14.ದಿವಸಗಳ ವರೆಗೆ ನಡೆಯಲಿರುವ ಉಚಿತ ಯೋಗ ನಿಸರ್ಗ ಚಿಕಿತ್ಸಾ ಶಿಬಿರ.

ಕೊಟ್ಟೂರು ಮೇ.23

ನಿನ್ನೆ ಪಟ್ಟಣದ ತುಂಗಭದ್ರ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಬಸವ ಪತಂಜಲಿ ಯೋಗ ಸಮಿತಿ ಕರ್ನಾಟಕ, ಜೆಸಿಐ ಕೊಟ್ಟೂರು ಕಾಟನ್, ಥಿಯೋಸಾಫಿಕಲ್ ಲಾಡ್ಜ್, ಪಟ್ಟಣದ ವಿವಿಧ ಕೇಂದ್ರಗಳ ಯೋಗ ಪರಿವಾರ ಹಾಗೂ ಹಸಿರು ಹೊನಲು ಸೇವಾ ಸಂಸ್ಥೆ ಕೊಟ್ಟೂರು ಇವರ ಸಂಯುಕ್ತ ಆಶ್ರಯದಲ್ಲಿ ಯೋಗ ಗುರು ಶ್ರೀ ವೀರೇಶ್ ಗುರೂಜಿ ಬಸವ ಪತಂಜಲಿ ಯೋಗ ನಿಸರ್ಗ ಚಿಕಿತ್ಸಾ ಕೇಂದ್ರ ಕಪ್ಪತಗುಡ್ಡ ಕಡಕೋಳ ಇವರಿಂದ ದಿನಾಂಕ 22.-05-2023ರಿಂದ 04-06-2023 ರ ವರೆಗೆ 14 ದಿವಸಗಳವರೆಗೆ ನಡೆಯಲಿರುವ ಉಚಿತ ಯೋಗ ನಿಸರ್ಗ ಚಿಕಿತ್ಸಾ ಶಿಬಿರವನ್ನು ಗಿಡಕ್ಕೆ ನೀರನ್ನು ಹಾಕುವ ಮೂಲಕ ಶ್ರೀ ವೀರೇಶ ಗುರೂಜಿಗಳು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಡಾಕ್ಟರ್ ವಿಜಯಕುಮಾರ್ ವೈದಾಧಿಕಾರಿಗಳು ಆಯುಷ್ ಇಲಾಖೆ ಇವರು ಯೋಗ ಆಯುರ್ವೇದ ಮತ್ತು ನಿಸರ್ಗ ಚಿಕಿತ್ಸೆಯ ಕುರಿತಂತೆ ತಿಳಿಸಿದರು.

ಇಂಜಿನಿಯರ್ ಶಾಂತಕುಮಾರ್ ಅಲಬೂರ್ ಇವರು ಇಂದಿನಿಂದ ಆರಂಭವಾಗಿರುವ ಈ ಶಿಬಿರ ಯಶಸ್ವಿಗೊಳಿಸಲು ಶಿಬಿರಾರ್ಥಿಗಳಾಗಿ ಆಗಮಿಸುವದರೊಂದಿಗೆ ತಮ್ಮೊಂದಿಗೆ ನಾಳೆಯಿಂದ ಕನಿಷ್ಠ ಐದು ಜನರನ್ನು ಕರೆತರುವಂತಹ ಸಂಕಲ್ಪದೊಂದಿಗೆ ಶಿಬಿರದ ಸಂಪೂರ್ಣ ಲಾಭವನ್ನ ಪಡೆದುಕೊಳ್ಳಲು ಕರೆ ನೀಡಿದರು. ವೇದಿಕೆಯಲ್ಲಿ ತುಂಗಭದ್ರಾ ಶಿಕ್ಷಣ ಸಂಸ್ಥೆಯ ಬಿಎಡ್ ಕಾಲೇಜಿನ ಉಪನ್ಯಾಸಕರಾದ ಶ್ರೀ ಅರವಿಂದ್ ಬಸಾಪುರ, ಜೆಸಿಐ ಕೊಟ್ಟೂರು ಕಾಟನ್ ಅಧ್ಯಕ್ಷರಾದ ಯೋಗೇಶ್ ಅಂಗಡಿ, ಯೋಗ ಶಿಕ್ಷಕರಾದ ಶ್ರೀ ದೇವರಮನೆ ಕರಿಯಪ್ಪ, ಶ್ರೀ ಎನ್ ಜಗದೀಶ್, ಶ್ರೀ ಕರ್ಣಂ ಮಹಾಂತಪ್ಪ, ಹಸಿರು ಹೊನಲು ಸೇವಾ ಸಂಸ್ಥೆಯ ಶ್ರೀ ಚೇತನ್ ಕುಮಾರ್ ಮಾತನಾಡಿದರು. ಇಂದಿನ ಯೋಗ ಶಿಬಿರದಲ್ಲಿ ನೂರಕ್ಕೂ ಹೆಚ್ಚು ಜನ ಶಿಬಿರಾರ್ಥಿಗಳು ಭಾಗವಹಿಸಿದ್ದರು. ಶಿಬಿರದ ನಂತರ ಶಿಬಿರಾರ್ಥಿಗಳಿಗೆ ಹಾಗೂ ಇತರೆ 50 ಕ್ಕು ಹೆಚ್ಚು ಜನರಿಗೆ ನಿಸರ್ಗ ಚಿಕಿತ್ಸೆಯ ಮಾಹಿತಿಯನ್ನು ಶ್ರೀ ವೀರೇಶ್ ಗುರೂಜಿಯವರು ತಿಳಿಸಿಕೊಟ್ಟರು. ಶಿಬಿರ ಕಾರ್ಯಕ್ರಮದ ನಿರೂಪಣೆಯನ್ನು ಕೆ. ರಾಮಣ್ಣ ಯೋಗ ಶಿಕ್ಷಕರು ಇವರು ನಿರ್ವಹಿಸಿದರು.

ತಾಲೂಕ ವರದಿಗಾರರು:ಪ್ರದೀಪ್.ಕುಮಾರ್.C ಕೊಟ್ಟೂರು

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button