ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆದ-ವ್ಹಿ.ಎಮ್.ಕೆ.ಎಸ್.ಆರ್.ವಸ್ತ್ರದ ಕಲಾ.ವಿಜ್ಞಾನ ಮಹಾವಿದ್ಯಾಲಯದ ವಿದ್ಯಾರ್ಥಿಗಳು.
ಹುನಗುಂದ ಸಪ್ಟೆಂಬರ್.13

ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಬಾಗಲಕೋಟ ಜಿಲ್ಲಾ ಮಟ್ಟದ ಪುರುಷರ ಕಬಡ್ಡಿ ಪಂದ್ಯಾವಳಿಯಲ್ಲಿ ಪಟ್ಟಣದ ವ್ಹಿ.ಎಮ್.ಕೆ.ಎಸ್.ಆರ್ ವಸ್ತೃದ ಕಲಾ,ವಿಜ್ಞಾನ ಮತ್ತು ವ್ಹಿ.ಎಸ್.ಬೆಳ್ಳಿಹಾಳ ವಾಣಿಜ್ಯ ಮಹಾವಿದ್ಯಾಲಯ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆಯುವ ಮೂಲಕ ಕಾಲೇಜಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಪಟ್ಟಣದ ವ್ಹಿ.ಎಮ್.ಕೆ.ಎಸ್.ಆರ್ ವಸ್ತೃದ ಕಲಾ,ವಿಜ್ಞಾನ ಮತ್ತು ವ್ಹಿ.ಎಸ್.ಬೆಳ್ಳಿಹಾಳ ವಾಣಿಜ್ಯ ಮಹಾವಿದ್ಯಾಲಯ ಜರುಗಿದ ಜಿಲ್ಲಾ ಮಟ್ಟದ ಪುರಷರ ಕಬಡ್ಡಿ ಪಂದ್ಯಾವಳಿಯಲ್ಲಿ ಜಿಲ್ಲೆಯ ಅನೇಕ ಕಾಲೇಜುಗಳ ಕಬಡ್ಡಿ ತಂಡಗಳನ್ನು ಎದುರಿಸಿ ಪ್ರಥಮ ಸ್ಥಾನ ಪಡೆದಿದೆ.ಮಹಾವಿದ್ಯಾಲಯದ ತಂಡದಲ್ಲಿ ಭಾಗವಹಿಸಿ ಉತ್ತಮ ಪ್ರದರ್ಶನ ನೀಡಿ ಸಾಧನೆಗೈದ ಮಹಾವಿದ್ಯಾಲಯದ ಕ್ರೀಡಾಪಟುಗಳಾದ ಕಲಂದರ ಬಸಿರ್ ಬದಾಮಿ,

ಅಕ್ಷಯ ಮಲ್ಲಿಕಾರ್ಜುನ ಡಂಬಳ, ಭೀರಪ್ಪ ಕಂಬಳಿಹಾಳ,ಮಂಜುನಾಥ ಬಸಪ್ಪ ಹಕ್ರ್ ಲ್ಲ,ಅಂಬರೀಶ್ ಗರಸಂಗಿ,ಯಮನೂರ ಕುರಿ,ರಾಜು ಸಾಳುಂಕೆ,ಆದರ್ಶ,ಬಸವರಾಜ,ಸಂಗಮೇಶ ಪೂಜಾರಿ, ಮಹಾಂತೇಶ ಬೆಳ್ಳಿಹಾಳ, ಆನಂದಗೌಡ ಗೌಡರ, ಹಾಗೂ ತಂಡದ ಎಲ್ಲಾ ಕ್ರೀಡಾಪಟುಗಳಿಗೆ ವಿಶೇಷವಾಗಿ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ 2೦22-23ನೇ ಶೈಕ್ಷಣಿಕ ಸಾಲಿನ ಬಾಗಲಕೋಟ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಪಾವಳಿಯಲ್ಲಿ ಸರ್ವೋತ್ತಮ ಆಟಗಾರರೆಂದು ಆಯ್ಕೆಯಾದ ಕಲಂದರ ಬಸಿರ್ ಬದಾಮಿ ಮತ್ತು ದೈಹಿಕ ಶಿಕ್ಷಣ ನಿರ್ದೇಶಕ ಲೆಫ್ಟಿನೆಂಟ್ ಎಸ್.ಬಿ.ಚಳಗೇರಿ ಅವರಿಗೆ ವಿ.ಮ.ವಿ.ವ ಸಂಘದ ಕಾರ್ಯಾಧ್ಯಕ್ಷ ಡಾ.ವೀರಣ್ಣ ಚರಂತಿಮಠ,ಗೌರವ ಕಾರ್ಯದರ್ಶಿ ಡಾ. ಮಹಾಂತೇಶ ಕಡಪಟ್ಟಿ,ಆಡಳಿತ ಮಂಡಳಿ ನಿರ್ದೇಶಕರು,ಪ್ರಾಚಾರ್ಯರಾದ ಎಸ್.ಕೆ. ಮಠ,ಒಕ್ಕೂಟದ ಕಾರ್ಯಾಧ್ಯಕ್ಷ ಪ್ರೊ. ಬಿ.ಎ.ಕಂಠಿ,ಐ.ಕ್ಯೂ.ಎ.ಸಿ ಸಂಚಾಲಕ ಡಾ.ಎಸ್.ಆರ್.ಗೋಲಗೊಂಡ,ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ.
ತಾಲೂಕ ವರದಿಗಾರರು: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ.ಹುನಗುಂದ