ಭದ್ರಾ ಜಲಾಶಯದಲ್ಲಿ ಮೀನು ಹಿಡಿಯಲು ಹೋದ ಕ್ರಷ್ಣ ನಿಧನ.
ತರೀಕೆರೆ ಆಗಷ್ಟ.14

ಲಕ್ಕವಳ್ಳಿ ಭದ್ರಾ ಜಲಾಶಯದಲ್ಲಿ ಮೀನು ಹಿಡಿಯಲು ಬಲೆ ಬಿಡುತ್ತಿದ್ದ ಸಂದರ್ಭದಲ್ಲಿ ಗಾಳಿ ಹೆಚ್ಚಾಗಿ ನೀರಿನ ಅಲೆಗಳು ಜೋರಾಗಿ ಅಪ್ಪಳಿಸಿ, ಮೀನು ಹಿಡಿಯಲು ಬಳಸಿದ್ದ ಉಕ್ಕಡ ಚಿಕ್ಕ ದೋಣಿ ಮಗುಚಿ ಬಿದ್ದು, ಉಕ್ಕಡದಲ್ಲಿ ಇದ್ದ ಮೂರು ಜನರು ನೀರು ಪಾಲಾಗುವ ಪರಸ್ಥಿಯನ್ನರಿತ ಉಚ್ಚೆ ಕೃಷ್ಣ ಎಂಬುವವರು ನೀರಿನಲ್ಲಿ ಮುಳುಗುತ್ತಿದ್ದ ಅಜಯ ಮತ್ತು ರಾಜೇಶ್ ಎಂಬುವರನ್ನು ರಕ್ಷಿಸಿ ದಡದ ಕಡೆ ತಳ್ಳಿದರು ಆದರೆ ಅದೇ ಸಂದರ್ಭದಲ್ಲಿ ವಾಪಸ್ ಜೋರಾಗಿ ಬಂದ ಅಲೆಗಳು ಹುಚ್ಚೆ ಕೃಷ್ಣನನ್ನು ನೀರಿನ ಒಳಗೆ ಎಳೆದುಕೊಂಡು ಹೋದವು ಈ ಸಂದರ್ಭದಲ್ಲಿ ಕೃಷ್ಣ ದಡ ಮುಟ್ಟಲಾಗದೆ ನೀರಿನಲ್ಲಿ ಮುಳುಗಿ ಹಸು ನೀಗಿದ್ದಾರೆ.
ವಿಷಯ ತಿಳಿದ ಲಕ್ಕವಳ್ಳಿ ಪೊಲೀಸ್ ಸಿಬ್ಬಂದಿಗಳು, ಪಿಎಸ್ಐ ಮಂಜುನಾಥ್ ರವರ ಸಹಕಾರ, ಭದ್ರ ಅಭಯಾರಣ್ಯ ಇಲಾಖೆ ಹಾಗೂ ಜಂಗಲ್ ರೆಸರ್ಟ್ ನ ಕಾರ್ತಿಕ್ ಮತ್ತು ತಂಡದವರು ದಿನಾಂಕ 13 ರ ಸಂಜೆಯಿಂದ ಕಾರ್ಯಾಚರಣೆ ಮಾಡಿದರು ಮೃತದೇಹ ಸಿಗಲಿಲ್ಲ ಆದ ಕಾರಣ ದಕ್ಷಿಣ ಕನ್ನಡ ಜಿಲ್ಲೆಯ ಈಶ್ವರ್ ಮಲ್ಪೆ ಇವರ ನೇತೃತ್ವದ ಮುಳುಗು ತಂಡದವರನ್ನು ಲಕ್ಕವಳ್ಳಿಯ ಕರುಣಾಮಯಿ ಟ್ರಸ್ಟ್ ನವರು ಇಂದು ಬೆಳಗ್ಗೆ ಕರೆಯಿಸಿ ಒಂಬತ್ತು ಗಂಟೆಗೆ ಜಲಾಶಯಕ್ಕೆ ಇಳಿದ ಮುಳುಗು ತಂಡದವರು 15 ನಿಮಿಷಗಳಲ್ಲಿ ಮೃತ ದೇಹವನ್ನು ಹೊರಕ್ಕೆ ತೆಗೆದಿದ್ದಾರೆ.

ಮತ್ತು ಉಚ್ಚೆ ಕೃಷ್ಣರವರು ತಾಯಿ ಲಕ್ಷ್ಮೀಬಾಯಿ ಸೋದರರಾದ ಸುರೇಶ್ ಗಣೇಶ್ ತಂಗಿಯರಾದ ರತ್ನಬಾಯಿ ಪದ್ಮಭಾಯಿ ರವರನ್ನು ಅಗಲಿದ್ದಾರೆ. ಈ ಕುರಿತು ಗ್ರಾಮಸ್ಥರಾದ ವೆಂಕಟರಾಜು ಹಾಗೂ ದಲಿತ ಮುಖಂಡ ಮುನಿಯ ರವರು ಪತ್ರಿಕೆಗೆ ಮಾಹಿತಿ ನೀಡಿರುತ್ತಾರೆ ಮತ್ತು ಗ್ರಾಮಸ್ಥರು ಮೃತ ದೇಹ ಹೊರ ತೆಗೆಯಲು ಸಹಕರಿಸಿದ ಕರುಣಾಮಯಿ ಟ್ರಸ್ಟ್, ಪೊಲೀಸ್ ಸಿಬ್ಬಂದಿಗಳು, ತರೀಕೆರೆ ಅಗ್ನಿಶಾಮಕ ದಳ,ಈಶ್ವರ್ ಮಲ್ಪೆ ಮುಳುಗು ತಂಡ, ಭದ್ರಾ ಅಭಯ ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ, ಜಂಗಲ್ ರೆಸಾರ್ಟ್ ನವರಿಗೆ ಧನ್ಯವಾದ ತಿಳಿಸಿದರು.
ಜಿಲ್ಲಾ ವರದಿಗಾರರು:ಎನ್.ವೆಂಕಟೇಶ್.ತರೀಕೆರೆ