ಅಹಿಂದ ವರ್ಗ ಮುಖ್ಯ ವಾಹಿನಿಗೆ ಬರಲಿ – ಕುಬೇರ ದಲ್ಲಾಳಿ.
ಹೊಸಪೇಟೆ ಜನೇವರಿ.21

ಅಹಿಂದ ವರ್ಗಗಳು ಜನಸಂಖ್ಯೆಯಲ್ಲಿ ಬಹು ಸಂಖ್ಯಾತರಾಗಿದ್ದಾರೆ. ಆದರೆ, ರಾಜಕೀಯ, ಸಾಮಾಜಿಕವಾಗಿ ಬಹಳ ಹಿಂದುಳಿದಿದ್ದಾರೆ. ಈ ವರ್ಗಗಳಿಗೆ ಎಲ್ಲಾ ರೀತಿಯ ಸವಲತ್ತು ಸಿಕ್ಕು ಮುಖ್ಯ ವಾಹಿನಿಗೆ ಬರಬೇಕು ಅಹಿಂದ ತಾಲೂಕಾ ಅಧ್ಯಕ್ಷ ಕುಬೇರ ದಲ್ಲಾಳಿ ತಿಳಿಸಿದರು.ಹೊಸಪೇಟೆಯ ಹಂಪಿ ರೋಡಿನಲ್ಲಿರುವ ಕುರುಬರ ಸಂಘದಲ್ಲಿ ಭಾನುವಾರ ನಡೆದ ಅಹಿಂದ ಯುವ ವೇದಿಕೆಯ 23.ನೇ ವಾರ್ಡ್ ಘಟಕ ಅಧ್ಯಕ್ಷಜಿ ಹನುಮಂತ. ಕಾರಿಗನೂರು. ಇವರಿಗೆಆದೇಶ ಪತ್ರವನ್ನು ವಿತರಿಸುತ್ತಾ ಅವರು ಮಾತನಾಡಿದರು. ರಾಜಕೀಯ ಅಧಿಕಾರ ಇಲ್ಲದೆ ಏನೂ ಮಾಡಲು ಸಾಧ್ಯವಿಲ್ಲ. ರಾಜಕೀಯ ಪ್ರಜ್ಞೆ ಬೆಳೆಸಿ ಕೊಳ್ಳಬೇಕು. ಮುಂಬರುವ ತಾಲೂಕ ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಚುನಾವಣೆಗಳಲ್ಲಿ ಅಹಿಂದ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಸ್ಪರ್ಧಿಸಬೇಕು ಎಂದು ತಿಳಿಸಿದರು.ಸರಕಾರದ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳಿಗೆ ದೊರಕಿಸುವಲ್ಲಿ ನಿಸ್ವಾರ್ಥ ಸೇವೆ, ಹಿಂದುಳಿದ, ಅಸಂಖ್ಯಾತ, ದಲಿತ ಹಾಗೂ ಇತರೆ ದುರ್ಬಲ ಸಮುದಾಯಗಳಿಗೆ ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯ ಜಾಗೃತಿಗಾಗಿ ಈ ಸಂಘಟನೆ ಕಾರ್ಯ ನಿರ್ವಹಿಸಲಿದೆ ಎಂದರು.ಜಾತಿಭೇದ ಮರೆತು ಎಲ್ಲರೂ ಒಂದೇ ಎಂಬ ಭಾವನೆಯಿಂದ ಬದುಕಬೇಕು. ಅಲ್ಪಸಂಖ್ಯಾತರು, ಹಿಂದುಳಿದವರು, ಪರಿಶಿಷ್ಟ ಜಾತಿಯವರು ಒಗ್ಗಟ್ಟಾಗಿ ಅವರ ಹಕ್ಕುಗಳನ್ನು ಪಡೆಯಬೇಕು. ದೌರ್ಜನ್ಯ ನಡೆದಾಗ ಅದರ ವಿರುದ್ಧ ಧ್ವನಿ ಎತ್ತಬೇಕು ಎಂದು ಹೇಳಿದರು. ಈ ದೃಷ್ಟಿಯಿಂದ ಯುವಕರಲ್ಲಿ ಜಾಗೃತಿ ಮೂಡಿಸಿ, ಸಂಘಟಿತರನ್ನಾಗಿಸುವ ಮೂಲಕ ಸಾಮಾಜಿಕ ಕಾರ್ಯಗಳಲ್ಲಿ ಕ್ರಿಯಾಶೀಲರನ್ನಾಗಿಸಲು ಯುವ ಅಹಿಂದ ವೇದಿಕೆ ಕಾರ್ಯನಿರ್ವಹಿಸಲಿದೆ. ಅಹಿಂದ ನಾಯಕ ಸಿದ್ದರಾಮಯ್ಯನವರು ರಾಜ್ಯದ ಮುಖ್ಯಮಂತ್ರಿಯಾದ ಮೇಲೆ ಶಾಶ್ವತ ಹಿಂದುಳಿದ ವರ್ಗಗಳ ಆಯೋಗ ರಚಿಸಿ ಸಮೀಕ್ಷೆ ನಡೆಸಿದ್ದಾರೆ. ಆಯೋಗದ ವರದಿಯನ್ನು ಜಾರಿಗೆ ತರುವುದು ಸರ್ಕಾರದ ಕರ್ತವ್ಯ ಎಂದು ಒಪ್ಪಿಕೊಂಡಿರುವ ಸಿದ್ದರಾಮಯ್ಯನವರ ಕೈಬಲಪಡಿಸುವುದು ಹಿಂದುಳಿದ ಜಾತಿ ವರ್ಗಗಳ ಜವಾಬ್ದಾರಿ ಅಹಿಂದ ಯುವ ವೇದಿಕೆ ಇನ್ನೂ ಹೆಚ್ಚು ಹೆಚ್ಚು ಬೆಳೆಯಬೇಕು ಎಂದು ಹೇಳಿದರು.ಅಹಿಂದ ಗೌರವ ಅಧ್ಯಕ್ಷರಾದ ಆರ್. ಚೇತನ್ ರಾಜ್ ಅವರ ಹುಟ್ಟು ಹಬ್ಬ ಅಂಗವಾಗಿ ಬೆಡ್ ಶೀಟ್ ಗಳನ್ನು ಎಲ್ಲಾ ಪದಾಧಿಕಾರಿಗಳಿಗೂ ವಿತರಿಸಲಾಯಿತು..ಈ ಸಂದರ್ಭದಲ್ಲಿ ತಿಮ್ಮಣ್ಣ ಮಾಜಿ ಗ್ರಾಮ ಪಂಚಾಯತಿ ಸದಸ್ಯರು. ಬಿಸಾಟಿ ತಾಯಪ್ಪ ಸಮಾಜದ ಯುವ ಮುಖಂಡರು. ಕೇಶವ. ಬಸವರಾಜ್. ಪಿ. ದಮ್ಮೂರ್ ಮಂಜುನಾಥ್ ಗಂಟೆ ಉಮೇಶ್. ಅಹಿಂದ ಮಹಿಳಾ ಘಟಕ ದಿಲ್ ಶದ್. ಶ್ರೀದೇವಿ ಲಕ್ಷ್ಮಕ್ಕ, ಅಂಜಿನಪ್ಪ, ಕಾಕ್ ಬಾಳ್, ಜೆಡಿಯಪ್ಪ ತಾರಾ ಭಾಷೆ ಲೋಕೇಶ್ ಇತರರಿದ್ದರು.
ತಾಲೂಕ ವರದಿಗಾರರು:ಮಾಲತೇಶ್.ಶೆಟ್ಟರ್.ಹೊಸಪೇಟೆ