ಅಕ್ಟೋಬರ್.2 ರಂದು ಮೊಳಕಾಲ್ಮುರು ಶಾಸಕರು ಗಾಂಧಿ ಜಯಂತಿ ಆಚರಿಸಿದರು.

ಮೊಳಕಾಲ್ಮುರು ಅಕ್ಟೋಬರ್.3

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಕ್ಷೇತ್ರದ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಎನ್ ವೈ ಗೋಪಾಲಕೃಷ್ಣ ರವರು ರಾಂಪುರ ಸಮುದಾಯ ಆರೋಗ್ಯ ಕೇಂದ್ರ ಆವರಣದಲ್ಲಿ ಮಹತ್ವಕಾಂಕ್ಷಿ ಯೋಜನೆ ‘ಆಯುಷ್ಮಾನ್ ಭವ’ ಆರೋಗ್ಯ ಮೇಳಕ್ಕೆ ಚಾಲನೆ ನೀಡಿದರು* ಈ ಸಂದರ್ಭದಲ್ಲಿ ಗಾಂಧಿ ಜಯಂತಿಯನ್ನು ಆಚರಿಸಿ ಮಹಾತ್ಮ ಗಾಂಧೀಜಿ ಸ್ವಾತಂತ್ರ್ಯಕ್ಕೋಸ್ಕರ ಹೋರಾಡಿದ ಲಾಲ್ ಬಹದ್ದೂರ್ ಶಾಸ್ತ್ರಿ ಸುಭಾಷ್ ಚಂದ್ರ ಬೋಸ್ ವಲ್ಲಬಾಯ್ ಪಟೇಲ್ ರಾಣಿ ಚೆನ್ನಮ್ಮ ಇನ್ನೂ ಅನೇಕ ಗಣ್ಯಮಾನ್ಯರು ಭಾರತ ದೇಶಕ್ಕಾಗಿ ಪ್ರಾಣ ಹಿಂಸೆ ತ್ಯಾಗ ಬಲಿದಾನವನ್ನು ಮಾಡಿ ಭಾರತ ದೇಶಕ್ಕೆ ಸ್ವಾತಂತ್ರ್ಯವನ್ನು ತಂದುಕೊಟ್ಟರು ಎಂದು ಶಾಸಕರು ಹೇಳಿದರು.

ಮತ್ತು ಕಾರ್ಯಕರ್ತರು ಭಾಗವಹಿಸಿ ಸ್ವಚ್ಛತಾ ಕಾರ್ಯ ಕ್ರಮವನ್ನು ಮಾನ್ಯ ಶಾಸಕರ ನೇತೃತ್ವದಲ್ಲಿ ಹಮ್ಮಿಕೊಂಡಿದ್ದರು ಸ್ವಚ್ಛತೆ ಅಂದರ ಚರಂಡಿ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಕೊಳಚೆ ಇರುವ ಪ್ರದೇಶಗಳು ಮತ್ತು ಪ್ಲಾಸ್ಟಿಕ್ ಮುಕ್ತ ಸ್ವಚ್ಛತಾ ಕಾರ್ಯ ಕ್ರಮದಲ್ಲಿ ಭಾಗವಹಿಸಿ ನಮ್ಮ ಮನೆ ಹೇಗೆ ಸ್ವಚ್ಛವಾಗಿರುತ್ತದೆ ಹಾಗೇನೆ ಸಾರ್ವಜನಿಕರ ಓಡಾಡುವ ರಸ್ತೆಗಳಾಗಿರಲಿ ಚರಂಡಿಗಳಾಗಿರಲಿ ಸರ್ಕಾರದ ಆಫೀಸಿಗಳಾಗಲಿ ಎಲ್ಲವೂ ಸ್ವಚ್ಛತೆಯಿಂದ ಕಾಪಾಡಬೇಕು ಸೊಳ್ಳೆ ಹಂದಿ ಜ್ವರ ಡೆಂಗೀ ಜ್ವರ ಕಾಲರಗಳು ಸಾರ್ವಜನಿಕರಿಗೆ ಹರಡದಂತೆ ನೋಡಿಕೊಳ್ಳಬೇಕೆಂದು ಎನ್ ವೈ ಗೋಪಾಲಕೃಷ್ಣ ಶಾಸಕರು ಹೇಳಿದರು.ರಾಂಪುರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ನಾಗವೇಣಿ ರವಿಕುಮಾರ್, ವೈದ್ಯಾಧಿಕಾರಿಗಳು ಆಶಾ ಮತ್ತು ಅಂಗನವಾಡಿ,ಕಾರ್ಯಕರ್ತರು ಮೊದಲಾದವರು ಉಪಸ್ಥಿತರಿದ್ದರು. ಎಂದು ವರದಿಯಾಗಿದೆ.

ತಾಲೂಕ ವರದಿಗಾರರು:ತಿಪ್ಪೇಸ್ವಾಮಿ.ಹೊಂಬಾಳೆ. ಮೊಳಕಾಲ್ಮುರು

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button