ಮೊಳಕಾಲ್ಮೂರು ಜಿಲ್ಲಾ ಪಂಚಾಯತಿ ಇಲಾಖೆಯಲ್ಲಿ ವಾರಕ್ಕೊಮ್ಮೆ ಶುಕ್ರವಾರ ವಿಶೇಷ ಪೂಜೆ.
ಮೊಳಕಾಲ್ಮುರು ಅಕ್ಟೋಬರ್.13

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಜಿಲ್ಲಾ ಪಂಚಾಯತ್ ಉಪ ವಿಭಾಗ ಇಂಜಿನೀಯರ್ ಇಲಾಖೆ ಕಚೇರಿಯಲ್ಲಿ ವಿಶೇಷವಾಗಿ ವಾರಕ್ಕೊಮ್ಮೆ ಸರಸ್ವತಿ ಪೂಜೆಯನ್ನು ಸರಸ್ವತಿ ಭಾವ ಚಿತ್ರಕ್ಕೆ ಹೂವಿನ ಹಾರ ಹಾಕಿ ತೆಂಗಿನಕಾಯಿ ಒಡೆದು ಶಾರದ ದೇವಿಗೆ ಊದಿನ ಕಡ್ಡಿಯನ್ನು ಬೆಳಗಿಸಿ ಮತ್ತು ಮತ್ತು ದೀಪ ಬೆಳಗಿಸಿ ಮಂಗಳಾರತಿ ಮಾಡಿ ಅಧಿಕಾರಿಗಳು ಕೈ ಮುಗಿತಾರೆ ಸರಸ್ವತಿ ದೇವಿಯ ಆಶೀರ್ವಾದ ಪಡೆದು ಕೊಳ್ಳುತ್ತಾರೆ.

ಮತ್ತು ಲಕ್ಷ್ಮಿ ಸರಸ್ವತಿ ವಿಘ್ನೇಶ್ವರ ಭಾವ ಚಿತ್ರಕ್ಕೆ ಸಹ ನಮಸ್ಕಾರ ಮಾಡಿ ಫಳಾರದೊಂದಿಗೆ ಕಾರ ಮಂಡಕ್ಕಿ ಹಂಚುತ್ತಾರೆ ಜಿಲ್ಲಾ ಪಂಚಾಯತಿಯಲ್ಲಿ ಇಲಾಖೆ ಸಿಬ್ಬಂದಿಗಳು ಎ ಡಬ್ಲ್ಯೂ ಆದ ಕೆ ನಾಗನಗೌಡ ಅಧಿಕಾರಿಗಳು ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಎನ್ ವೈ ಗೋಪಾಲಕೃಷ್ಣ ಶಾಸಕರ ಆಪ್ತ ಸಹಾಯಕರಾದ ಶ್ರೀಕಾಂತ್ ಭಾಗವಹಿಸಿ ಸೆಕ್ಷನ್ ಇಂಜಿನೀಯರ್ ಗಳು ಮತ್ತು ಗುತ್ತಿಗೆದಾರರು ಭಾಗವಹಿಸಿ ಕಾರ ಮಂಡಕ್ಕಿ ಪ್ರಸಾದವನ್ನು ಎಲ್ಲರೂ ಸ್ವೀಕರಿಸಿದರು ಶುಕ್ರವಾರ ವಿಶೇಷ ಸರಸ್ವತಿ ಪೂಜೆಯನ್ನು ನೇಮಿಸುತ್ತಾರೆ ಎಂದು ವರದಿಯಾಗಿದೆ.
ತಾಲೂಕ ವರದಿಗಾರರು:ತಿಪ್ಪೇಸ್ವಾಮಿ.ಹೊಂಬಾಳೆ. ಮೊಳಕಾಲ್ಮುರು