ಪ್ರಾಮಾಣಿಕ ಶಿಕ್ಷಕ ವೃತ್ತಿಗೆ ನಿವೃತ್ತಿಯೇ ಇಲ್ಲ — ಗ್ರಂಥಾಲಯ ಮಲ್ವಿಚಾರಕ ಸಂಘ ತಾಲೂಕ ಅಧ್ಯಕ್ಷ ಮುರುಗೇಶ್.
ನಾಗೇನಹಳ್ಳಿ ಜೂನ್.30

ಕೊಟ್ಟೂರು ನಮ್ಮ ದೇಶದಲ್ಲಿ ಶಿಕ್ಷಕ ವೃತ್ತಿ ಪವಿತ್ರವಾದದ್ದು ಇದನ್ನು ಪ್ರತಿ ಒಬ್ಬರು ಗೌರವಿಸುತ್ತಾರೆ ಇದರಲ್ಲೂ ಪ್ರಾಮಾಣಿಕ ಶಿಕ್ಷಕ ವೃತ್ತಿಗೆ ನಿವೃತ್ತಿಯೇ ಇಲ್ಲ ಎಂದು ಮೇಲ್ವಿಚಾರಕರ ಸಂಘದ ಅಧ್ಯಕ್ಷ ಮುರುಗೇಶ್ ರವರು ಹೇಳಿದರು ತಾಲೂಕಿನ ಅಂಬಳಿ ಗ್ರಾಮದ ಕೊಟ್ರಪ್ಪ ಎಂಬ ಶಿಕ್ಷಕಕರು ತಾಲೂಕಿನ ನಾಗೇನಹಳ್ಳಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಶುಕ್ರವಾರ ತಮ್ಮ ನಿವೃತ್ತಿ ಪಡೆಯಲಿದ್ದಾರೆ.

ಇವರು ಸದಾ ಚೈತನ್ಯಶೀಲ ವ್ಯಕ್ತಿತ್ವ, ವಿದ್ಯಾರ್ಥಿಗಳ ಸ್ಪೂರ್ತಿ, ಪಠ್ಯ ಪಠ್ಯೇತರ ಚಟುವಟಿಕೆಗಳಿಗೆ ಪ್ರಾಶಸ್ತ ನೀಡುತ್ತಿದ್ದ ಶಿಕ್ಷಕರೆಂದು ಗುರುತಿಸಿಕೊಂಡವರು ಇವರ ಸೇವಾ ನಿವೃತ್ತಿ ಸುಖ ಶಾಂತಿ, ಆರೋಗ್ಯದಿಂದ ಕೂಡಿರಲೆಂದು ಎಲ್ಲಾ ಶಿಕ್ಷಕರ ಆಶಯವಾಗಿದೆ.
ತಾಲೂಕ ವರದಿಗಾರರು:ಪ್ರದೀಪ್. ಕುಮಾರ್. ಸಿ ಕೊಟ್ಟೂರು