ಶಿಶುಪಾಲನಾ ಕೇಂದ್ರದ ಮಕ್ಕಳನ್ನು ನಿಮ್ಮ ಮಕ್ಕಳಂತೆ ಪೋಷಿಸಿ – ಇ.ಓ ದೇಶಪಾಂಡೆ.
ಹುನಗುಂದ ಅಕ್ಟೋಬರ್.31

ಶಿಶುಪಾಲನಾದಲ್ಲಿ ಬರುವ ಯಾವುದೇ ಮಗುವನ್ನು ನಿಮ್ಮ ಮಕ್ಕಳಂತೆ ಪೋಷಿಸಿದರೇ ಮಾತ್ರ ಈ ಯೋಜನೆ ಯಶಸ್ವಿಗೊಳಲು ಸಾಧ್ಯವೆಂದು ಹುನಗುಂದ – ಇಲ್ಲಕಲ್ಲ ತಾಲೂಕಿನ ಕಾರ್ಯನಿರ್ವಾಹಕ ಅಧಿಕಾರಿ ಮುರಳಿಧರ ದೇಶಪಾಂಡೆ ತಿಳಿಸಿದರು.ಹುನಗುಂದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಜರುಗಿದ ಏಳು ದಿನಗಳ ಶಿಶು ಆರೈಕೆದಾರರ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ನರೇಗಾ ಕೂಲಿ ಕಾರ್ಮಿಕರಿಗಾಗಿಯೇ ಶಿಶುಪಾಲನಾ ಕೇಂದ್ರಗಳ ಪ್ರಾರಂಭಿಸುತ್ತಿದ್ದು, ಕೂಲಿ ಕಾರ್ಮಿಕರಿಗೆ ಕೆಲಸದ ಜೊತೆಗೆ ಅವರ ಮಕ್ಕಳನ್ನು ಆರೈಕೆ ಮಾಡುವ ಸದುದ್ದೇಶದಿದ್ದಲೇ ಕೂಸಿನ ಮನೆ ಯೋಜನೆ ಪ್ರಾರಂಭವಾಗಿದೆ. ತರಬೇತಿ ಪಡೆದ ಆರೈಕೆದಾರರು ಗೌರವ ಧನದ ಆಧಾರದ ಮೇಲೆ ಕೆಲಸ ಮಾಡಬೇಕು. ಕೂಲಿ ಕಾರ್ಮಿಕರ ಅವರ ಮಕ್ಕಳು ಜೋಪಾನ ಮಾಡುವುದು ಬಹಳ ಕಠಿಣ ಕೆಲಸ ಅದು ತಾಯಂದಿರಿಂದ ಮಾತ್ರ ಸಾಧ್ಯವೆಂದು ತಿಳಿಸಿದರು.ಬಳಿಕ 7 ದಿನಗಳಿಂದ ಪಡೆದ ತರಬೇತಿ ಪಡೆದ ಆರೈಕೆದಾರರು ತರಬೇತಿ ಪಡೆದ ಕುರಿತು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಮಾಸ್ಟರ್ ಟ್ರೇನರ್ಸ್ ಗಳಾದ ಶೀವಲೀಲಾ ಸರಗಣಚಾರಿಮಠ, ಬಸವರಾಜ ಕೊಪ್ಪದ, ಹಿರಿಯ ಮೇಲ್ವಿಚಾರಕಿ ವಿಜಯಾ ಶಿರೂರ, ಐಇಸಿ ಸಂಯೋಜಕಿ ಯಲ್ಲಮ್ಮ ಬಂಡ್ರಿ, ಕಾಯಕ ಮಿತ್ರರು, ತಾಪಂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.