ಡಾ. ಬಾ.ಆರ್. ಅಂಬೇಡ್ಕರ್ ಅವರು ನೀಡಿದ ಸಂವಿಧಾನ ವಿಶ್ವಕ್ಕೆ ಮಾದರಿಯಾದುದು-ಛಾಯಾ ಪುರಂದರೆ.
ಹುನಗುಂದ ಸಪ್ಟೆಂಬರ್.16

ಸಾಮಾಜಿಕ ನ್ಯಾಯ,ಸಮಾನತೆ,ಪ್ರಜೆಗಳೆಲ್ಲರ ಒಳಿತನ್ನು ಬಯಸುವ ಭಾರತದ ಸಂವಿಧಾನ ವಿಶ್ವಕ್ಕೆ ಮಾದರಿಯಾದುದು ಎಂದು ಉಪನ್ಯಾಸಕಿ ಛಾಯಾ ಪುರಂದರೆ ಹೇಳಿದರು.ಪಟ್ಟಣದ ವಿದ್ಯಾನಗರ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ತಾಲೂಕಾ ಆಡಳಿತ, ತಾಲೂಕಾ ಪಂಚಾಯತ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ಅಂತರ್ ರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಮತ್ತು ಸಾಮೂಹಿಕ ಸಂವಿಧಾನ ಪೀಠಿಕೆ ವಾಚನ ಕಾರ್ಯಕ್ರಮದಲ್ಲಿ ಮಾತನಾಡಿ ಪ್ರಜೆಗಳೆಲ್ಲರಿಗೂ ವ್ಯಕ್ತಿ ಸ್ವಾತಂತ್ರ್ಯ,ಆಂತರಿಕ ಸಾರ್ವಭೌಮತೆ,ಮುಕ್ತ ಬದುಕುವ ಅವಕಾಶ ಕಲ್ಪಿಸಿದ ಸಂವಿಧಾನದ ಪೀಠಿಕೆಯಲ್ಲಿನ ಪ್ರತಿ ಅಂಶಗಳೂ ದೇಶವಾಸಿಗಳ ಸರ್ವತೋಮುಖ ಏಳ್ಗೆಗೆ ಸಹಕಾರಿಯಾಗಿದ್ದು ನಾವುಗಳೆಲ್ಲ ಅವುಗಳ ಮಹತ್ವ ಅರಿಯುವುದರ ಅವಶ್ಯವಿದೆ ಎಂದರು.ಅಂತರ್ ರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಸಮಿತಿ ಸದಸ್ಯರಾದ ಶರಣಪ್ಪ ಆಮದಿಹಾಳ ಮತ್ತು ವಿಜಯ ಮಹಾಂತೇಶ ಗದ್ದನಕೇರಿ ಮಾತನಾಡಿ ಸಂವಿಧಾನ ಭಾರತದ ಎಲ್ಲ ನಾಗರಿಕರಿಗೆ ಆರ್ಥಿಕ, ಸಾಮಾಜಿಕ,ಅಭಿವ್ಯಕ್ತಿ ಸ್ವಾತಂತ್ರವನ್ನು ನೀಡಿದ್ದು ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ ಅಂಬೇಡ್ಕರ್ರ ದೂರದೃಷ್ಟಿಯ ಫಲವಾಗಿ ದೇಶವಾಸಿಗಳೆಲ್ಲ ಸಮಾಜವಾದಿ ನೆಲೆಯಲ್ಲಿ ವಾಸಿಸುವಂತಾಗಿದ್ದು. ಸಂವಿಧಾನದ ಆಶಯಗಳು ಎಲ್ಲರಿಗೂ ಮನವರಿಕೆಯಾಗಬೇಕಿದೆ ಎಂದರು.ತಹಶೀಲ್ದಾರ ನಿಂಗಪ್ಪ ಬಿರಾದಾರ ಅಧ್ಯಕ್ಷತೆಯನ್ನು ವಹಿಸಿಕೊಂಡು ಮಾತನಾಡಿ ಸಂವಿಧಾನ ಎಂಬುದು ಪ್ರಜಾಪ್ರಭುತ್ವದ ಕೀಲಿಕೈಯಂತಿದ್ದು ಅದರ ಪೀಠಿಕೆಯಲ್ಲಿನ ಪ್ರಮುಖ ಅಂಶಗಳನ್ನು ನಾವೆಲ್ಲ ಅರ್ಥೈಸಿಕೊಳ್ಳುವುದರ ಅಗತ್ಯವಿದೆ ಎಂದರು. ಈ ಸಂದರ್ಭದಲ್ಲಿ ಸದಸ್ಯರಾದ ಶಿವಾನಂದ ಕಂಠಿ, ಶರಣಪ್ಪ ಆಮದಿಹಾಳ,ಡಿ.ಎಚ್.ಮಾದರ, ವಿಜಯ ಮಹಾಂತೇಶ ಗದ್ದನಕೇರಿ,ಭೀಮಪ್ಪ ಗೋನಾಳ,ಮುತ್ತಣ್ಣ ಭಜಂತ್ರಿ,ರಾಜು ಈಟಿ,ಮುತ್ತಣ್ಣ ಕಲಗೋಡಿ,ಮುತ್ತಣ್ಣ ಬ್ಯಾಳಿ,ಶಿರಸ್ತೆದಾರ ಈಶ್ವರ ಗಡ್ಡಿ,ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ ಕಟ್ಟಿಮನಿ,ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಗುರುರಾಜ ಖ್ಯಾಡಿ,ಅಬಕಾರಿ ಇಲಾಖೆ ಅಧಿಕಾರಿ ಮಂಜುನಾಥ ಸಿಂಗರಡ್ಡಿ,ಶಿಶು ಅಭಿವೃದ್ಧಿ ಅಧಿಕಾರಿ ಅನ್ನಪೂರ್ಣ ಕುಬಕಡ್ಡಿ,ಕಲ್ಮೇಶ ಭಜಂತ್ರಿ,ಪ್ರಥಮ ದರ್ಜೆ ಕಾಲೇಜು, ಪದವಿ ಪೂರ್ವ ಕಾಲೇಜು, ಪ್ರೌಢಶಾಲೆಯ ಸಿಡಿಸಿ ಸದಸ್ಯರು, ಮುಖ್ಯಸ್ಥರು, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು, ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಪಾಲ್ಗೊಂಡಿದ್ದರು.ರುಸ್ತಾ ಬೇಗಂ ಹಲಕಾವಟಗಿ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಸಮಾಜ ಕಲ್ಯಾಣ ಅಧಿಕಾರಿ ಎಂ.ಎಚ್.ಕಟ್ಟಿಮನಿ ಸ್ವಾಗತಿಸಿದರು.ಶಿಕ್ಷಕ ಬಿ.ಆರ್.ಹಿರೇಮಠ ಸಂವಿಧಾನದ ಪೀಠಿಕೆ ಓದಿಸಿದರು. ಸಿದ್ದಲಿಂಗಪ್ಪ ಬೀಳಗಿ ನಿರೂಪಿಸಿ, ಉಪನ್ಯಾಸಕ ಐ.ಎಚ್.ನಾಯಕ ವಂದಿಸಿದರು.
ತಾಲೂಕ ವರದಿಗಾರರು: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ.ಹುನಗುಂದ