ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ಅವಘಡ ಚಾಲಕನ ಸಮಯ ಪ್ರಜ್ಞೆಯಿಂದ ಯಾವುದೇ ಅವಘಡ ಸಂಭವಿಸಿಲ್ಲ.

ಆಯ್ಯನಹಳ್ಳಿ ಜೂನ್.15

ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನ ಕೆ ಆಯ್ಯನಹಳ್ಳಿ ದಿನಾಂಕ:15.06.2023 ರಂದು ಬೆಳಿಗ್ಗೆ 9.25 ಶಾಲೆಗೆ ಹೊರಡುವ ತರಳುಬಾಳು ವಿದ್ಯಾ ಸಂಸ್ಥೆಗೆ ಸೇರಿರುವ ತರಳಬಾಳು ಹಿರಿಯ

ಪ್ರಥಮಿಕ ಹಾಗೂ ಪ್ರೌಢಶಾಲೆ ಹುಣಸಿಕಟ್ಟಿ ಕ್ರಾಸ್, ಈ ಶಾಲೆಯ ಬಸ್ಸು ಸಮಯ ಬೆಳಗ್ಗೆ 9.40ಕ್ಕೆ ಹರಾಳು ಮತ್ತು

ಕೆ.ಅಯ್ಯನಹಳ್ಳಿ ಮಾರ್ಗ ಮಧ್ಯದಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಅವಘಡಕ್ಕೆ ತುತ್ತಾಗಿರುತ್ತದೆ ಸದರಿ ಬಸ್ ನಲ್ಲಿ 45 ಮಕ್ಕಳು ಸೇರಿದಂತೆ 3 ಜನ ಶಿಕ್ಷಕರು ಹಾಗೂ ಬಸ್ ಸಹಾಯಕ ಡ್ರೈವರ್ ನೊಳಗೊಂಡಂತೆ 50 ಜನರಿದ್ದರು. ಅವಘಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಲಾಗಿ ಎಲ್ಲಾ ಮಕ್ಕಳು ಸುರಕ್ಷಿತವಾಗಿದ್ದು, ಸಿಬ್ಬಂದಿ ಸೇರಿದಂತೆ ಯಾರಿಗೂ ಕೂಡ ಯಾವುದೇ ಅಪಾಯಗಳು ಸಂಭವಿಸಿಲ್ಲ.ಚಾಲಕನ ಮುಂಜಾಗ್ರತೆ ಹಾಗೂ ಚಾಣಾಕ್ಷತನದಿಂದ ಶಾರ್ಟ್ ಸರ್ಕ್ಯೂಟ್ ಆರಂಭದಲ್ಲಿ ಎಲ್ಲಾ ಮಕ್ಕಳನ್ನು ಕೆಳಗಿಳಿಸಿ ಮರದ ಕೆಳಗೆ ಕೂಡಿಸಿರುವುದು ಕಂಡುಬಂದಿದೆ. ಈ ಸಂದರ್ಭದಲ್ಲಿ ಬಸವರಾಜ್ ಕ್ಷೇತ್ರ ಶಿಕ್ಷಣಾಧಿಕಾರಿಗಳು ಕೂಡ್ಲಿಗಿ. ಸಿಪಿಐ,ಪಿಎಸ್ಐ ಹಾಗೂ ಅಗ್ನಿಶಾಮಕ ದಳದವರು ಸ್ಥಳದಲ್ಲಿ ಹಾಜರಿದ್ದರು. ಪೋಷಕರಿಗೆ ಆತಂಕ ಆಗಬಾರದೆಂಬ ದೃಷ್ಟಿಯಿಂದಮಕ್ಕಳಿಗೆ ಸಾಂತ್ವನ ಹೇಳಿ,ಸಿಬ್ಬಂದಿ ನೇಮಕ ಮಾಡಿ ಪುನಃ ಎಲ್ಲ ಮಕ್ಕಳನ್ನು ಸದರಿ ಸಂಸ್ಥೆಯ ಇನ್ನೊಂದು ಬಸ್ಸಿನಲ್ಲಿ ತಮ್ಮ ತಮ್ಮ ಊರುಗಳಿಗೆ ವಾಪಸ್ ಕಳುಹಿಸಲಾಯಿತು.

ತಾಲೂಕ ವರದಿಗಾರರು:ಪ್ರದೀಪ್.ಕುಮಾರ್.C. ಕೊಟ್ಟೂರು

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Your email address will not be published. Required fields are marked *

Back to top button