ಗಣೇಶ ಹಬ್ಬ, ಈದ್ ಮಿಲಾದ್ ಹಬ್ಬದ ಶಾಂತಿ ಸಭೆ.

ದೇವರ ಹಿಪ್ಪರಗಿ ಆ.29

ಗಣೇಶನ ಪ್ರತಿಷ್ಠಾಪನೆ ಯಿಂದ ವಿಸರ್ಜನೆ ವರೆಗಿನ ಗಣೇಶ ಉತ್ಸವ ಹಾಗೂ ಈದ್ ಮಿಲಾದ್ ಹಬ್ಬಗಳನ್ನು ಶಾಂತಿ ಯುತವಾಗಿ ಆಚರಿಸುವುದರ ಮೂಲಕ ಮಹಾ ಮಂಡಳಿ ಹಾಗೂ ಯುವಕ ಸಂಘಗಳು ಪೊಲೀಸ್ ಇಲಾಖೆಗೆ ಸಹಕಾರ ನೀಡಬೇಕು ಎಂದು ಸಿ.ಪಿ.ಆಯ್ ಆನಂದರಾವ್ ಎಸ್.ಎನ್ ಹೇಳಿದರು.ಪಟ್ಟಣದ ಪೊಲೀಸ್ ಠಾಣೆಯಲ್ಲಿ ಗಣೇಶ ಚತುರ್ಥಿ ಹಾಗೂ ಈದ್ ಮಿಲಾದ್ ನಿಮಿತ್ಯವಾಗಿ ಜರುಗಿದ ಶಾಂತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪಟ್ಟಣ ಶಾಂತಿ, ಸೌಹಾರ್ದತೆಗೆ ಹೆಸರಾಗಿದೆ. ಇದನ್ನು ಮುಂದುವರೆಸಿ ಕೊಂಡು ಹೋಗುವುದರ ಜೊತೆಗೆ ಎಲ್ಲರೂ ಸರ್ಕಾರದ ನಿಯಮಾವಳಿ ಪಾಲನೆ ಮಾಡಬೇಕು. ಯಾವುದೇ ಅನಗತ್ಯ ವಿಷಯಗಳತ್ತ ಗಮನ ನೀಡದೇ, ಶಿಸ್ತು, ಸಹನೆಯಿಂದ ಹಬ್ಬಗಳ ಆಚರಣೆಗೆ ಮುಂದಾಗ ಬೇಕು ಎಂದರು.ಪಿಎಸೈ ಬಸವರಾಜ ತಿಪ್ಪಾರೆಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿ, ಪೊಲೀಸ್ ಇಲಾಖೆ ಜನ ಸ್ನೇಹಿ ಇಲಾಖೆಯಾಗಿ ಸಾರ್ವಜನಿಕರಿಗೆ ಸ್ಪಂದಿಸುತ್ತಿದೆ. ಯಾವುದೇ ಕಾರಣಕ್ಕೂ ಸಮಾಜದ ಶಾಂತಿ ಕದಡುವ ಅಹಿತಕರ ಘಟನೆಗಳಿಗೆ ಆಸ್ಪದವಿಲ್ಲ.

ಪಟ್ಟಣದ ಎಲ್ಲ ಗಣೇಶ ಮಹಾ ಮಂಡಳಿಗಳಿಗೆ ಹೆಸ್ಕಾಂ, ಪಟ್ಟಣ ಪಂಚಾಯಿತಿ ಸೇರಿದಂತೆ ಪೊಲೀಸ್ ಇಲಾಖೆಯ ಸಂಪೂರ್ಣ ಸಹಕಾರವಿದ್ದು, ಗಣೇಶ ಯುವಕ ಮಂಡಳಿಗಳು ಇಲಾಖೆಯ ನಿಯಮಾವಳಿಗಳನ್ನು ಪಾಲಿಸ ಬೇಕು ಎಂದರು.ಮಹಾ ಮಂಡಳ ಹಾಗೂ ಸಾರ್ವಜನಿಕರ ಪರವಾಗಿ ಸಿ.ಕೆ.ಕುದರಿ, ಮಹಿಬೂಬ್ ಹುಂಡೇಕಾರ, ಶಂಕರಗೌಡ ಪಾಟೀಲ, ಅಜೀಜ್ ಯಲಗಾರ ಮಾತನಾಡಿದರು.

ಮಹಿಳಾ ಪಿಎಸ್‌ಐ ಪಿ.ಎಮ್.ಚೌರ, ಪಟ್ಟಣ ಪಂಚಾಯಿತಿ ಸದಸ್ಯರಾದ ಕಾಸುಗೌಡ ಬಿರಾದಾರ ಜಲಕತ್ತಿ ಕಾಸು ಜಮಾದಾರ ನಾಮನಿರ್ದೇಶಿತ ಸದಸ್ಯರಾದ ಹುಸೇನ್ ಕೊಕಟನೂರ, ಸುನೀಲ ಕನಮಡಿ, ಸೇರಿದಂತೆ ಬಾಬುಗೌಡ ಪಾಟೀಲ ಜಿಡ್ಡಿಮನಿ, ಹುಸೇನ್ ಗೌಂಡಿ, ಕಾಸು ವಡ್ಡೋಡಗಿ, ಎಸ್.ವೈ.ನಾಯ್ಕೋಡಿ, ಬಸವರಾಜ ತಳಕೇರಿ, ಶಬ್ಬೀರ್ ಮುಲ್ಲಾ, ಎ.ಎಚ್.ಜಮಾದಾರ, ಭೀಮು ಚವ್ಹಾಣ, ಸುರೇಶ ಒಂಟೆತ್ತೀನ, ನಾಗಪ್ಪ ಬಂಡಿವಡ್ಡರ, ಪ್ರಕಾಶ ತಳಕೇರಿ, ಕಾಶೀನಾಥ ಚವ್ಹಾಣ ಸಹಿತ ಪೊಲೀಸ್ ಸಿಬ್ಬಂದಿ ಇದ್ದರು.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಭೀಮಪ್ಪ. ಹಚ್ಯಾಳ ದೇವರ ಹಿಪ್ಪರಗಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button