ಅಕ್ರಮವಾಗಿ ಪ್ರಕೃತಿ ಸಂಪತ್ತು ಲೂಟಿ ಇಲಾಖಾಧಿಕಾರಿಗಳು ಕ್ರಮ ಕೈಗೊಳ್ಳುವರೇ?…
ತರೀಕೆರೆ ಜೂನ್.24

ಮಲೆನಾಡು ಹೆಬ್ಬಾಗಿಲು ತರೀಕೆರೆ ತಾಲೂಕು, ಪ್ರಕೃತಿ ಸಂಪತ್ತಿನಿಂದ ತುಂಬಿ ತುಳುಕುತ್ತಿದೆ ಆದರೆ ಪ್ರತಿದಿನ ಅಕ್ರಮವಾಗಿ ಈ ಸಂಪತ್ತು ಕಳ್ಳರ ಪಾಲಾಗುತ್ತಿದೆ ಎಂದು ಎಮ್ ಓಂಕಾರಪ್ಪ ತಾಲೂಕು ಅಧ್ಯಕ್ಷರು ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ. ಇವರು ಇಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು. ಸುಮಾರು ಮೂವತ್ತು ಅಡಿಗಳಷ್ಟು ಆಳವಾಗಿ ಹಿಟಾಚಿ,ಜೆಸಿಬಿ, ಯಂತ್ರಗಳ ಮೂಲಕ ಪ್ರತಿನಿತ್ಯ ಸುಮಾರು 20 ಟ್ರಾಕ್ಟರ್ ಗಳಲ್ಲಿ ಮಣ್ಣನ್ನು ಅಗೆದು ಸಾಗಿಸುತ್ತಿದ್ದಾರೆ.

ಈಗಾಗಲೇ ಸುಮಾರು ಸಾವಿರಾರು ಟ್ರ್ಯಾಕ್ಟರ್ ಲೋಡುಗಳಷ್ಟು ಮಣ್ಣನ್ನು ಅಕ್ರಮವಾಗಿ ತೆಗೆದು ಸಾಗಿಸಲಾಗಿದ್ದು. ಮುಂದಿನ ದಿನಗಳಲ್ಲಿ ಮಳೆ ನೀರಿಗೆ ರಸ್ತೆ ಕುಸಿದು ಬೀಳುವ ಸಾಧ್ಯತೆ ಇರುತ್ತದೆ. ಇದರಿಂದ ಪ್ರಾಣಪಾಯ ಉಂಟಾಗುವ ಸಾಧ್ಯತೆಯೂ ಸಹ ಇದೆ ಕೂಡಲೇ ಸಂಬಂಧಪಟ್ಟ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಮತ್ತು ತಹಸಿಲ್ದಾರ್ ರವರು ಹಾಗೂ ಉಪ ವಿಭಾಗ ಅಧಿಕಾರಿಗಳು ಇತ್ತ ಗಮನ ಹರಿಸಿ ಲೂಟಿ ಆಗುತ್ತಿರುವ ಪ್ರಕೃತಿ ಸಂಪತ್ತನ್ನು ಮುಂದಿನ ಪೀಳಿಗೆಗೆ ಉಳಿಸಬೇಕು, ಅಕ್ರಮವಾಗಿ ಮಣ್ಣು ತೆಗೆಯುತ್ತಿರುವವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಹೇಳಿದರು.
ಜಿಲ್ಲಾ ವರದಿಗಾರರು:ಎನ್.ವೆಂಕಟೇಶ್.ತರೀಕೆರೆ