ಕರೆಂಟ್ ಶಾಕ್ ಹೊಡೆದು ಕಂಬದಲ್ಲೇ ನೇತಾಡಿದ ಲೈನ್ ಮ್ಯಾನ್ – ಕಾರಣ ಏನು…..?

ದೂಪದಹಳ್ಳಿ ಮೇ .01

ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನ ದೂಪದಹಳ್ಳಿ ಗ್ರಾಮದಲ್ಲಿ ದಿನಾಂಕ ಏ 30 ರ ಸಾಯಂಕಾಲ ಸುಮಾರು 5:20 ಗಂಟೆಗೆ ಕೊಟ್ಟೂರು ಗ್ರಾಮಾಂತರ ಶಾಖಾಧಿಕಾರಿ ಕೊಟ್ರೇಶ್ ಎಂಬುವರ ಹೊಲದಲ್ಲಿ ಲೈನ್ ಬದಲಾವಣೆ ಮಾಡುವಾಗ ತಪ್ಪು ಮಾಹಿತಿ ನೀಡಿರೋ ಆರೋಪ. ಮೇಲಾಧಿಕಾರಿಗಳ ನಿರ್ಲಕ್ಷ್ಯತನ ಇರಬಹುದೇ…..? ಕರೆಂಟ್ ಶಾಕ್ ಒಡೆದು ಕಂಬದಲ್ಲಿ ನೇತಾಡಿದ ಲೈನ್ ಮ್ಯಾನ್ ಗಜಪುರ ಗ್ರಾಮದ ಅಜ್ಜಯ್ಯ 25 ವರ್ಷದ ಯುವಕ ಮೃತಪಟ್ಟ ಲೈನ್ ಮ್ಯಾನ್ ಅಜ್ಜಯ್ಯ ಎಂಬುವರು ಹ್ಯಾಳ್ಯ ಪಂಚಾಯ್ತಿಯ ಲೈನ್ ಮ್ಯಾನ್ ಉಜ್ಜಯಿನಿ ಪಂಚಾಯ್ತಿಯ ಮಂಜುನಾಥ್ ಎಂಬ ಲೈನ್ ಮ್ಯಾನ್ ಇವರಿಬ್ಬರೂ ಕೊಟ್ರೇಶ್ ಗ್ರಾಮಾಂತರ ಶಾಖಾಧಿಕಾರಿ ಎಂಬುವರ ಹೊಲದಲ್ಲಿ ಟಿ.ಸಿ ಹಾಕಲು ಹೋದಾಗ.

ಹಿರಿಯ ಅಧಿಕಾರಿಗಳು ಸರಿಯಾದ ಮಾಹಿತಿ ನೀಡದೆ ಲೈನ್ ಬದಲಾವಣೆ ಮಾಡಲು ಸೂಚನೆ ನೀಡಿರಬಹುದು ಆದರೆ ಅಜ್ಜಯ್ಯ ಎಂಬುವರು ಮೃತಪಟ್ಟಿರುವುದು ಹಲವು ಮನಸ್ಸುಗಳಿಗೆ ಬೇಸರ ಎಂದು ಅಲ್ಲಿನ ಸಾರ್ವಜನಿಕರು ಮತ್ತು ಸಂಘಟನಾಕಾರರು ಮಾತನಾಡಿ ಕೊಳ್ಳುತ್ತಿದ್ದರು. ಕೊಟ್ಟೂರು ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆಗೆ ಮುಂದಾಗಿದ್ದಾರೆ ಎಂದು ವರದಿಯಾಗಿದೆ.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರದೀಪ್.ಕುಮಾರ್.ಸಿ.ಕೊಟ್ಟೂರು

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button