ಸರಳ ಸಜ್ಜನಿಕೆಯ ಮುತ್ತು…..

ಉತ್ತರ ಪ್ರದೇಶದ ಮುಗಲ್ಸರಾಯಿಯಲ್ಲಿ

ಜನಿಸಿದರು

ಕಿತ್ತು ತಿನ್ನುವ ಬಡತನದಲ್ಲಿಯೇ ಬೆಳೆದರು

ಚಿಕ್ಕ ವಯಸ್ಸಲಿ ತಂದೆಯನ್ನು ಕಳೆದುಕೊಂಡರು

ತಾಯಿಯ ಪ್ರೀತಿಯಲ್ಲಿಯೇ ಶಿಕ್ಷಣವ ಕಲಿತರು

ಭಾರತದ ಎರಡನೇ ಉತ್ತಮ ಪ್ರಧಾನಿಯಾಗಿ

ಸರ್ಕಾರದ ಸಂಬಳದಲ್ಲಿ ಬದುಕು ಸಾಗಿ

ವಾರದ ಸೋಮವಾರ ಉಪವಾಸವಿದ್ದ

ಯೋಗಿ

ಇದಕ್ಕೆ ಭಾರತವೇ ನಿಮಗೆ ಶರನೆಂದು ತಲೆಬಾಗಿ

ಕಾಶಿ ವಿದ್ಯಾಪೀಠದಿಂದ ಶಾಸ್ತ್ರಿ ಪದವಿ ಪಡೆದು

ಲಲಿತಾ ದೇವಿಯು ಬಾಳ ಸಂಗಾತಿಯಾಗಿ

ಒಲಿದು

ಪ್ರಾಮಾಣಿಕತೆಗೆ ದಕ್ಷತೆಗೆ ತಾವು ದುಡಿದು

ಮರಣೋತ್ತರ ಭಾರತ ರತ್ನ ಪ್ರಶಸ್ತಿಯು

ತಮ್ಮದು

ಭಾರತದ ಸರಳ ಸಜ್ಜನಿಕೆಯ ಮುತ್ತು

ನಿಮ್ಮ ಅಧಿಕಾರದಲ್ಲಿ ಭಾರತಕ್ಕಾಗಲಿಲ್ಲ ಆಪತ್ತು

ಬಗೆಹರಿಸಿದರೆ ಭಾರತಕ್ಕೆ ಬಂದ ಹಲವಾರು

ವಿಪತ್ತು

ನೀವು ಭಾರತ ಮಾತೆ ಪಡೆದ ಅಮೂಲ್ಯವಾದ

ಸ್ವಾತಿಮುತ್ತು

ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದಿದ್ದು

ಜೋರಾಯಿತು ಜೈ ಜವಾನ್ ಜೈ ಕಿಸಾನ್

ಘೋಷಣೆಯ ಸದ್ದು

ಬಾಲ್ಯದ ಬಡತನದಲ್ಲಿಯೇ ಸಾಧಕರಾಗಿ ಎದ್ದು

ಕಣ್ಮರೆಯಾದಿರಿ ವಿಶ್ವದ ಹೃದಯವೆಲ್ಲವ ಕದ್ದು

ಶ್ರೀ ಮುತ್ತು.ಯ.ವಡ್ಡರ

( ಶಿಕ್ಷಕರು,ಹಿರೇಮಾಗಿ )

ಬಾಗಲಕೋಟ

Mob-9845568484

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button