ಸಿದ್ದಯ್ಯನ ಕೋಟೆ ಚಿತ್ತರಗಿ ಶ್ರೀ ವಿಜಯ ಮಹಾಂತೇಶ್ವರ ಶಾಖಾ ಮಠದಲ್ಲಿ ಗುರು ವಂದನ ಕಾರ್ಯಕ್ರಮ ನಡೆಸಲಾಯಿತು.
ಸಿದ್ದಯ್ಯನ ಕೋಟೆ ಜುಲೈ.4

ನಿನ್ನೆ ಮೊಳಕಾಲ್ಮೂರು ತಾಲೂಕ ಸಿದ್ದಯ್ಯನ ಕೋಟೆಯ ಚಿತ್ತರಗಿ ಶ್ರೀ ವಿಜಯ ಮಹಾಂತೇಶ್ವರ ಶಾಖಾ ಮಠದಲ್ಲಿ ಗುರುಪೂರ್ಣಮಿ ಕಾರ್ಯಕ್ರಮದ ಅಂಗವಾಗಿ ಶ್ರೀಮಠದ ವಿದ್ಯಾರ್ಥಿಗಳಿಂದ ಗುರುಗಳಿಗೆ ಪಾದ ಪೂಜೆ ಮಾಡುವ ಮೂಲಕ ಗುರುವಂದನೆಯನ್ನು ಸಲ್ಲಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಶ್ರೀಮಠದ ಸದ್ಭಕ್ತರಾದ ಬಿ. ಎಸ್. ವಿಜಯೇಂದ್ರ ಉದ್ಯಮಿಗಳು ಬೆಂಗಳೂರು ಜೀವ ರತ್ನಮ್ಮ ಸಮಾಜಸೇವಕರು ಬೆಂಗಳೂರು ಶ್ರೀಮಠದ ಕಾರ್ಯದರ್ಶಿ ಪಿ.ಆರ್. ಕಾಂತರಾಜ್ ಶ್ರೀಮಠದ ಶಾಲೆಯ ಶಿಕ್ಷಕರಾದ ತಿಪ್ಪೇಸ್ವಾಮಿ ಪಿ. ಮಹಾಂತೇಶ್ ಆರ್. ವಿ ಮಂಜುನಾಥ್ ನೀಲಕಂಠ ಎಚ್ ಜಡಿಯಪ್ಪ ಇನ್ನು ಅನೇಕ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಾರ್ಥನೆಯನ್ನು ಸಲ್ಲಿಸಿದರು ಕಾರ್ಯಕ್ರಮದಲ್ಲಿ ಭಾಗವಹಿಸಿದ ಪೂಜ್ಯರು ಆಶೀರ್ವಚನ ನೀಡುತ್ತಾ ಅರ ಮುನಿದರು ಗುರು ಕಾಯಬಲ್ಲ ಎಂಬ ಶರಣರ ಸಂದೇಶದಂತೆ ಗುರುವಿನ ಮಾರ್ಗದರ್ಶನ ನಿರಂತರವಾಗಿ ಪಡೆಯುವ ಮೂಲಕ ಉತ್ತಮವಾದ ಸಂಸ್ಕಾರವನ್ನ ಪಡೆಯಬೇಕು ಜೊತೆಯಲ್ಲಿ ನಿಮ್ಮ ಜೀವನ ಉದ್ದಕ್ಕೂ ಗುರುವಿನ ನೆನೆದು ಮುಂದೆ ಗುರಿ ಹಿಂದೆ ಗುರು ಯಾವಾಗಲೂ ಇರುತ್ತದೆ ಅದೇ ರೀತಿಯಾಗಿ ಯಾರಿಗೆ ಆಗಲಿ ಗುರುವಿನ ಬಲ ಇದ್ದರೆ ಮಾತ್ರ ಎಲ್ಲಾ ಕೆಲಸಗಳು ಸುಗಮವಾಗಿ ಸಾಗುತ್ತವೆ ಗುರುಬಲಕ್ಕಿಂತ ದೊಡ್ಡಬಲ ಯಾವುದು ಇಲ್ಲ ಶ್ರೇಷ್ಠ ಎಂದರೆ ಅದೇ ಗುರುವಿನ ಬಲ ಎಂದು ತಿಳಿಯಬೇಕು ಹಾಗಾಗಿ ಶ್ರೀಮಠದಲ್ಲಿ ಹಮ್ಮಿಕೊಂಡಿರುವ ಗುರುಪೂರ್ಣಮಿ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ತಮ್ಮೆಲ್ಲರಿಗೂ ಶರಣು ಶರಣಾರ್ಥಿಗಳು ಎಂದು ವರದಿಯಾಗಿದೆ.
ತಾಲೂಕ ವರದಿಗಾರರು:ತಿಪ್ಪೇಸ್ವಾಮಿ.ಹೊಂಬಾಳೆ. ಮೊಳಕಾಲ್ಮೂರು