ರತ್ನಾಕರ ವಾಲ್ಮೀಕಿ ಮಹರ್ಷಿ…..

ಭಾರತದ ಶ್ರೇಷ್ಠ ಋಷಿ ಹಾಗೂ ಕವಿಯು

ರಾಮಾಯಣ ಮಹಾಕಾವ್ಯದ ರೂವಾರಿ

ವಾಲ್ಮೀಕಿಯು

ರತ್ನಾಕರನಾಗಿ ಹುಟ್ಟಿದ ಆಧ್ಯಾತ್ಮಿಕ

ಆದಿಕವಿಯು

ನಾರದನ ಉಪದೇಶದಿಂದ ಜ್ಞಾನೋದಯವು

ಪ್ರಚೇತಸನ ಮುನಿಯ ಮಗ ಪ್ರಾಚೇತಸನು

ಪರಮಾತ್ಮನ ತಪಸ್ಸಿನಲಿ ಹುತ್ತದಿ

ವಾಲ್ಮೀಕಿಯಾದನು

ನೋಡಿದರು ತಮಸಾ ನದಿ ತೀರದ

ಕ್ರೌಂಚಪಕ್ಷಿಗಳನು

ಮರೆಯಲಿಲ್ಲ ರಾಮಾಯಣ ರಚನೆಗೆ

ಸ್ಪೂರ್ತಿಯಾದ ಘಟನೆಯನು

ಆಶ್ವಯುಜ ಶುದ್ಧ ಹುಣ್ಣಿಮೆಯ ಸುದಿನ

ಆಚರಿಸುವೆವು ಮಹರ್ಷಿ ವಾಲ್ಮೀಕಿ ಜಯಂತಿ

ದಿನ

ಸ್ಪೂರ್ತಿಯಾಗಲಿ ವಾಲ್ಮೀಕಿ ಅವರ ಬದುಕು

ಪ್ರತಿದಿನ

ಶ್ರೇಷ್ಠ ಕವಿಗೆ ಭಕ್ತಿ ಪೂರ್ವಕ ನಮನ

24000 ಶ್ಲೋಕಗಳಿರುವ ರಾಮಾಯಣ

ಬರೆದವರು

ಜ್ಞಾನ ಗಳಿಸುವ ಜನರು ವಾಲ್ಮೀಕಿಯ

ಆರಾಧಿಸುವವರು

ಈ ಸುದಿನವನ್ನು ಪರ್ಗಟ್ ದಿವಸ ಎನ್ನುವರು

ವಾಲ್ಮೀಕಿ ಮಹರ್ಷಿಯು ವಿಶ್ವಕೆ

ಸ್ಪೂರ್ತಿಯಾದವರು

ಶ್ರೀ ಮುತ್ತು.ಯ.ವಡ್ಡರ( ಶಿಕ್ಷಕರು )

ಸಾ-ಹಿರೇಮಾಗಿ

ಬಾಗಲಕೋಟ

Mob-9845568484

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button