ಬಸ್ ಅಪಘಾತ ಶಾಲೆಗೆ ಹೊರಟ ಮಗು ಸಾವು.
ತರೀಕೆರೆ ಸಪ್ಟೆಂಬರ್.7
ಸಮೀಪದ ಗೇಟ್ ದುರ್ಗಾಪುರ ಬಸ್ ನಿಲ್ದಾಣದಲ್ಲಿ ಶಾಲೆಗೆಂದು ಹೊರಟ ತುಳಸಿ ಮತ್ತು ನಿವೇದಿತಾ ಎಂಬ ಎರಡು ಜನ ಎಂಟನೇ ತರಗತಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಗಳು ಇಂದು ಬೆಳಗ್ಗೆ ಸುಮಾರು 9:30 ಸಮಯದಲ್ಲಿ ಶಾಲೆಗೆ ಹೊರಟು ಬಸ್ ನಿಲ್ದಾಣದಲ್ಲಿ ಕಾಯುವಾಗ ಮರ್ಚೆಂಟ್ ಬಸ್, ನಿಲ್ದಾಣದ ಪಕ್ಕ ಇದ್ದ ಅಂಗಡಿಗೆ ಡಿಕ್ಕಿ ಹೊಡೆದು ಅಪಘಾತ ಉಂಟಾಗಿ, ತುಳಸಿ 14 , ಖಾಸಗಿ ಆಸ್ಪತ್ರೆಯಲ್ಲಿ ಕೊನೆ ಉಸಿರು ಹೇಳಿದರು.

ನಿವೇದಿತಾ ರವರಿಗೆ ತೀವ್ರವಾಗಿ ಪೆಟ್ಟಾಗಿರುವುದರಿಂದ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ಸಾಗಿಸಲಾಗಿದೆ. ಹಾಗೂ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಎಂಟು ಜನರಿಗೆ ಪೆಟ್ಟಾಗಿದೆ ಎಂದು ತಿಳಿದುಬಂದಿದೆ. ಚಾಲಕನ ಅಜಾಗರೂ ಕತೆಯಿಂದ ಅಪಘಾತ ಸಂಭವಿಸಿ ಶಾಲೆಗೆ ಹೊರಟ ಮಗು ಸಾವನ್ನಪ್ಪಿರುವುದರಿಂದ ಪೋಷಕರು ಮತ್ತು ಗ್ರಾಮಸ್ಥರಲ್ಲಿ ದುಃಖ ಮಡುಗಟ್ಟಿದೆ. ಈ ಕುರಿತು ತರೀಕೆರೆ ಪೊಲೀಸ್ ನಿರೀಕ್ಷಕರಾದ ವೀರೇಂದ್ರ ರವರು ಸ್ಥಳ ತನಿಖೆ ನಡೆಸಿರುತ್ತಾರೆ. ಕೇಸು ದಾಖಲಿಸಿರುತ್ತಾರೆ. ಪೊಲೀಸ್ ಉಪ ಅಧೀಕ್ಷಕರಾದ ಹಾಲಮೂರ್ತಿ ರಾವ್, ಹೆಚ್ಚುವರಿ ಪೊಲೀಸ್ ಅಧಿಕ್ಷಕರಾದ ಕೃಷ್ಣಮೂರ್ತಿ, ಜಿಲ್ಲಾ ಪೊಲೀಸ್ ವರಿಷ್ಠ ಅಧಿಕಾರಿಗಳಾದ ಡಾ. ವಿಕ್ರಂ ಆಮ್ಟೆ ರವರು ಠಾಣೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲು ತಿಳಿಸಿರುತ್ತಾರೆ.
ಜಿಲ್ಲಾ ವರದಿಗಾರರು:ಎನ್.ವೆಂಕಟೇಶ್.ತರೀಕೆರೆ