ಹುನಗುಂದದಲ್ಲಿ ಶಾಂತಿಯುತವಾಗಿ ನಡೆದ ದ್ವಿತೀಯ ದರ್ಜೆ ಸಹಾಯಕರ ಪರೀಕ್ಷೆ.
ಹುನಗುಂದ ಅಕ್ಟೋಬರ್.31

ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವತಿಯಿಂದ ಪಟ್ಟಣದ ಎರಡು ಪರೀಕ್ಷಾ ಕೇಂದ್ರದಲ್ಲಿ ದ್ವಿತೀಯ ದರ್ಜೆ ಸಹಾಯಕರ (ಎಸ್.ಡಿ.ಸಿ) ನೇಮಕಾತಿ ಪರೀಕ್ಷೆಯು ರವಿವಾರ ಶಾಂತಿಯುತವಾಗಿ ನಡೆದವು.ಒಟ್ಟು ೭೪೪ ಜನ ಅಭ್ಯರ್ಥಿಗಳ ಪೈಕಿ ೪೯೬ ಜನ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿ ಪರೀಕ್ಷೆಯನ್ನು ಎದುರಿಸಿದರು.ಇಲ್ಲಿನ ಪರೀಕ್ಷಾ ಕೇಂದ್ರಗಳಾದ ಸರ್ಕಾರಿ ಪದವಿ ಪೂರ್ವ ಕಾಲೇಜು ಹಾಗೂ ವಿ.ಎಂ.ಎಸ್.ಆರ್.ವಸ್ತೃದ ಕಾಲೇಜನಲ್ಲಿ ಬೆಳಿಗ್ಗೆ ಸಾಮಾನ್ಯ ಜ್ಞಾನ ಪರೀಕ್ಷೆ ಮತ್ತು ಮಧ್ಯಾಹ್ನ ಕೆಇಸಿ ಪರೀಕ್ಷೆ ಜರುಗಿತು.

ಸರ್ಕಾರಿ ಪದವಿ ಪೂರ್ವ ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆಯನ್ನು ಬರೆಯಲು ಒಟ್ಟು ೧೦ ಕೊಠಡಿಗಳನ್ನು ವ್ಯವಸ್ಥೆ ಮಾಡಲಾಗಿತ್ತು.ಒಟ್ಟು ೨೪೦ ಪರೀಕ್ಷಾರ್ಥಿಗಳಲ್ಲಿ ೧೫೬ ಪರೀಕ್ಷಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.ಇನ್ನೊಂದು ಪರೀಕ್ಷಾ ಕೇಂದ್ರವಾದ ವಿ.ಎಂ.ಎಸ್.ಆರ್.ವಸ್ತೃದ ಕಾಲೇಜನಲ್ಲಿ ಪರೀಕ್ಷಾರ್ಥಿಗಳಿಗಾಗಿ ಒಟ್ಟು ೨೧ ಕೊಠಡಿಗಳನ್ನು ವ್ಯವಸ್ಥೆ ಮಾಡಲಾಗಿತ್ತು.ಒಟ್ಟು ೫೦೪ ಪರೀಕ್ಷಾರ್ಥಿಗಳಲ್ಲಿ ೩೪೦ ಜನ ಪರೀಕ್ಷಾರ್ಥಿಗಳು ಹಾಜರಾಗಿ ಪರೀಕ್ಷೆಯನ್ನು ಬರೆದರು.ಎಂದು ಎರಡು ಪರೀಕ್ಷಾ ಕೇಂದ್ರದ ಉಪಮುಖ್ಯ ಅಧೀಕ್ಷಕರಾದ ಶರಣಪ್ಪ ಹೂಲಗೇರಿ ಮತ್ತು ಎಚ್.ಎಸ್.ಬೋಳಿಶೆಟ್ಟರ ತಿಳಿಸಿದ್ದಾರೆ.
ತಾಲೂಕ ವರದಿಗಾರರು: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ ಹುನಗುಂದ