ನಿಧನ ವಾರ್ತೆ: ಗಾಳೆಮ್ಮರ ಚಾರಮ್ಮ ನಿಧನ.

ಕೂಡ್ಲಿಗಿ ಆಗಷ್ಟ.19

ಪಟ್ಟಣದ ಡಾಕ್ಟರ್ ಬಿಆರ್ ಅಂಬೇಡ್ಕರ್ ನಗರದ ನಿವಾಸಿಯಾದ ಗಾಳೆಮ್ಮರ ಚಾರೆಮ್ಮ ಇವರ (64) ಇವರು ಈ ದಿನ ಮುಂಜಾನೆ 11.30 .ಗಂಟೆಯ ಸಮಯದಲ್ಲಿ ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ಹೃದಯಘಾತದಿಂದ ಚಿಕಿತ್ಸೆ ಫಲಕಾರಿಯಾಗದೆ ನಿಧನ ಹೊಂದಿರುತ್ತಾರೆ. ಇವರಿಗೆ 3ಹೆಣ್ಣು ಒಬ್ಬ ಗಂಡು ಮಕ್ಕಳಿದ್ದು ಇವರ ಹಿರಿಯ ಮಗನಾದ ಪಟ್ಟಣ ಪಂಚಯಿತಿಯ ಪೌರ. ಕಾರ್ಮಿಕ ರಾಗಿ ಸೇವೆ ಸಲ್ಲಿಸುತ್ತಿದ್ದು ಹಾಲಿ ಪೌರ ನೌಕರರ ಸಂಘದ ತಾಲೂಕು ಅಧ್ಯಕ್ಷರಾಗಿದ್ದು ಇವರು ತಾಯಿಯಾದ ಗಾಳೆಮ್ಮರ ಚಾರೆಮ್ಮ ಇವರು ಡಾಕ್ಟರ್ ಬಿ ಆರ್ ಅಂಬೇಡ್ಕರ್ ನಗರದ ಶ್ರೀ ಮದಗದಾಂಬೆ ದೇವಸ್ಥಾನದ ಎಲ್ಲಾ ಪೂಜಾ ಕಾರ್ಯಕ್ರಮಗಳಿಗೆ ಎಲ್ಲಾ ಸಮಯದಲ್ಲೂ ಚಾರಮ್ಮ ಇವರೇ ಕಳಸ ಬೆಳಗುವ ಮಹಿಳಾ ಮಾತಂಗಿಯಾಗಿದ್ದರು ಇವರು ಇಂದು ಶನಿವಾರ ಬೆಳಿಗ್ಗೆ 11.30. ರ. ಸಮಯದಲ್ಲಿ ಬಳ್ಳಾರಿ ವಿಮ್ಸ್ ನಲ್ಲಿ ಹೃದಯ ಘಾತದಿಂದ ನಿಧನ ಹೊಂದಿದ್ದು ಇವರನ್ನು ಪೌರ ನೌಕರರ ಸಂಘದ ರಾಜ್ಯಧ್ಯಾಕ್ಷರಾದ ಕೆ. ಪ್ರಭಾಕರ್ ಹಾಗೂ ರಾಜ್ಯದ ಪದಾಧಿಕಾರಿಗಳು ಸೇರಿದಂತೆ ಹಾಗೂ ಕೂಡ್ಲಿಗಿ ತಾಲೂಕ ಶಾಖಾ ಸಂಘದ ಪೌರ ನೌಕರರು ಹಾಗೂ ಸಮುದಾಯದ ಹಿರಿಯರು ಅವರ ಮಕ್ಕಳು ಹಾಗೂ ಮೊಮ್ಮಕ್ಕಳು ಸೇರಿದಂತೆ, ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. *ಅಂತ್ಯಕ್ರಿಯೆ:-* ಮೃತರಾದ ಗಾಳೆಮ್ಮ ಚಾರೆಮ್ಮ ಇವರ ಅಂತ್ಯಕ್ರಿಯೆ ನಾಳೆ ಆಗಸ್ಟ್ 20 ರಂದು ಭಾನುವಾರ ಬೆಳಿಗ್ಗೆ 10.30: ಗಂಟೆಗೆ, ಪಟ್ಟಣದ ಸಾರ್ವಜನಿಕರ ಶಾಂತಿ ವನದಲ್ಲಿ ಜರುಗಲಿದೆ. *ಸಂತಾಪ:-* ಪಟ್ಟಣ ಸೇರಿದಂತೆ ತಾಲೂಕಿನ ಸಮಸ್ತ ಸಮಾಜದವರು, ಹಾಗೂ ಶಾಸಕರಾದ ಎನ್. ಟಿ. ಶ್ರೀನಿವಾಸ್ ರವರು ಸೇರಿದಂತೆ ವಿವಿಧ ಸಮಾಜದವರು ಮುಖಂಡರಗಳು ಹಾಗೂ ಗಾಳೆಮ್ಮರ ಚಾರಮ್ಮ ವಂಶದವರು ಸೇರಿದಂತೆ ವಿವಿಧ ಜನ ಪ್ರತಿನಿಧಿಗಳು. ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ರೈತರು, ಕಾರ್ಮಿಕರು, ವಿವಿಧ ಪಕ್ಷಗಳ ಮುಖಂಡರು, ನಾಗರಿಕರು ಹಾಗೂ ಗಣ್ಯರು, ನಿಧನರಾದ ಗಾಳೆಮ್ಮ ರ ಚಾರೇಮ್ಮರವರ ಅಗಲಿಕೆಗೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಜಿಲ್ಲಾ ವರದಿಗಾರರು: ರಾಘವೇಂದ್ರ.ಸಾಲುಮನೆ.ಕೂಡ್ಲಿಗಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button