ನಾಡಿಗೆಲ್ಲಾ ಶಿವರಾತ್ರಿ… ಈ ಗ್ರಾಮದ ಜನಕ್ಕೆ ನಿತ್ಯ ಜಾಗರಣೆ…..!!

ಸೂಲೇನಹಳ್ಳಿ ಮಾರ್ಚ್.11

ಹೌದು, ಇದು ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮುರು ತಾಲೂಕಿನ, ಹಾನಗಲ್ ಗ್ರಾ.ಪಂ‌ ವ್ಯಾಪ್ತಿಯ ಸೂಲೇನಹಳ್ಳಿ ಗ್ರಾಮದ ಜನರ ಚಿಂತಾಜನಕ ಕಥೆ…250-300 ಕುಟುಂಬಗಳು ವಾಸಿಸುವ ಸೂಲೇನಹಳ್ಳಿ ಗ್ರಾಮದ ಇಡೀ ರಸ್ತೆ, ಮನೆಯಂಗಳು ಚರಂಡಿ ನೀರಿನಿಂದ ತುಂಬಿದೆ.ಈ ಎರಡು ತಿಂಗಳ ಹಿಂದೆ ಸೂಲೇನಹಳ್ಳಿ ಗ್ರಾಮ‌ ಮೊಳಕಾಲ್ಮುರಿನ ಕವಾಡಿಗರಹಟ್ಟಿ ಯಾಗುವ ಮುನ್ನ ಜಿಲ್ಲಾಡಳಿತ ಎಚ್ಚೆತ್ತು ಕೊಳ್ಳಲಿ ಎನ್ನು‌ವ ಶೀರ್ಷಿಕೆ ಅಡಿ ಸುದ್ದಿ ಆದಾಗ ಅಲ್ಲಿಗೆ ದೌಡಾಯಿಸಿದ ತಾಲೂಕಾ ಆಡಳಿತ ತಾತ್ಕಾಲಿಕ ಮಾರ್ಗ ಹುಡುಕಿ ‘ಕೈ’ತೊಳೆದು ಕೊಂಡು ತೆರಳಿತ್ತು ,‌ಆದರೆ ಮತ್ತೆ 20 ದಿನಗಳಿಂದ ಇಡೀ ಗ್ರಾಮವೇ ಕೊಳಚೇ ನೀರಿನಿಂದ ತುಂಬಿದೆ !!ಮೂಲ ಕಾರಣವಿಷ್ಟೇ, ಊರಿನ ಪಕ್ಕದಲ್ಲಿ ಹಾದು ಹೋಗುವ ರಾಜ್ಯ ಹೆದ್ದಾರಿ ಪಕ್ಕದ ಹೊಲದ‌ ಮುಖಾಂತರವೇ ಚರಂಡಿ ನಿರ್ಮಿಸಿ ಗ್ರಾಮದ ನೀರು ಮುಂದೆ ಸಾಗಬೇಕು,ಆ ಜಮೀನು ಪಟ್ಟಾ ಆಗಿರುವ ಕಾರಣ, PWD ಭೂ ಸ್ವಾದಿನ ಪಡಿಸಿ ಕೊಂಡು ಸಂಬಂದ ಪಟ್ಟವರಿಗೆ ಪರಿಹಾರ ನೀಡಬೇಕಿತ್ತು ಆದರೆ ಅವರು ಅದನ್ನು‌ ಮಾಡದೇ ರಸ್ತೆ ಪೂರ್ಣಗೊಳಿಸಿ ಕೈತೊಳೆದುಕೊಂಡು ಹೋಗಿದ್ದಾರೆ.ಚರಂಡಿ‌ ನೀರನ್ನು ತಮ್ಮ‌ ಹೊಲದಲ್ಲಿ ಹಾದು ಹೊಗದಂತೆ ಅಡ್ಡ ಹಾಕಿದ್ದಾರೆ..ಕಾರಣ… ಇಡೀ ಗ್ರಾಮವೇ ಸೊಳ್ಳೆ , ನೊಣಗಳಿಂದ ತುಂಬಿ ಊರಿನ ಹಲವಾರು ರೋಗ ರುಜಿನೆಗಳಿಂದ ಜನ‌ ಆಸ್ಪತ್ರೆ ಸೇರುತ್ತಿದ್ದಾರೆ…ಆ ಚರಂಡಿ‌ ನೀರು ಮನೆಯ ಸಂಪ್ ಸೇರುತ್ತಿವೆ, ಇಡೀ ಊರೇ ದುರ್ವಾಸನೆಯ ತಾಣವಾಗಿದೆ..ಈಗ ಗ್ರಾಮಸ್ಥರೆಲ್ಲಾ ಮಾನ್ಯ ತಹಶಿಲ್ದಾರು, ಇಒ, ಪಿಡಬ್ಯೂಡಿ ಅಧಿಕಾರಿಗಳು, ಪಿಡಿಒ, ಬಳಿ ಅಲೆದು ಅಲೆದು ಸುಸ್ತಾಗಿದ್ದಾರೆ…ಕ್ಷೇತ್ರದ ಜನ ಪ್ರತಿನಿಧಿಯ ಬಳಿ ಈ ವಿಷಯವಾಗಿ ತೆರಳಿದ ಜನರಿಗೆ ದೊರಕಿದ್ದು ಖಾಲಿ ‘ಕೈ’ ಉತ್ತರ…ಅಲ್ಲಾ ಸ್ವಾಮಿ,ಅಧಿಕಾರಿಗಳೇ, ಕ್ಷೇತ್ರದ ಜನ ಪ್ರತಿನಿಧಿಗಳೇ, ಒಂದೊಮ್ಮೆ ನಿಮ್ಮ ಮನೆಗಳ ಮುಂದೆ 15-20 ದಿನಗಳಿಂದ ಹೀಗೆ ಚರಂಡಿ ನೀರು ಸಂಗ್ರಹವಾದರೆ ಸುಮ್ಮನಿದ್ದೀರಾ !?ಕಲುಷಿತ ನೀರು‌ ಸೇವನೆಯಿಂದ ಸಾವುಗಳು‌ ಸಂಭವಿಸಿದಾಗ ರಾಜ್ಯದ ಅಷ್ಟೂ ಆಡಳಿತ ಅಲ್ಲಿಗೆ ಭೇಟಿ ನೀಡಿದ ನಿದರ್ಶನ ನಮ್ಮ ಜಿಲ್ಲೆಯಲ್ಲೇ ನೆಡೆದುದ್ದಿದೆ…ಸರ್ಕಾರ,ಆಡಳಿತ ಸೂಲೇನಹಳ್ಳಿ ಜನರು ರೋಗದಿಂದ ನರಳಿ‌ ಸಾವಾಗುವ ತನಕ‌ ಅಲ್ಲಿಗೆ ಬರುವುದಿಲ್ಲ ಎನ್ನುವ ಯೋಜನೆ ನಿಮ್ಮಲ್ಲಿದೆಯೇ…!?ಪಟ್ಟಣಕ್ಕೆ 3 ಕಿ.ಮೀ ದೂರದಲ್ಲಿರುವ, ರಾಜ್ಯ ಹೆದ್ದಾರಿಯಲ್ಲಿಯೇ ಇರುವ ಗ್ರಾಮಕ್ಕೆ‌ ಈ ಪರಿಸ್ಥಿತಿಯಾದರೆ ಇನ್ನು ದೂರದ ಗ್ರಾಮಗಳಲ್ಲಿ ನಿಮ್ಮ‌ಆಡಳಿತ ಹೇಗೆ ಸ್ಪಂದಿಸುತ್ತೀರಿ..!?ಮಾನ್ಯ ಅಧಿಕಾರಿಗಳೇ, ಜನ ಪ್ರತಿನಿಧಿಗಳೇ, ಈ ಗ್ರಾಮದ ಸಮಸ್ಯೆ ಶಾಶ್ವತ ಬಗೆಹರಿಸುವ *”ಗ್ಯಾರಂಟಿ”* ನಿಮ್ಮಗಳಿಂದ & ನಿಮ್ಮ‌ ಸರ್ಕಾರದಿಂದ ತುರ್ತು ಬೇಕಾಗಿದೆ…. ಮಾನವೀಯತೆ ಇನ್ನೂ ನಿಮ್ಮ‌ ಆಡಳಿತ ವ್ಯವಸ್ಥೆಯಲ್ಲಿ ಉಳಿದಿದ್ದರೆ ಆದ್ಯತೆ ಮೇಲೆ ಈ ಗ್ರಾಮದ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಿ…ಧಿಕ್ಕಾರ..ಧಿಕ್ಕಾರ…!!ಧೀರ್ಘ ನಿದ್ದೆಯಲ್ಲಿರೋ ಮೊಳಕಾಲ್ಮೂರು ಆಡಳಿತಕ್ಕೆ,ಅದನ್ನು ಎಚ್ಚರಿಸಲು‌ ಮುಂದಾಗಿದೆ …….! ಎಂದು ವರದಿಯಾಗಿದೆ.

ತಾಲೂಕ ವರದಿಗಾರರು ತಿಪ್ಪೇಸ್ವಾಮಿ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ತಿಪ್ಪೇಸ್ವಾಮಿ.ಹೊಂಬಾಳೆ.ಮೊಳಕಾಲ್ಮೂರು

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button