ಭೀಮಾ ತೀರದ ಸಾಲೋಟಗಿಯಲ್ಲಿ ಕೊಲೆ -, ದುಷ್ಕರ್ಮಿಗಳು ಪರಾರಿ.
ಇಂಡಿ ಸಪ್ಟೆಂಬರ್.15

ಜಮೀನಿನಲ್ಲಿ ಮಲಗಿದ್ದ ವೃದ್ಧನ್ನು ದುಷ್ಕರ್ಮಿಗಳು ಭೀಕರವಾಗಿ ಹತ್ಯೆ ಗೈದಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಸಾಲೋಟಗಿ ಗ್ರಾಮದಲ್ಲಿ ನಡೆದಿದೆ. 55 ವರ್ಷದ ಶಿವಯೋಗಪ್ಪ ಬಡಿಗೇರ ಹತ್ಯೆಯಾಗಿರುವ ದುರ್ದೈವಿ. ಇನ್ನು ಜಮೀನಿನಲ್ಲಿ ಮಲಗಿದ್ದ ವೇಳೆ ಶಿವಯೋಗಪ್ಪನ ಕುತ್ತಿಗೆ ಕೊಯ್ದು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಆದ್ರೇ, ಹತ್ಯೆಗೆ ನಿಖರವಾದ ಮಾಹಿತಿ ಲಭ್ಯವಾಗಿಲ್ಲ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇಂಡಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ ಪ್ರಕರಣ ದಾಖಲಾಗಿದೆ ಮುಂದಿನ ತನಿಖೆ ಕೈ ಗೊಂಡಿದ್ದಾರೆ.
ತಾಲೂಕ ವರದಿಗಾರರ:ಶಿವಪ್ಪ.ಬಿ.ಹರಿಜನ.ಇಂಡಿ