ಮಾಜಿ ಸಚಿವರಾದ ಸಾ.ರಾ ಮಹೇಶ್ ರವರು ನೀಡಿದ್ದ ₹1 ಲಕ್ಷದ ಚೆಕ್ಕನ್ನು ಮಗಳನ್ನು ಕಳೆದುಕೊಂಡ ಅಲೆಮಾರಿ ಕುಟುಂಬಕ್ಕೆ – ಡಿ.ಎಸ್.ಎಸ್ ರಾಜ್ಯ ನಾಯಕ ರಿಂದ ವಿತರಣೆ.
ಕಲಬುರ್ಗಿ ಅ.16

ಮೈಸೂರು ನಗರದಲ್ಲಿ ಇತ್ತೀಚಿಗೆ ಅಲೆಮಾರಿ ಕುಟುಂಬದ 10 ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಕೊಲೆಯಾಗಿದ್ದ ಬಾಲಕಿಯ ನಿರ್ಗತಿಕ ಅಲೆಮಾರಿ ಕುಟುಂಬಕ್ಕೆ ಮಾಜಿ ಸಚಿವರಾದ ಸಾ.ರಾ ಮಹೇಶ್ ರವರು ನೀಡಿದ್ದ 1 ಲಕ್ಷ ರೂ. ಗಳ ಚೆಕ್ಕನ್ನು ದಿನಾಂಕ : 15-10-2025 ರ ಬುಧವಾರ ಮೈಸೂರು ಜಿಲ್ಲಾ ದಸಂಸ ನಿಯೋಗವು ಗುಲ್ಬರ್ಗಾಕ್ಕೆ ತೆರಳಿ ಬಾಲಕಿಯ ನಿರ್ಗತಿಕ ಅಲೆಮಾರಿ ಕುಟುಂಬವನ್ನು ಭೇಟಿ ಮಾಡಿ ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ದಸಂಸದ ಕೆ. ನಂಜಪ್ಪ ಬಸವನಗುಡಿ ರವರು ಬಾಲಕಿಯ ತಂದೆ ತಾಯಿಗೆ ಚೆಕ್ಕನ್ನು ಕೊಟ್ಟು ಮಾತನಾಡಿ ಹುಟ್ಟು ಸಾವುಗಳಿಗೆ ದಾಖಲೆಗಳೇ ಇಲ್ಲದೆ ಅವಮಾನ ಹಂಗಿನ ಜೀವನವನ್ನು ಸಾಗಿಸುತ್ತಾ ನೆಲೆಯೇ ಇಲ್ಲದೆ ಹೊಟ್ಟೇ ಪಾಡಿಗಾಗಿ ಗುಲ್ಬಾರ್ಗಾದಿಂದ ಮೈಸೂರು ದಸರಾಕ್ಕೆ ಅಂಬಿಕಾ ದೇಸು ದಂಪತಿಗಳು ತಮ್ಮ ಜೊತೆ 10 ವರ್ಷದ ಮಗಳೊಂದಿಗೆ ಬಲೂನ್ ಮಾರಾಟ ಮಾಡಲು ಬಂದಿದ್ದ ಸಂದರ್ಭದಲ್ಲಿ ಕಿರಾತಕ ವ್ಯಕ್ತಿಯೊಬ್ಬ ಅತ್ಯಾಚಾರವೆಸಗಿ ಭೀಕರವಾಗಿ ಕೊಲೆ ಮಾಡಿರುವುದು ಮನುಕುಲವೇ ಆತಂಕ ಪಡುವಂತಾಗಿದ್ದು, ಸಾಂಸ್ಕೃತಿಕ ನಗರಿ ಮೈಸೂರಿಗೆ ಒಂದು ಕಪ್ಪು ಚುಕ್ಕೆಯಾಗಿದೆ. ಮಗಳನ್ನು ಕಳೆದುಕೊಂಡ ನಿರ್ಗತಿಕ ಅಲೆಮಾರಿ ಕುಟುಂಬಕ್ಕೆ ಮಾಜಿ ಸಚಿವರಾದ ಸಾ.ರಾ ಮಹೇಶ್ ರವರು ಅವರ ಕುಟುಂಬದ ವತಿಯಿಂದ ಈ ನೊಂದ ಕುಟುಂಬಕ್ಕೆ 1 ಲಕ್ಷ ರೂ. ಗಳ ಚೆಕ್ಕನ್ನು ಕೊಡುವುದಾಗಿ ಘೋಷಿಸಿ ಈ ಚೆಕ್ಕನ್ನು ಅಲೆಮಾರಿ ಸಮುದಾಯಗಳ ಬಗ್ಗೆ ಸದಾ ಹೋರಾಡುತ್ತಿರುವ ದಸಂಸದ ನಿಂಗರಾಜ್ ಮಲ್ಲಾಡಿಯವರ ಮೂಲಕವೇ ಈ ನೊಂದ ನಿರ್ಗತಿಕ ಅಲೆಮಾರಿ ಕುಟುಂಬಕ್ಕೆ ಚೆಕ್ಕನ್ನು ತಲುಪಿಸುವಂತೆ ತಿಳಿಸಿದ್ದರು.

ಈ ಹಿನ್ನಲೆಯಲ್ಲಿ ನಮ್ಮ ನಾಯಕರಾದ ನಿಂಗರಾಜ್ ಮಲ್ಲಾಡಿ ರವರ ಸೂಚನೆ ಮೇರೆಗೆ ಇಂದು ಗುಲ್ಬಾರ್ಗಾದ ತಾಜ್ ಸುಲ್ತಾನ್ ನಲ್ಲಿರುವ ಅಲೆಮಾರಿಗಳ ಗುಡಿಸಲಿಗೆ ಬಂದು ಈ 1 ಲಕ್ಷ ರೂ. ಗಳ ಚೆಕ್ಕನ್ನು ಮೃತ ಬಾಲಕಿಯ ತಂದೆ ತಾಯಿಯರಾದ ಅಂಬಿಕಾ, ದೇಸು ರವರಿಗೆ ತಲುಪಿಸಲಾಯಿತು. ಮಗಳನ್ನು ಕಳೆದುಕೊಂಡು ರೋಧಿಸುತ್ತಿರುವ ಈ ಅಲೆಮಾರಿ ಕುಟುಂಬದ ನೋವಿಗೆ ಸ್ಪಂದಿಸಿರುವ ಸಾ.ರಾ ಮಹೇಶ್ ರವರಿಗೆ ಎಲ್ಲಾ ದಲಿತರ, ನೊಂದವರ, ಅಲೆಮಾರಿಗಳ ಪರವಾಗಿ ದಸಂಸದ ವತಿಯಿಂದ ಅಭಿನಂದನೆ ಸಲ್ಲಿಸುತ್ತಿದ್ದೇವೆ ಎಂದರು.

ಈ ಸಂದರ್ಭದಲ್ಲಿ ಮೈಸೂರು ಅಲೆಮಾರಿ ಸಂಘದ ಅಧ್ಯಕ್ಷರಾದ ವೆಂಕಟೇಶ್ ಏಕಲವ್ಯ ನಗರ, ಬಾಲಕಿಯ ತಂದೆ ದೇಸು, ತಾಯಿ ಅಂಬಿಕಾ ಹಾಗೂ ಸ್ಥಳೀಯ ಅಲೆಮಾರಿ ಸಮುದಾಯದ ಇತರೆ ಮುಖಂಡರು ಹಾಜರಿದ್ದರು.
“ಹಸಿದವರು, ನೊಂದವರು, ಬೀದಿಯಲ್ಲಿ ಬಿದ್ದ ಎಲ್ಲಾ ಜಾತಿಯ ನೊಂದ ಜನರಿಗೆ ರಾಜ್ಯ ಡಿ.ಎಸ್.ಎಸ್ ಸಂಘವು ಸದಾ ಧ್ವನಿ ಯಾಗಿರುತ್ತದೆ” – ಎಂದ ನಿಂಗರಾಜ್ ಮಲ್ಲಾಡಿಯವರು.

