ಬಿಸಲದಿನ್ನಿ ಗ್ರಾಮ ಪಂಚಾಯತ ಕಾಂಗ್ರೇಸ್ ಪಕ್ಷದ ತೆಕ್ಕೆಗೆ.
ಬಿಸಲದಿನ್ನಿ ಜುಲೈ.28

ಕೈ ಭದ್ರಕೋಟಿಯನ್ನು ಸುಭದ್ರವಾಗಿ ಉಳಿಸಿಕೊಂಡ ಕಾಂಗ್ರೆಸ್ಅಧ್ಯಕ್ಷರಾಗಿ ಪಾರ್ವತೆವ್ವ ಹಿರೇಗೌಡ ಉಪಾಧ್ಯಕ್ಷರಾಗಿ ಯಮನಪ್ಪ ದೊಡಮನಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಹುನಗುಂದ ತಾಲೂಕಿನ ಬಿಸಲದಿನ್ನಿ ಗ್ರಾಮ ಪಂಚಾಯತಿ ೨ ನೆಯ ಅವಧಿಗೆ ನೂತನ ಅಧ್ಯಕ್ಷರಾಗಿ ಪಾರ್ವತೆವ್ವ ಕಾಮಣ್ಣ ಹಿರೇಗೌಡರ ಉಪಾಧ್ಯಕ್ಷರಾಗಿ ಯಮನಪ್ಪ ಸಂಕ್ರಪ್ಪ ದೊಡಮನಿ ಅವರು ಅವಿರೋಧವಾಗಿ ಆಯ್ಕೆಯಾಗುವ ಮೂಲಕ ಬಿಸಲದಿನ್ನಿ ಗ್ರಾಮ ಪಂಚಾಯತಿ ಕೈ ಭದ್ರಕೋಟೆ ಎನ್ನುವುದು ಮತ್ತೊಮ್ಮೆ ಸಾಭೀತಾಗಿದೆ.೧೨ ಸಂಖ್ಯೆ ಬಲಯುಳ್ಳ ಬಿಸಲದಿನ್ನಿ ಗ್ರಾ.ಪಂಯಲ್ಲಿ ೯ ಜನ ಕಾಂಗ್ರೆಸ್ ಬೆಂಬಲಿತ ಸದಸ್ಯರು,೩ ಬಜೆಪಿ ಬೆಂಬಲಿತ ಸದಸ್ಯರು ಆಯ್ಕೆಯಾಗಿದ್ದರು.ಮೊದಲ ಅವಧಿಯಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯರೇ ಅಧ್ಯಕ್ಷರು ಅಧಿಕಾರದಲ್ಲಿದ್ದರು.ಆದರೆ ಓರ್ವ ಕಾಂಗ್ರೆಸ್ ಸದಸ್ಯರು ಬಿಜೆಪಿ ಕಡೆಗೆ ಹೋಗಿದ್ದರಿಂದ ೮ ಕಾಂಗ್ರೆಸ್ ಮತ್ತು ೪ ಬಿಜೆಪಿ ಬೆಂಬಲಿತ ಸದಸ್ಯ ಸಂಖ್ಯೆ ಇದ್ದರೂ ಕೂಡಾ ೮ ಜನ ಕಾಂಗ್ರೆಸ್ ಸದಸ್ಯರು ಬಹುಮತ ಇರೋದರಿಂದ ಬಿಜೆಪಿ ಪಾಳೆಯದಲ್ಲಿದ್ದ ೪ ಜನರು ಇಂದಿನ ಚುನಾವಣೆ ಪ್ರಕ್ರಿಯೆಯಲ್ಲಿ ಗೈರಾಗುವ ಮೂಲಕ ಚುನಾವಣೆಯಿಂದ ದೂರ ಉಳಿದಿದ್ದರ ಪರಿಣಾಮವಾಗಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದ ಬೆಂಬಲಿತ ಸದಸ್ಯರು ತಲಾ ಒಂದರಂತೆ ನಾಮಪತ್ರ ಸಲ್ಲಿಸಿದರು.೨ನೆಯ ಅವಧಿಗೆ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮೀಸಲಾಗಿತ್ತು.ಅಧ್ಯಕ್ಷ ಮತ್ತು ಉಪಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಸದಸ್ಯರು ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಅಧ್ಯಕ್ಷರಾಗಿ ಪಾರ್ವತೆವ್ವ ಹಿರೇಗೌಡರ ಮತ್ತು ಉಪಾಧ್ಯಕ್ಷರಾಗಿ ಯಮನಪ್ಪ ದೊಡಮನಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಚುನಾವಣಾಧಿಕಾರಿ ಪರೋಹಿತ ಘೋಷಿಸಿದರು.ಸಂಭ್ರಮಾಚರಣೆ-ಕಾAಗ್ರೆಸ್ ಬೆಂಬಲಿತ ಅಧ್ಯಕ್ಷ ಉಪಾಧ್ಯಕ್ಷ ಆಯ್ಕೆಯಾಗುತ್ತಿದ್ದಂತೆ ಹುನಗುಂದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಂಗಾಧರ ದೊಡಮನಿ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಗುಲಾಲು ಎರಚಿ ಸಿಹಿ ಹಂಚಿ ಪಟಾಕಿ ಸಿಡಿಸಿ ಸಂಭ್ರಾಮಾಚರಣೆ ಮಾಡಿದರು.ಈ ವೇಳೆ ಕಾಂಗ್ರೆಸ್ ಪಕ್ಷದ ಮುಖಂಡರಾದ ಗಂಗಣ್ಣ ಬಾಗೇವಾಡಿ,ವಸಂತ ದೇಶಪಾಂಡೆ,ಭೀಮಪ್ಪ ಯರಝರಿ,ಮಹಾಂತೇಶ ಲಗಮ್ನನವರ,ಬಾಲೇಶ ಹಿರೇಗೌಡರ,ಚಿದಾನಂದ ಮಜ್ಜಗಿ,ಮುದಿಗೌಡ ಮೇಟಿ,ಬಸಪ್ಪ ಕಾಶಿನಕುಂಟಿ,ಮುತ್ತಣ್ಣ ಭರಮಗೌಡರ,ಪರಸಪ್ಪ ಬೋಳಿ,ಸಂಗಪ್ಪ ಹಡಗಲಿ,ಭೀಮನಗೌಡ ಪಾಟೀಲ,ಚಂದ್ರಾಮಪ್ಪ ಭರಮಗೌಡರ,ಪ್ರಭು ವಡ್ಡರ,ಮಂಜುನಾಥ ಹಿರೇಗೌಡರ,ಬಸು ಮುದ್ದಾಪೂರ,ಶಂಕರ ಪತ್ತಾರ ಸೇರಿದಂತೆ ಗ್ರಾ.ಪಂ ಸರ್ವ ಸದಸ್ಯರು ಇದ್ದರು. . .
ತಾಲೂಕ ವರದಿಗಾರರು: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ. ಹುನಗುಂದ