ಮಾರನಬಸರಿಯಲ್ಲಿ ಅಯ್ಯಾಚಾರ ಹಾಗೂ ಸಿದ್ದಶ್ರೀ ಆಲ್ಬಂಸಾಂಗ್ ಚಿತ್ರೀಕರಣ.
ಸಿದ್ದನಕೊಳ್ಳ ಜುಲೈ.9

ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಮಾರನಬಸರಿ ಗ್ರಾಮದಲ್ಲಿ ಸಿದ್ಧನಕೊಳ್ಳದ ಸಿದ್ದಪ್ಪಜ್ಜನ ಮಠದ ಧರ್ಮಾಧಿಕಾರಿಗಳಾದ ಡಾ. ಶಿವಕುಮಾರ್ ಮಹಾಸ್ವಾಮಿಗಳವರ ಸುಪುತ್ರರಾದ ಶ್ರೀ ರಾಜಶೇಖರಯ್ಯ ಮತ್ತು ಹರ್ಷ ಇವರ ಅಯ್ಯಾಚಾರ ಕಾರ್ಯಕ್ರಮ ಜೊತೆಗೆ ಭಕ್ತಿಗೀತೆಯ ಆಲ್ಬಂ ಸಾಂಗ್ ಚಿತ್ರೀಕರಣ ದಿ. ೧೨ ರಂದು ನೆರವೇರಲಿದೆ ಎಂದು ಡಾ.ಶಿವಕುಮಾರಸ್ವಾಮಿಗಳು ತಿಳಿಸಿದರು. ಸಿದ್ದನಕೊಳ್ಳದಲ್ಲಿ ಜಾತ್ರಾಮಹೋತ್ಸವದ ವೀಡಿಯೋ ಆಲ್ಬಂಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು ಸಿದ್ದನಕೊಳ್ಳ ಮಠದ ಶ್ರೀಗಳ ಜನ್ಮಸ್ಥಳವಾದ ಮಾರನಬಸರಿ ಗ್ರಾಮವು ಸಿದ್ದಪ್ಪಜ್ಜ ಶ್ರೀಗಳು ನಡೆದಾಡಿದ ಪುಣ್ಯ ಸ್ಥಳವಾಗಿದೆ. ಪ.ಪೂ. ಶ್ರೀ ಅಭಿನವ ಚನ್ನಬಸವ ಮಹಾಸ್ವಾಮಿಗಳು ನಿಡಗುಂದಿ ಕೊಪ್ಪಸಾನಿಧ್ಯ ವಹಿಸುವರು. ನೇತೃತ್ವವನ್ನು ಪೂಜ್ಯಶ್ರೀ ಅಭಿನವ ಕಾಡಸಿದ್ದೇಶ್ವರ ಮಹಾಸ್ವಾಮಿಗಳು ಮುರುಡಿಮಠ ಗುಳೇದಗುಡ್ಡ , ಅಧ್ಯಕ್ಷತೆಯನ್ನು ವಿ.ಎಸ್.ಅರಳಲಿ ಮಠ ತಳಕಲ್ ಧಾರವಾಡ, ಉದ್ಘಾಟನೆಯನ್ನು ರೋಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಜಿ.ಎಸ್.ಪಾಟೀಲ್ ಹಾಗೂ ದಂಪತಿಗಳು ನೆರವೇರಿಸುವರು. ಹುನಗುಂದದ ಶಾಸಕರಾದ ವಿಜಯಾನಂದ ಎಸ್ ಕಾಶಪ್ಪನವರ ಕಾರ್ಯಕ್ರಮಕ್ಕೆ ಚಾಲನೆ ನೀಡುವರು. ಸಿ ಎಸ್ ನಾಡಗೌಡ , ಎನ್.ಎಚ್. ಕೋನರೆಡ್ಡಿ, ಭೀಮಸೇನ್, ಚಿಮ್ಮನಕಟ್ಟಿ, ದೊಡ್ಡನಗೌಡ ಪಾಟೀಲ್ ಇವರು ಜ್ಯೋತಿ ಬೆಳಗಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ರಾಷ್ಟ್ರೀಯ ಕಿಸಾನ್ ಸಮಿತಿ ನಿರ್ದೇಶಕರು ಹಾಗೂ ಕಾರ್ಯದರ್ಶಿಗಳಾದ ಡಾ.ಆರ್ ಎಸ್ ರಾಜು, ಡಾ.ಬಾಲಕೃಷ್ಣ ರೆಡ್ಡಿ, ನರೇಂದ್ರ ರೆಡ್ಡಿ, ಸುರೇಶ್ ಹಳೆಪೇಟೆ ಮಲ್ಲು ವಿರಾಪುರ ಇನ್ನು ಹಲವು ಗಣ್ಯರು ಭಾಗವಹಿಸಲಿದ್ದಾರೆ , ಈ ಕಾರ್ಯಕ್ರಮಕ್ಕೆ ತೆಲುಗು ಚಿತ್ರನಟ ರಾಜೇಶ್ ಕುಮಾರ್ ಆಗಮಿಸಲಿದ್ದಾರೆ. ಕಾರ್ಯಕ್ರಮದ ಅಂಗವಾಗಿ ಪ್ರಮೋದ್ ಡ್ಯಾನ್ಸ್ ಅಕಾಡೆಮಿ ಉಗಾರ್ ಸಾಂಗ್ಲಿ ಇವರಿಂದ ನೃತ್ಯ, ಕಲಾವಿದ ಮೆಲೋಡಿಸ್ ಐಹೊಳೆ ಇವರಿಂದ ರಸಮಂಜರಿ ,ಚಿತ್ರ ನಟಿ ಕೃತಿಕಾ ದಯಾನಂದ್ ಬೆಂಗಳೂರು ಇವರಿಂದ ಭರತನಾಟ್ಯ ಜರುಗಲಿದೆ. ದಿ.೧೨ ರಿಂದ ದಿ.೧೪ರವರೆಗೆ ಭಕ್ತಿಗೀತೆಯ ಆಲ್ಬಂಸಾಂಗ್ ಚಿತ್ರೀಕರಣ ನಡೆಯಲಿದ್ದು ಸಕಲ ಸದ್ಭಕ್ತರು ಆಗಮಿಸಬೇಕೆಂದು ಸಿದ್ದನಕೊಳ್ಳ ಮಠದ ಧರ್ಮಾಧಿಕಾರಿಗಳಾದ ಡಾ.ಶಿವಕುಮಾರ್ ಮಹಾಸ್ವಾಮಿಗಳು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಚಲನಚಿತ್ರ ನಟ, ಕಲಾನಿರ್ದೇಶಕ ವೀರೇಶ ಪುರವಂತರ, ಚಲನಚಿತ್ರ ಛಾಯಾಗ್ರಾಹಕ ಶಿವಶರಣ ಸುಗ್ನಳ್ಳಿ ,ಚಲನಚಿತ್ರ ಪಿಆರ್ಓ ಡಾ.ಪ್ರಭು ಗಂಜಿಹಾಳ, ಕಲಾವಿದರಾದ ಸಂಗನಗೌಡ್ರ ಕುರುಡಗಿ ಮೊದಲಾದವರು ಉಪಸ್ಥಿತರಿದ್ದರು.
ಡಾ.ಪ್ರಭು ಗಂಜಿಹಾಳ