ಕೇಂದ್ರ ಬಿಜೆಪಿ ಸರ್ಕಾರದ ಜನ ವಿರೋಧಿ ಹಾಗೂ ಪ್ರಜಾಪ್ರಭುತ್ವ ವಿರೋಧಿ ನೀತಿಗಳನ್ನು ವಿರೋಧಿಸಿ ಭಾರತದ ಜನತೆಯ ಹಕ್ಕೊತ್ತಾಯಗಳ ಜಾರಿಗಾಗಿ.

ಹೊಸಪೇಟೆ ಸಪ್ಟೆಂಬರ್.7

ವಿಜಯನಗರ ಜಿಲ್ಲೆ ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ವಾದಿ) ವತಿಯಿಂದ ಮಾನ್ಯ ತಹಶೀಲ್ದಾರ್ ಕಚೇರಿ ಮುಂಭಾಗ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಯಿತು”ಕಳೆದ 2014 ರಿಂದ ಭಾರತದ ಕೇಂದ್ರ (ಒಕ್ಕೂಟ) ಸರ್ಕಾರವನ್ನು ಮುನ್ನಡಿಸುತ್ತಿರುವ ತಾವು ಶ್ರೀ ನರೇಂದ್ರ ಮೋದಿಯವರು ತಮ್ಮ ನೇತೃತ್ವದಲ್ಲಿ ಎರಡು ಪಾರ್ಲಿಮೆಂಟ್ ಚುನಾವಣೆಗಳಲ್ಲಿ ದೇಶದ ಜನತೆಗೆ ನೀಡಿದ ಆಶ್ವಾಸನೆಗಳಾದ ರೈತರ ಆಧಾಯ ದ್ವಿಗುಣಗೊಳಿಸುವುದು, ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಠಿವುದು, ಬೆಲೆ ಏರಿಕೆಯನ್ನು ತಡೆಗಟ್ಟುವುದು, ಕಪ್ಪು ಹಣ ಹೊರಗೆಳೆಯುವುದು, ಬಡವರ ಖಾತೆಗೆ ಪ್ರತಿಯೊಬ್ಬರಿಗೆ 15 ಲಕ್ಷ ರೂಪಾಯಿ ಜಮಾ ಮಾಡುವುದು 2022 ರೊಳಗೆ ಮನೆ ಇಲ್ಲದವರಿಗೆ ಮನೆ ಕಟ್ಟಿಸಿ ಅದಕ್ಕೆ 24 ಗಂಟೆ ವಿದ್ಯುತ್ ಮತ್ತು ಶುದ್ಧ ಕುಡಿಯುವ ನೀರಿನ ಪೈಪ್ ಲೈನ್ ಹಾಕಿಸಿವುದಾಗಿ ಮತ್ತು ಒಟ್ಟಾರೆ ಎಲ್ಲರಿಗೂ ಶುಭ ದಿನಗಳನ್ನು ತರುವುದು ಮುಂತಾದಾಗಿ ಹೇಳಿದ ಈ ಯಾವುದೇ ಭರವಸೆಗಳನ್ನು ಜಾರಿ ಮಾಡದೇ ವಂಚನೆ ಮಾಡಿರುವುದನ್ನು ಮತ್ತು ಲೂಟಿ ಹೊರ ಕಾರ್ಪೋರೇಟ್ ಸಂಸ್ಥೆಗಳು ಭಾರತದ ಲಕ್ಷಾಂತರ ಕೋಟಿ ರೂಪಾಯಿಗಳ ಹೇರಳ ಸಂಪತನ್ನು ದೋಚಲು ತಮ್ಮ ಸರಕಾರ ನೆರವು ನೀಡಿರುವುದನ್ನು ನಾವು ಕಂಡಿದ್ದೇವೆ. ತಾವು ನೀಡಿದ ಶುಭ ದಿನಗಳ ಭರವಸೆಗಳ ಬದಲು ದೌರ್ಜನ್ಯದ ದಿನಗಳನ್ನು ದೇಶದ ಜನತೆ ಅನುಭವಿಸುತ್ತಿರುವ ಈ ಎಲ್ಲಾ ಸಂಕಷ್ಟಗಳಿಂದ ಹೊರಬರಲು ಕೇಂದ್ರ ಸರ್ಕಾರ ತಕ್ಷಣ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ನಮ್ಮ ಸಿಪಿಐ(ಎಂ) ಪಕ್ಷದ ನೇತೃತ್ವದಲ್ಲಿ ದೇಶವ್ಯಾಪಿ ಪ್ರತಿಭಟನಾ ಸಪ್ತಾಹವನ್ನು 2023 ಸಪ್ಟೆಂಬರ್ 1 ರಿಂದ 7 ರವರೆಗೆ ಆಚರಿಸುತ್ತಿದೆ.

ಹಾಗೆಯೇ ಕರ್ನಾಟಕ ರಾಜ್ಯದಲ್ಲಿಯೂ ಸಹ ಈ ಪ್ರತಿಭಟನಾ ಸಪ್ತಾಹ ಅಂಗವಾಗಿ ಈ ಕೆಳಗಿನ ಹಕ್ಕೊತ್ತಾಯಗಳನ್ನು ರಾಜ್ಯದ ಜನತೆಯ ಪರವಾಗಿ ಮನವಿ ಸಲ್ಲಿಸುತ್ತಿದ್ದೇವೆ.”ಆಹಾರ ಧಾನ್ಯ, ಜನರು ಬಳಸುವ ಔಷಧಿಗಳು, ಪೆಟ್ರೋಲ್, ಡಿಸೇಲ್ ಮುಂತಾದ ಅಗತ್ಯ ವಸ್ತುಗಲ ಬೆಲೆ ಏರಿಕೆಗಳನ್ನು ತಡೆಗಟ್ಟಬೇಕು.””ದೇಶದಲ್ಲಿ ಖಾಲಿ ಇರುವ 60 ಲಕ್ಷಕ್ಕೂ ಮೇಲ್ಪಟ್ಟ ಹುದ್ದೆಗಳನ್ನು ಭರ್ತಿ ಮಾಡಬೇಕು, ಇಲ್ಲವೆ ತಿಂಗಳಿಗೆ 10 ಸಾವಿರ ರೂಪಾಯಿಗಳಂತ ನಿರುದ್ಯೋಗ ಯುವ ಜನರಿಗೆ ನಿರುದ್ಯೋಗ ಭತ್ಯೆ ನೀಡಬೇಕು.””ಕರ್ನಾಟಕ ರಾಜ್ಯ ಸರ್ಕಾರದ ಅನ್ನ ಭಾಗ್ಯ ಯೋಜನೆಗೆ ಐದು ಕೆ.ಜಿ. ಹೆಚ್ಚುವರಿ ಅಕ್ಕಿ ಕೊಡಿ””ವಿದ್ಯುತ್ ಖಾಸಗೀಕರಣ ನಿಲ್ಲಿಸಿ-ಪರ್ಯಾಯ ವಿದ್ಯುತ್‌ ನೀತಿ ಜಾರಿ ಮಾಡಿರಿ””ಕರ್ನಾಟಕ ರಾಜ್ಯಕ್ಕೆ ಕೂಡುವ ತೆರಿಗೆ ಪಾಲು ಹೆಚ್ಚಿಸಿ, ಜಿಎಸ್ ಟಿ ಬಾಕಿ ಹಣ ತಕ್ಷಣ ಪಾವತಿಸಿ,””ಮನೆ ನಿವೇಶನ ಇಲ್ಲದ ಎಲ್ಲಾ ಬಡವರಿಗೆ ಮನೆ-ನಿವೇಶನಗಳನ್ನು ಮಂಜೂರು ಮಾಡಿರಿ ಎಂದು ಒತ್ತಾಯಿಸಿ ಮನವಿ ಪತ್ರವನ್ನು ಸಲ್ಲಿಸಲಾಯಿತು ಈ ಸಂದರ್ಭದಲ್ಲಿ ಸಂಘಟನೆಯ ಮುಖಂಡರು ಜಂಬಯ್ಯ ನಾಯಕ್, ಆರ್ ಭಾಸ್ಕರ್ ರೆಡ್ಡಿ, ಎಂ.ಗೋಪಾಲ್, ಕೆ .ನಾಗರತ್ನ, ಅಲ್ತಾಫ್ ಮಕ್ಕಂದರ್ ಇನ್ನು ಹಲವಾರು ಮುಖಂಡರು ಪಾಲ್ಗೊಂಡಿದ್ದರು.

ತಾಲೂಕ ವರದಿಗಾರರು:ಮಾಲತೇಶ್.ಶೆಟ್ಟರ್.ಹೊಸಪೇಟೆ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button