ಸಚಿವ ಶಿವಾನಂದರೆ ರೈತರ ಬೆಲೆ ಗೊತ್ತೇನ್ರಿ.

ಕಂದಗಲ್ಲ ಡಿಸೆಂಬರ್.30

ಇಳಕಲ್ಲ ತಾಲೂಕಿನ ಕಂದಗಲ್ಲ ಗ್ರಾಮದ ರೈತರಾದ ಚನ್ನಪ್ಪಗೌಡ ನಾಡಗೌಡ್ರ ಬರಗಾಲ ಬಂದರೆ ಸಾಲ ಮನ್ನಾ ಆಗುತ್ತದೆ ಎಂಬ ಆಸೆಯಿಂದ ರೈತರು ಪದೇ ಪದೇ ಬರಗಾಲ ಬರಲಿ ಎಂದು ಹೇಳಿರುವ ಸಚಿವ ಶಿವಾನಂದ ಪಾಟೀಲರೇ ನೀವು ರೈತರಲ್ಲವೇ ಅಥವಾ ರೈತರೊಂದಿಗೆ ಸಂಬಂಧ ಹೊಂದಿಲ್ಲವೇ ಬಾಯಿ ಇದೆ ಅಂತ ಏನ್ ಬೇಕಾದರೂ ಮಾತನಾಡುವದಲ್ಲ ತಿಳಿದು ಮಾತನಾಡು ರೈತರು ದೇಶದ ಬೆನ್ನೆಲುಬು ಅವರು ಹಗಲು ರಾತ್ರಿ ಎನ್ನದೇ ದುಡಿದಾಗ ಮಾತ್ರ ನಿನಗೆ ಹೊಟ್ಟೆ ತುಂಬುತ್ತದೆ ಇಲ್ಲದಿದ್ದರೆ ನೀವು ಉಪವಾಸದಿಂದ ಸಾಯ ಬೇಕಾಗುತ್ತದೆ. ಮಾತನಾಡುವ ಮುಂಚೆ ಯಾರ ಬಗ್ಗೆ ಏನು ಮಾತನಾಡಬೇಕು ಎಂದು ಅರಿವು ಇಟ್ಟುಕೊಂಡು ಮಾತನಾಡು ಎಂದು ಕಂದಗಲ್ಲದ ಪ್ರಗತಿಪರ ರೈತರಾದ ಚನ್ನಪ್ಪಗೌಡ ನಾಡಗೌಡ್ರ ಹೇಳಿದ್ದಾರೆ.ಮಣ್ಣಿನ ಮಕ್ಕಳು ಈ ಜಗತ್ತಿಗೆ ಆಹಾರವನ್ನು ದೊರಕಿಸುವ ದೇವರುಗಳು ಇಂಥವರ ಬಗ್ಗೆ ಹಗುರವಾಗಿ ಮಾತನಾಡುವ ನೀನು ಸಚಿವನಾಗಿ ಮುಂದುವರಿಯಕ್ಕೆ ಅರ್ಹನಲ್ಲ ಈ ಕೂಡಲೇ ರಾಜೀನಾಮೆ ನೀಡಿ ರೈತ ಕುಲದ ಕ್ಷಮೆ ಕೇಳು ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಇದರ ಪರಿಣಾಮ ಎದುರಿಸ ಬೇಕಾಗುತ್ತದೆ ಎಂದು ನಾಡಗೌಡ್ರ ಎಚ್ಚರಿಸಿದ್ದಾರೆ.

ತಾಲೂಕ ವರದಿಗಾರರು:ಪ್ರತಾಪ್.ವಾಯ್.ಕಿಳ್ಳಿ.ಕಂದಗಲ್ಲ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button