ಅತಿಥಿ ಶಿಕ್ಷಕರ ಸೇವೆ ಪರಿಗಣಿಸಲು ಮನವಿ.

ಇಂಡಿ ಜೂನ್.4

ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಕಳೆದ 10 ವರ್ಷದಿಂದ ಸೇವೆ ಸಲ್ಲಿಸುತ್ತಿರುವ ಶಿಕ್ಷಕರಿಗೆ ಮೊದಲ ಆದ್ಯತೆ ನೀಡಬೇಕೆಂದು ಇಂಡಿ ತಾಲೂಕು ಅತಿಥಿ ಶಿಕ್ಷಕರ ಸಂಘದ ಪದಾಧಿಕಾರಿಗಳು ಕ್ಷೇತ್ರಶಿಕ್ಷಣಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು. ಅತಿಥಿ ಶಿಕ್ಷಕರು ಕಳೆದ ಹತ್ತು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದು ಮತ್ತು ಖಾಯಂ ಶಿಕ್ಷಕರಂತೆಯೇ ಅತಿಥಿ ಶಿಕ್ಷಕರು ಕೆಲಸ ನಿರ್ವಹಿಸುತ್ತಿದ್ದು ಖಾಯಂ ಶಿಕ್ಷಕರಿಗೆ ನೀಡುವ ಸಂಬಳ ಅತಿಥಿ ಶಿಕ್ಷಕರಿಗೆ ನೀಡಬೇಕು.ಈಗಾಗಲೇ ಹೈಕೋರ್ಟು ಸಮಾನ ಕೆಲಸಕ್ಕೆ ಸಮಾನ ವೇತನ ನೀಡಲು ಆದೇಶಿಸಿದ್ದು ಕೋರ್ಟು ಆದೇಶ ಜಾರಿಗೆ ಬರಬೇಕು.ಅತಿಥಿ ಶಿಕ್ಷಕರಿಗೆ ಸೇವಾ ಭದ್ರತೆ ಒದಗಿಸಬೇಕು. ಮತ್ತು ಕಳೆದ ಹತ್ತು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವವರನ್ನು ಖಾಯಂ ಗೊಳಿಸಬೇಕೆಂದು, ವರ್ಷದ ೧೨ ತಿಂಗಳು ಸಂಬಳ ನೀಡಬೇಕು,ಮಹಿಳೆಯರಿಗೆ ವಿಶೇಷ ರಜೆ ನೀಡಬೇಕು,ಖಾಯಂ ಶಿಕ್ಷಕರ ಹಾಜರಾತಿಯಲ್ಲಿ ಸಹಿ ಮಾಡಿಸುವದು ಸೇರಿದಂತೆ ಹಲವಾರು ಬೇಡಿಕೆ ಆಗ್ರಹಿಸಿ ಮನವಿ ಸಲ್ಲಿಸಿದರು.ಇಂಡಿ ತಾಲೂಕಾ ಅತಿಥಿ ಶಿಕ್ಷಕರ ಸಂಘದ ಅಧ್ಯಕ್ಷ ರಾಘವೇಂದ್ರ ಕುಮಸಗಿ,ರಾಜ್ಯ ಸಂಚಾಲಕ ಎಸ್.ಆರ್.ಪಾಟೀಲ,ಜಿಲ್ಲಾ ಅಧ್ಯಕ್ಷ ಡಿ.ಎಂ.ಕಲಕೇರಿ,ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಎಸ್.ಹೊಸೂರ, ಗಂಗಪ್ಪ ಹರಿಜನ, ಸತೀಶ ಕಾಳೆ,ಶ್ರೀಮತಿ ಜ್ಯೋತಿ ಕುಂಬಾರ,ನೀಲಾಂಬಿಕೆ ಗುರಕಾರ,ಮಹಾಂತಪ್ಪ ಹೊಸುರ ಶ್ರೀಮತಿ ಸುನಿತಾ ಪೂಜಾರಿ.ಕುಬೇರ ಜಾಗಿರದಾರ.ಸವಿತಾ ಸಾತಲಗಾಂವ.ಪ್ರವೀಣಕುಮಾರ ವಾಗಮೊರೆ.ಪ್ರವೀಣ ಮನಮಿ.ಶ್ರೀಮತಿ ಶಿವಲಿಲಾ ಮಾಶ್ಯಾಳ.ಶರಣು ಬಿರಾದಾರ. ಸೇರಿದಂತೆ ಅತಿಥಿ ಶಿಕ್ಷಕ ಶಿಕ್ಷಕಿಯರು ಉಪಸ್ಥಿತರಿದ್ದರು.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button