ಕಳುಹಿಸಿ ಕೊಡುವ ಮೂಲಕ ಕೊಟ್ಟೂರು ಪೋಲಿಸ್ ಪಿ.ಎಸ್.ಐ ಗೀತಾಂಜಲಿ ಶಿಂಧೆ ಮಾನವೀಯತೆ ಮೆರೆದಿದ್ದಾರೆ. ಪಟ್ಟಣದಲ್ಲಿ ಸಾರ್ವಜನಿಕರಿಗೆ ಅಡ್ಡಿಪಡಿಸುವುದು ಅರೆ ಬೆತ್ತಲೆಯಾಗಿ ಅಸಹ್ಯಕರವಾಗುವ ರೀತಿಯಲ್ಲಿ ತಿರುಗಾಡುತ್ತಾ ಎಲ್ಲೆಂದರಲ್ಲಿ ಮಲಮೂತ್ರ ವಿಸರ್ಜನೆ ಮಾಡುತ್ತಾ ಕೈಗೆ ಸಿಕ್ಕಿದ್ದನ್ನು ತಿನ್ನುತ್ತಾ ಸಾರ್ವಜನಿಕರ ವಾಹನಗಳಿಗೆ ತೊಂದರೆ ಮಾಡುತ್ತಿದ್ದರು.ಸಾರ್ವಜನಿಕರಿಗೆ ರೇಗಾಡುವುದು ಮತ್ತು ಕೈಗೆ ಸಿಕ್ಕ ವಸ್ತುಗಳನ್ನು ಸಾರ್ವಜನಿಕರ ಮೇಲೆ ಹಲ್ಲೆ ನಡೆಸುವುದು ಸಾರ್ವಜನಿಕರಿಗೆ ಭಯ ಬರುವಂತೆ ವರ್ತಿಸುತ್ತಿದ್ದರು.

ಬುದ್ಧಿ ಮಾಂಧ್ಯದವರನ್ನು ಗಮನಿಸಿದ ಪಿ.ಎಸ್.ಐ ಗೀತಾಂಜಲಿ ಶಿಂಧೆ ಕೊಟ್ಟೂರು ಪೋಲಿಸ್ ಠಾಣೆಗೆ ಹಿಡಿದು ಕೊಂಡು ಬಂದು ಪೋಲಿಸ್ ಸಿಬ್ಬಂದಿ ಮತ್ತು ಹಸಿರು ಹೊನಲು ತಂಡ ಸಹಾಯದೊಂದಿಗೆ ಬುದ್ಧಿ ಮಾಂಧ್ಯರವರಿಗೆ ಮೆಜೆಸ್ಟಿಕ್ ಕಟಿಂಗ್ ಶಾಪ್ ಎಲ್ಲೇಶ್ ಕ್ಷೌರ ಮಾಡಿದರು ,ಮತ್ತು ಹೊಸ ವಸ್ತಗಳನ್ನು ಧರಿಸಿ ಚಿಕಿತ್ಸೆಗೆ ಧಾರವಾಡ ನಿಮಾನ್ಸ್ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕಳಿಸಿ ಕೊಡುತ್ತೇವೆ ಎಂದು ಪಿ.ಎಸ್.ಐ ಗೀತಾಂಜಲಿ ಶಿಂಧೆ ಪತ್ರಿಕೆಗೆ ತಿಳಿಸಿದ್ದಾರೆ.(1)ಲಕ್ಷ್ಮೀದೇವಿ ತಂದೆ ಲೇಟ್ ಭೀಮಪ್ಪ. ನೇವಾರ ಜನಾಂಗ ವಾಸ ರಾಂಪುರ, ತಾಲೂಕುನವರಾಗಿದ್ದು, (2)ಕೊಟ್ರಮ್ಮ ತಿಪ್ಪೇಶಪ್ಪ.ಲಿಂಗಾಯತರು ವಾಸ : ಗಜಾಪುರ ಕಿ.ರಾಜಪ್ಪ, ಕಲ್ಲೇಶ, ಆನಿಲ್ ಕುಮಾರ್, ಗ್ರಾಮ, (೨)ಎರೇಶಿ ತಂದೆ ಲೇಟ್ ವೀರಭದ್ರಯ್ಯ ಜಂಗಮರ ಜನಾಂಗ ವಾಸ: ಬಸವೇಶ್ವರ ನಗರ ಕೊಟ್ಟೂರು, (4)ಶಿವಮೂರ್ತಿ ತಂದೆ ಮಹಾದೇವಪ್ಪ, ಲಿಂಗಾಯುತರು ಜನಾಂಗ ಅನ್ನೂರು ಗಾಮ, (5)ಕೊಟೇಶ ತಂದೆ ಬಸಪ್ಪ. ನಾಗಲಾಪುರ ಕೂಡ್ಲಿಗಿಈ ಸಂದರ್ಭದಲ್ಲಿ ಪೋಲಿಸ್ ಸಿಬ್ಬಂದಿ ಕವಿತಭಾಯಿ ಹಾಗು ಗೃಹ ರಕ್ಷಕ ದಳದ ಸಿಬ್ಬಂದಿಯಾದ ಶಿವರಾಜ ಪರಶುರಾಮ, ಹಸಿರು ಹೊಸಲು ತಂಡದ ನಾಗರಾಜ ಬಂಜರ್ ಮತ್ತು ತ೦ಡದ ಸದಸ್ಯರಾದ ಯಲ್ಲಪ್ಪ, ದೊಡ್ಡ ಕೊಟ್ರೇಶಿ , ಇನ್ನಿತರರು ಇದ್ದರು.
ತಾಲೂಕ ವರದಿಗಾರರು:ಪ್ರದೀಪ್.ಕುಮಾರ್.C ಕೊಟ್ಟೂರು