ಬ್ರಿಜ್ – ಕಂ – ಬಾಂಧಾರಗಳಲ್ಲಿ ಅನಾಥವಾಗಿ ಬಿದ್ದಿರುವ ಕಬ್ಬಿಣದ ಗೇಟುಗಳು ಸರ್ಕಾರದ ನೂರಾರು ಲಕ್ಷ ಹಣ ಹಾಳು ಯಾರು ಹೊಣೆ?.

ಹುನಗುಂದ ಜುಲೈ.13

ಮತಕ್ಷೇತ್ರ ಅನಾದಿಕಾಲದಿಂದಲು ಕೃಷಿ ಕ್ಷೇತ್ರಕ್ಕೆ ರೈತಾಪಿ ವರ್ಗ ಪ್ರಾಧಾನ್ಯತೆಯನ್ನು ಕೊಡುತ್ತಲೆ ಬಂದಿರುವರು ಕೊಡುತಲೆ ಇರುವರು. ನಗರ ಪ್ರದೇಶದ ರೈತಾಪಿ ವರ್ಗದ ಜಮೀನುಗಳು ಹಾಗೂ ಗ್ರಾಮೀಣ ಪ್ರದೇಶದ ರೈತಾಪಿ ವರ್ಗದ ಜಮೀನುಗಳು ಇರುವದು ಸತ್ಯ ಅಂದಿನಕಾಲದಲ್ಲಿ ರೈತಾಪಿ ವರ್ಗದವರು, ತಮ್ಮ ತಮ್ಮ ಹೊಲಗಳಿಗೆ ಹೋಗುವಾಗ ಮತ್ತು ಬರುವರೆಗೆ ತಮ್ಮ ದನ-ಕರುಗಳಿಗೆ ಹಳ್ಳ-ಕೊಳ್ಳಗಳಲ್ಲಿ ನೀರು ಕುಡಿಸುತ್ತಿದ್ದರು. ಕ್ರಮೇಣ ಕಾಲಗತಿಸಿದಂತೆ ಸರಕಾರದ ಯೋಜನೆಗಳು ಮತಕ್ಷೇತ್ರದಲ್ಲಿ ಪ್ರವೇಶ ಮಾಡಿದವು ಅವುಗಳಲ್ಲಿ ಪ್ರಮುಖವಾದ ರೈತ ವರ್ಗಕ್ಕೆ ಅನುಕೂಲಕರವಾದ ಬ್ರಿಜ್-ಕಂ-ಬ್ಯಾರೇಜ್ ಮತ್ತು ಬ್ರಿಜ್ ಕಂ-ಬಾಂದಾರ, ಯಾವ ರೀತಿಯಲ್ಲಿ ಕಾರ್ಯರೂಪಕ್ಕೆ ಬಂದಿರುವುದನ್ನು ನೋಡಲೆಬೇಕಾದರೆ ಹುನಗುಂದ ಮತಕ್ಷೇತ್ರಕ್ಕೆ ಭೇಟಿ ಕೊಡಲೆಬೇಕು ಮತಕ್ಷೇತ್ರದಲ್ಲಿ ಅತೀ ಕಡಿಮೆ ಎಂದರೂ ನೂರಾರು ಬ್ರಿಜ್-ಕಂ-ಬ್ಯಾರೇಜ್ ಬ್ರಿಜ್ ಕಂ-ಬಾಂಧಾರಗಳನ್ನು ಸಂಬಂಧಿಸಿದ ಇಲಾಖೆಗಳು ಮಾಡಿರುವರು ಒಂದು ಬ್ರಿಜ್-ಕಂ-ಬ್ಯಾರೇಜ್ ನಿರ್ಮಾಕ್ಕೆ ಅಂದಾಜು ಖರ್ಚು ಅರವತ್ತು ಲಕ್ಷದಿಂದ ಒಂದು ಕೋಟಿ ಎರಡು ಕೋಟಿ, ಅಧಿಕ ಹಣವನ್ನು ಖರ್ಚು ಮಾಡಲಾಗಿದೆ, ಬ್ರಿಜ್-ಕಂ-ಬ್ಯಾರೇಜ್ ಮಾಡುವ ಉದ್ದೇಶ ಯಾವ ಸ್ಥಳದಲ್ಲಿ ನಿರ್ಮಿಸಿದರೆ ಆ ಸ್ಥಳದಲ್ಲಿ ರೈತರು ಹೊಲಗಳಿಂದ ಮಳೆಗಾಲದಲ್ಲಿ ಬೆಳೆಗಳಲ್ಲಿ ಅಪಾರ ಪ್ರಮಾಣ ನೀರು ಹರಿದು ಬರುವುದು ಪ್ರಕೃತಿಯ ನಿಯಮ ಈ ನೀರನ್ನು ಸ್ವಲ್ಪ ಪ್ರಮಾಣದಲ್ಲಿಯಾದರೂ ಸಂಗ್ರಹವಾಗಿರಲೆಂದು ಈ ಸಂಗ್ರಹವು ನೀರು ಬೇಸಿಗೆಯ ಸಮಯದಲ್ಲಿ ಜನ ಜಾನುವಾರಗಳು-ಪಕ್ಷಿಗಳಿಗೆ ಉಪಯೋಗವಾಗುವುದರ ಜೊತೆಗೆ ಬ್ರಿಜ್-ಕ-ಬಾಂದಾರ ಮೇಲೆ ಸುರಕ್ಷಿತವಾಗಿ ರೈತರು ತಮ್ಮ ತಮ್ಮ ಊರುಗಳಿಗೆ ಬೇಗನೆ ತಲುಪಲು ಅನಕೂಲವಾಗಲೆಂದು ನಿರ್ಮಾಣ ಮಾಡಿರುವ ಉದ್ದೇಶ ಆದರೆ ಪ್ರತಿಯೊಂದು ಬ್ರಿಜ್-ಕಂ-ಬ್ಯಾರೇಜ್ ಗಳ ಸ್ಥಿತಿಗಳನ್ನು ನೋಡಿದರೆ ಶೋಚನೀಯ ಸ್ಥಿತಿಯಲ್ಲಿ ಅಗೋಚರವಾಗಿ ಎಲ್ಲಿ ನೋಡಿದರೂ ಗಿಡ-ಗಂಟೆಗಳ ದರ್ಬಾರವಿದೆ ವಿನಹ ಒಂದೂ ಸರಿಯಾದ ರೀತಿಯಲ್ಲಿ ಕಂಡು ಬರುವುದಿಲ್ಲ. ಇದಕ್ಕೆ ಕೆಲವೊಂದು ಜೀವಂತ ಉದಾಹರಣೆ ನೋಡುವದಾದರೆ ಹುನಗುಂದ ಮತಕ್ಷೇತ್ರದಲ್ಲಿ ಬರುವ ಯಡಹಳ್ಳಿ ಗ್ರಾಮಕ್ಕೆ ಹೊಂದಿಕೊಂಡಿರುವ ದೊಡ್ಡದಾದ ಹಳ್ಳ ಈ ಹಳ್ಳಕ್ಕೆ ಸುಮಾರು ಎರಡು ಕೋಟಿ, ಅಧಿಕ ಹಣವನ್ನು ಖರ್ಚು ಮಾಡಿ ಬ್ರಿಜ್-ಕಂ-ಬ್ಯಾರೇಜ್ ನಿರ್ಮಾಣ ಮಾಡಿರುವರು. ಇದು ಬಿರುಕು ಬಿಟ್ಟು ಕಳಪೆ ಕಾಮಗಾರಿಯಾಗಿರುವುದು ಈ ಬ್ರಿಜ್-ಕಂ-ಬ್ಯಾರೇಜ್ ದಿಂದ ವೀರಾಪುರ ಗ್ರಾಮ ಚಿಕ್ಕಬಾದವಾಡಗಿ ಗ್ರಾಮ- ಹುನಗುಂದ ನಗರಕ್ಕೆ ಹೋಗುವ ಪ್ರಮುಖ ಸಂಪರ್ಕ ಬ್ರಿಜ್ ಆದರೆ ಇಂದಿಗೂ ಯಡಹಳ್ಳಿ ಗ್ರಾಮದ ಹಳ್ಳವನ್ನು ದಾಟಿ ಮುಂದಿನ ಗ್ರಾಮಗಳಿಗೆ ಹೋಗುವ ರಸ್ತೆ ಇಂದಿಗೂ ಮರೀಚಿಕೆಯಾಗಿದೆ. ಈ ಬ್ರಿಜ್ ಗೆ ಬ್ಯಾರೇಜ್ ಮಾಡಿರುವರು, ಆದರೆ ಇದುವರೆಗೂ ಬ್ಯಾರೇಜ್ ಗೆ ಗೇಟುಗಳನ್ನು ಅಳವಡಿಸಿದೇ ಗೇಟುಗಳನ್ನು ಹಳ್ಳದ ಪಕ್ಕದ ಗಿಡಗಂಟೆಗಳ ಮಧ್ಯೆ ಬೇಕಾಬಿಟ್ಟಿಯಾಗಿ ಹಾಕಿರುವರು. ಗೇಟುಗಳನ್ನು ಅಳವಡಿಸದೇ ಇರುವುದರಿಂದ ಹಳ್ಳದಲ್ಲಿ ನೀರು ಸಂಗ್ರಹವಾಗದೆ ಜನ ಜಾನುವಾರುಗಳಿಗೆ ಬೇಸಿಗೆ ಸಮಯದಲ್ಲಿ ನೀರಿನ ದಾಹಕ್ಕೆ ತೊಂದರೆ ದಾಯಕವಾಗಿರುವದು ಸತ್ಯ ಅಲ್ಲದೇ ಹಳ್ಳದಲ್ಲಿ ನೀರು ಸಂಗ್ರವಾಗದೇ ಇರುವುದರಿಂದ ಹಳ್ಳದಲ್ಲಿರುವ ಉಸುಕನ್ನು ಹಗಲು-ರಾತ್ರಿ ಕಳ್ಳ-ಕಾಕರು ನಿರಂತರ ಹಳ್ಳದ ಉಸುಕನ್ನು ಕೊಳ್ಳೆ ಹೊಡೆಯುತ್ತಲೆ ಇರುವರು ಇದಕ್ಕೆ ಸಂಬಂದಿಸಿದ ಅಧಿಕಾರಿಗಳು ಜಾಣ-ಮೌನ ವಹಿಸುರುವುದು ದೊಡ್ಡ ದುರಂತ.

ಹುನಗುಂದ ನಗರದ ಲಕ್ಕಮ್ಮನ ಗುಡಿಯ ಪಕ್ಕದಲ್ಲಿ ಇರುವ ಹಳ್ಳದಲ್ಲಿ ಬ್ರಿ-ಕಂ-ಬ್ಯಾರೇಜ್ ನಿರ್ಮಾಣ ಮಾಡಿರುವರು. ಇದು ಸಾರ್ವಜನಕರಿಗೆ ಶಾಲಾ- ಕಾಲೇಜು ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ವಯೋವೃದ್ಧರಿಗೆ ಉಪಯುಕ್ತವಾಗಿರುವದು ಆದರೆ ಬ್ರಿಜ್-ಕಂ-ಬ್ಯಾರೇಜ್ ದಲ್ಲಿ ಅಪಾರಪ್ರಮಾಣದಲ್ಲಿ ಜೇಕ್- ಗಿಡ-ಗಂಟೆಗಳು-ಗಟಾರದ ನೀರು-ಸತ್ತ ಪ್ರಾಣಿಗಳ ತಾಣವಾಗಿದೆ ಸ್ವಚ್ಛತೆ ಎಂಬುವುದು ಇದುವರೆಗೂ ಸಂಬಂಧಿಸಿದ ಇಲಾಖೆಯವರು ಮಾಡದೆ ಇರುವದರಿಂದ ಈ ಬ್ರಿಜ್ ಮೇಲೆ ಹೋಗಿ ಬರುವ ಪ್ರತಿಯೊಬ್ಬರು ತಮ್ಮ “ಮೂಗು” ಮುಚ್ಚಿ ಕೊಳ್ಳಬೇಕು – ಇಲ್ಲಿಯೂ ಕೂಡ ಬ್ಯಾರೇಜ್ ಗೆ ಗೇಟುಗಳನ್ನು ಅಳವಡಿಸದೆ ಬ್ರಿಜ್ ಪಕ್ಕದಲ್ಲಿ “ರೈತರು ಒಟ್ಟುವ ಬಣವಿ” ಹಾಗೇ ಕಬ್ಬಿಣದ ಗೇಟುಗಳನ್ನು ಹೊಂದಿಸುರುವರು ಇನ್ನು ಮತಕ್ಷೇತ್ರದಲ್ಲಿ ಹಲವಾರು ಗ್ರಾಮಗಳಲ್ಲಿ ಮಾಡಿರುವ ಗಣಂಧಾರಿ ಕಾಮಗಾರಿಗಳನ್ನು ನೋಡಿದರೆ ಅವುಗಳ ಪರಸ್ಥಿತಿಯೂ ಹೀಗೆ ಗೇಟುಗಳನ್ನು ಆಳವಡಿಸದೇ ಹಳ್ಳಗಳ ಪಕ್ಷದಲ್ಲಿ ರಾಶಿ ರಾಶಿ ಹಾಕಿರುವರು ಇದರಿಂದ ಯಾವ ರೈತಾಪಿ ವರ್ಗಕ್ಕೆ ಪ್ರಯೋಜನ ವಿನಾಕಾರಣ ಸರಕಾರದ ಹಣ ಪೋಲಾಗಿರುವದು ಬಂದು ಒಮ್ಮೆ ಕಣ್ಣಾರೆ ನೂರಾರು ಲಕ್ಷ ಹಣ ನಿರುಪಯುಕ್ತವಾಗಿದೆ ಎಂಬ ಅರಿವು ಯಾರಿಗೂ ಬರದೇ ಇರಲಾರದು, ರಾಜ್ಯಾಧ್ಯಾಂತ ಇರುವ ಬ್ರಿಜ್-ಕಂ-ಬ್ಯಾರೇಜ್ ಆಳವಡಿಸದೇ ಇರುವ ಗೇಟುಗಳನ್ನು ಸರಕಾರ ಹರಾಜು ಹಾಕಿದರೆ ಸಾವಿರಾರು ಕೋಟಿ ಹಣ ಸರಕಾರಕ್ಕೆ ಸಂದಾಯವಾಗಬಹುದು ಜೊತೆಗೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಬಹುದು.

ಪತ್ರಿಕಾ ವರದಿಗಾರರು:ಮಹಾಂತೇಶ.ಎಸ್.ಜಿಗಳೂರು. ಹುನಗುಂದ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button