ಗಂಗಾಂಬಿಕೆ ಹಾಗೂ ನೀಲಾಂಬಿಕೆಯರು ಬಸವಣ್ಣನವರ ಎರಡು ಕಣ್ಣುಗಳಿದ್ದಂತೆ.
ಹುನಗುಂದ ಅಕ್ಟೋಬರ್.31

ಹುನಗುಂದ ತಾಲ್ಲೂಕಿನ ಬಿಂಜವಾಡಗಿ ಗ್ರಾಮದ ಶರಣೆಲಕ್ಷ್ಮೀಬಾಯಿ ಶರಣ ಗುಂಡಪ್ಪ ಇಲಕಲ್ ಇವರ ಮನೆಯಲ್ಲಿತಾಲೂಕಾ ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆ,ತಾಲೂಕಾ ಕರ್ನಾಟಕ ವಚನಸಾಹಿತ್ಯ ಪರಿಷತ್ತು ಹುನಗುಂದ ಘಟಕಗಳ ಸಹಯೋಗದಲ್ಲಿ 16 ನೇ ಮನೆ ಮನೆಗಳಿಗೆ ವಚನಸೌರಭ,ಮಾಸಿಕ ಶರಣ ಚಿಂತನ,ಶರಣಿ ಗಂಗಾಬಿಕೆಯ ಜಯಂತಿಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ ಗಂಗಾಂಬಿಕೆಹಾಗೂ ನೀಲಾಂಬಿಕೆಯರು ಬಸವಣ್ಣನವರ ಎರಡು ಕಣ್ಣುಗಳಿದ್ದಂತೆ. ಕಲ್ಯಾಣದಿಂದ ಉಳವಿಯವರೆಗೆ ವಚನ ಸಾಹಿತ್ಯದರಕ್ಷಣೆಗಾಗಿ ತಮ್ಮ ಬಲಿದಾನ ನೀಡಿಶರಣ ಸಾಹಿತ್ಯ ಇತಿಹಾಸದಲ್ಲಿಅಜರಾಮರ ರಾಗಿದ್ದಾರೆ ಎಂದರು.

ಸಭೆಯಲ್ಲಿ ಅನುಭಾವ ನುಡಿಗಳನ್ನಾಡಿದ ಸಾಹಿತಿ ಶ್ರೀಮತಿ.ದಾನೇಶ್ವರಿ ಸಾರಂಗಮಠಶರಣೆ ಗಂಗಾಂಬಿಕೆ ರಚಿಸಿದ ಕೇವಲಒಂಭತ್ತು ವಚನಗಳು ದೊರೆತಿವೆ’ಗಂಗಾಪ್ರಿಯ ಕೂಡಲಸಂಗ’ಎಂಬುದು ಇವರ ವಚನಾಂಕಿತವಾಗಿದೆ.ಅವರ ಐದುವಚನಗಳು ಮಗನ ಅಗಲಿಕೆಯವಿಷಯ ಅಭಿವ್ಯಕ್ತವಾಗಿದೆ ಎಂದರು.ಸಭೆಯ ಅಧ್ಯಕ್ಷತೆಯನ್ನು ಪ್ರೊ.ಎಸ್.ಎನ್.ಹಾದಿಮನಿವಹಿಸಿ ಮಾತನಾಡಿ ಶರಣಸಂಸ್ಕೃತಿಯನ್ನು,ಲಿಂಗಾಯತ ಧರ್ಮದ ಸಂಸ್ಕಾರವನ್ನು ವಚನಗಳ ಮೂಲಕ ಪ್ರಸಾರ ಮಾಡುವುದೇ ಶರಣ ಸಾಹಿತ್ಯ ಪರಿಷತ್ತಿನ ಧ್ಯೇಯವಾಗಿದೆ ಎಂದರು. ಸಭೆಯ ಪ್ರಾರಂಭದಲ್ಲಿಗೀತಾ ತಾರಿವಾಳ ಅವರಿಂದ ಪ್ರಾರ್ಥನೆ ,ಸ್ವಾಗತವನ್ನು ಪರಿಷತ್ತಿನ ಸಂಗಣ್ಣ ಹೊದ್ಲೂರ ಮಾಡಿದರು.ಪ್ರಾಸ್ತಾವಿಕವಾಗಿಪ್ರಭು ಮಾಲಗಿತ್ತಿಮಠ ಮಾತನಾಡಿದರು.ಸಭೆಯಲ್ಲಿಕದಳಿ ಮಹಿಳಾ ವೇದಿಕೆಯ ಅಧ್ಯಕ್ಷರಾದ ಡಾ.ಶಿವಗಂಗಾ ರಂಜಣಗಿ ಉಪಸ್ಥಿತರಿದ್ದರು.ಸಭೆಯ ಕೊನೆಯಲ್ಲಿ ಮಕ್ಕಳಿಗೆಪೂಜ್ಯರಿಂದ ಲಿಂಗದೀಕ್ಷೆ ನಡೆಯಿತು. ಶಿಕ್ಷಕ ಅಂದಾನಯ್ಯವಸ್ತ್ರದ ವಂದನಾರ್ಪಣೆ ಮಾಡಿಕಾರ್ಯಕ್ರಮ ನಿರೂಪಣೆ ಮಾಡಿದರು.
ತಾಲೂಕ ವರದಿಗಾರರು: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ ಹುನಗುಂದ