ಕ್ರೈಸ್ತ ದಿನಾಚರಣೆ ಅಂಗವಾಗಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ವಿತರಣೆ

ತರೀಕೆರೆ ಜುಲೈ.3

ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ರೋಗಿಗಳಿಗೆ ಯುನೈಟೆಡ್ ಕ್ರಿಶ್ಚಿಯನ್ ಫಿಲೋಶಿಪ್ ತರೀಕೆರೆ ಇವರ ವತಿಯಿಂದ ಭಾರತೀಯ ಕ್ರಿಸ್ತ ದಿನಾಚರಣೆಯನ್ನು ಆಚರಿಸಲಾಯಿತು. ಇದರ ಅಂಗವಾಗಿ ಇಂದು ತರೀಕೆರೆಯ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಕ್ರಿಶ್ಚಿಯನ್ ಸಮುದಾಯದ ವತಿಯಿಂದ ಹಣ್ಣುಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಫಾಸ್ಟರ್ ಫಿಲೋಶಿಪ್ ಮಾತನಾಡಿ, ಪ್ರಪಂಚದಲ್ಲಿ ಕ್ರಿಶ್ಚನ್ ಸಮುದಾಯ ಸಾರ್ವಜನಿಕರಿಗೆ ನೊಂದವರಿಗೆ ಮತ್ತು ಬಡತನದ ರೇಖೆಯಿಂದ ಕೆಳಗಿರುವವರನ್ನು ಎಲ್ಲರನ್ನೂ ಕೂಡ ಸಮಾನವಾಗಿ ಕಾಣಬೇಕು ಮತ್ತು ಅವರನ್ನು ಗೌರವಿಸಬೇಕು ಎಂದು ಯೇಸು ಕ್ರಿಸ್ತನು ಪ್ರಪಂಚದಲ್ಲಿ ಐದು ಜನ ಪ್ರಮುಖರನ್ನು ಹುಟ್ಟು ಹಾಕಿ ಲೋಕ ಕಲ್ಯಾಣಕ್ಕಾಗಿ ಕೆಲಸ ಮಾಡಬೇಕು ಎಂದು ನಿರ್ದೇಶಿಸಿದರು. ಅವರ ಆಜ್ಞೆಯಂತೆ ಎಲ್ಲರೂ ಕೂಡ ಸಮಾನ ಮನಸ್ಸಿನವರು ಜನರಲ್ಲಿ ಬೇಧ ಭಾವ ಬರಕೂಡದು ಭಾರತದಲ್ಲಿ ಹುಟ್ಟಿರುವ ನಾವೆಲ್ಲರೂ ಪುಣ್ಯವಂತರು ಈ ದೇಶದಲ್ಲಿ ಪ್ರತಿಯೊಂದು ವರ್ಗ ಸಮುದಾಯದವರು ಇದ್ದು ಅವರೊಂದಿಗೆ ನಾವು ಸಹಬಾಳ್ವೆಯಿಂದ ಜೀವನ ನಡೆಸಿಕೊಂಡು ಹೋಗುತ್ತಿದ್ದೇವೆ ಎಂದು ಮಿಷನ್ ಜಿ ಎಸ್ ಜಾನ್ ನುಡಿದರು. ಇದೇ ಸಂದರ್ಭದಲ್ಲಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಯಾದ ಡಾ. ದೇವರಾಜ್ ಮಾತನಾಡಿ ಸಾರ್ವಜನಿಕ ಆಸ್ಪತ್ರೆ ಎಲ್ಲಾ ವರ್ಗದವರಿಗೂ ಸೇರಿದ್ದು ಇಲ್ಲಿ ಜಾತಿಭೇದ ಭಾವನೆ ಇರುವುದಿಲ್ಲ ಯಾರೇ ರೋಗಿಗಳು ಬಂದರೂ ಅವರನ್ನು ಪ್ರೀತಿಯಿಂದ ಉಪಚರಿಸಿ ಅವರನ್ನು ಗುಣಪಡಿಸುವ ಕಾರ್ಯ ನಮ್ಮದು ಪ್ರಪಂಚದಲ್ಲಿ ಶ್ರೀರಾಮ ಮತ್ತು ಯೇಸುವನ್ನು ಪ್ರೀತಿಯಿಂದ ಜನ ಕಾಣುತ್ತಾರೆ ಆದರೆ ಹಿಟ್ಲರ್ ನನ್ನು ಯಾರು ಕೂಡ ದೇವರೆಂದು ಕಾಣಲು ಸಾಧ್ಯವಿಲ್ಲವೆಂದು ನುಡಿದರು. ಕ್ರಿಶ್ಚಿಯನ್ ಸಮುದಾಯದವರಿಂದ ಆಸ್ಪತ್ರೆಯಲ್ಲಿರುವ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಿ, ವೈದ್ಯಾಧಿಕಾರಿಯಾದ ಡಾ. ದೇವರಾಜ್ ರವರನ್ನು ಸನ್ಮಾನಿಸಲಾಯಿತು. ಈ ಕಾರ್ಯಕ್ರಮದಲ್ಲಿ ಬೀಷಪ್ ಜಾನ್, ಫಾಸ್ಟರ್ ಪೋಲೊಸ್, ಮಂಜುನಾಥ್, ದೇವರಾಜ್, ಟಿ ಎನ್ ಜಗದೀಶ್, ಇತರರು ಉಪಸ್ಥಿತರಿದ್ದರು. ಜಿಲ್ಲಾ

ವರದಿಗಾರರು:ಎನ್.ವೆಂಕಟೇಶ್.ತರೀಕೆರೆ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button