ವಿವಿಧ ಕಾಮಗಾರಿಗಳ ಭೂಮಿ ಪೂಜೆ ಆಶ್ವಾಸನೆ ಕೊಟ್ಟ ಮಾತಿನಂತೆ ನಡೆದು ಕೊಂಡ -ಡಾ, ಶಾಸಕ ಎನ್.ಟಿ ಶ್ರೀನಿವಾಸ್
ಗುಡೇಕೋಟೆ ಜ.18

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಗುಡೆಕೋಟೆ ವ್ಯಾಪ್ತಿಯಲ್ಲಿ ಬರುವಂತಹ ಹಾಲಸಾಗರ ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಬಹು ಮುಖ್ಯ ಬೇಡಿಕೆಗೆ ನೂತನವಾಗಿ 30 ಲಕ್ಷಗಳಲ್ಲಿ 2 ಶಾಲಾ ಕೊಠಡಿ ನಿರ್ಮಾಣಕ್ಕೆ ಭೂಮಿ ಪೂಜೆ ನೆರೆವೇರಿಸಿ ಮಕ್ಕಳ ಹಾಗೂ ಶಾಲೆಯ ಉನ್ನತ ಗುಣಮಟ್ಟದ ಶಿಕ್ಷಣ ಕುರಿತು ಮಾತನಾಡಿದರು. ಹಾಗೂ ಮಕ್ಕದ ಮಹಾದೇವಪುರ ಗ್ರಾಮದ ಡಾಕ್ಟರ್, ಬಿ.ಆರ್ ಅಂಬೇಡ್ಕರ್ ನಗರದಲ್ಲಿ ಮೂರು ತಿಂಗಳ ಹಿಂದೆಯಷ್ಟೇ ವಿಪರೀತವಾಗಿ ಮಳೆಯಿಂದ ಕೆರೆ ಕುಂಟೆ ಹೊಡೆದ ಪರಿಣಾಮ ಎಸ್ಸಿ ಕಾಲೋನಿಯ ಅನೇಕ ಮನೆಗಳಿಗೆ ನೀರು ತುಂಬಿ ಜನರ ಜೀವನ ಅಸ್ತವ್ಯಸ್ತ ಆಗಿರುವುದನ್ನು ತಿಳಿದ ಮಾನ್ಯ ಶಾಸಕರು ಗ್ರಾಮಕ್ಕೆ ಭೇಟಿ ನೀಡಿ ಹಲ್ಲಿನ ತಗ್ಗು ಪ್ರದೇಶ ಹಾಗೂ ಚರಂಡಿಗಳ ಅವ್ಯವಸ್ಥೆಯನ್ನು ಕಂಡು ಅನೇಕ ಜನರಿಗೆ ಆದಂತ ನಷ್ಟವನ್ನು ಅರಿತ ಶಾಸಕರು ಶೀಘ್ರದಲ್ಲಿ ಈ ಕಾಲೋನಿಗೆ ಸಿ.ಸಿ ರಸ್ತೆ ಹಾಗೂ ಚರಂಡಿ ವ್ಯವಸ್ಥೆಯನ್ನು ನಿರ್ಮಾಣ ಮಾಡಿದರೆ ಮುಂದಿನ ದಿನ ಮಾನಗಳಲ್ಲಿ ಪ್ರಕೃತಿ ವಿಕೋಪವನ್ನು ಎದುರಿಸಬಹುದು ಎಂದು ಅರಿತ ಶಾಸಕರು ಎಸ್ಸಿ ಕಾಲೋನಿಗೆ 96 ಲಕ್ಷದ ಸಿ.ಸಿ ರಸ್ತೆ ಹಾಗೂ ಚರಂಡಿ ಭೂಮಿ ಪೂಜೆ ನೆರವೇರಿಸಿದರು.

ಹಾಗೆ ಗುಡೆಕೋಟೆ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸುವ ನೂತನ ಶಾಲಾ ಕೊಠಡಿಗಳ ಹಾಗೂ ದುರಸ್ತಿ ಕಾಮಗಾರಿಯ 119 ಲಕ್ಷಗಳ ಭೂಮಿ ಪೂಜೆಯನ್ನು ನೆರವೇರಿಸಿದರು, ಗುಡೆಕೋಟೆಯಲ್ಲಿ ಶಿಶು ಮಕ್ಕಳಿಗಾಗಿ ಬೇಡಿಕೆಯಾದ ನೂತನ ಅಂಗನವಾಡಿ ಕೇಂದ್ರವನ್ನು 20 ಲಕ್ಷಗಳಲ್ಲಿ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದರು . ಹಾಗೆ ಕಸಪುರದಿಂದ ಗುಡೇಕೋಟೆ ಹಾಗೂ ಹಾನಗಲ್ ಮುಖ್ಯರಸ್ತೆಗೆ 54 ಲಕ್ಷಗಳಲ್ಲಿ ಡಾಂಬರೀಕರಣ ಮಾಡಲು ಭೂಮಿ ಪೂಜೆ ನೆರವೇರಿಸಿದರು. ಕೂಡ್ಲಿಗಿ ತಾಲೂಕಿನ ಅಭಿವೃದ್ಧಿಗೆ ಮುಂದಾಗಿರುವ ಶಾಸಕರನ್ನು ಕಂಡು ಪ್ರತಿ ಗ್ರಾಮಸ್ಥರು ಶಾಸಕರಿಗೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿಯ ಅಧ್ಯಕ್ಷರುಗಳು ಸದಸ್ಯರುಗಳು ಹಾಗೂ ವಿವಿಧ ಇಲಾಖೆಯ ಅಧಿಕಾರಿ ವರ್ಗದವರು ಕಾಂಗ್ರೆಸ್ ಪಕ್ಷದ ಮುಖಂಡರುಗಳು ಆಯಾ ಗ್ರಾಮದ ಮುಖಂಡರುಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರಾಘವೇಂದ್ರ ಸಾಲುಮನೆ ಕೂಡ್ಲಿಗಿ