ಕನ್ನಡ ಭಾಷೆ ಮತ್ತಷ್ಟು ಶ್ರೀಮಂತವಾಗಲಿ – ಯು. ಚಿನ್ನಾಪ್ರಿ.

ಹಿರೇಕುಂಬಳಗುಂಟೆ ನವೆಂಬರ್.1

ಅನ್ಯ ಭಾಷೆ ಗಳಿಗಿಂತ ಕನ್ನಡ ಹೆಚ್ಚು ಶ್ರೀಮಂತ ವಾಗಿದೆ ಎಂದು ಕೂಡ್ಲಿಗಿ ತಾಲೂಕಿನ ಹಿರೇಕುಂಬಳಗುಂಟೆ ಗ್ರಾಮ ಪಂಚಾಯಿತಿಯ ಬಿಲ್ ಕಲೆಕ್ಟರ್ ಯು ಚಿನ್ನಾಪ್ರಿ ಹೇಳಿದರು. ಬುಧವಾರ ಹಿರೆಕುಂಬಳಗುಂಟೆ ಗ್ರಾಮ ಪಂಚಾಯಿತಿಯಲ್ಲಿ ನಡೆದ ೬೮ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ತಾಯಿ ಕನ್ನಡಾಂಬೆ ಭುವನೇಶ್ವರಿ ಭಾವ ಚಿತ್ರಕ್ಕೆ ಪುಷ್ಪ ನಮನ ಪೂಜೆ ಸಲ್ಲಿಸಿ ಮಾತನಾಡಿದರು ಕನ್ನಡ ಭಾಷೆಗೆ ಎರಡು ಸಾವಿರ ವರುಷಗಳ ಇತಿಹಾಸವಿದೆ. ಭಾಷವಾರು ಪ್ರಾಂತ್ಯ ಮಾಡುವಾಗ ಕನ್ನಡ ಮಾತನಾಡುವವರನ್ನು ಮೈಸೂರು ರಾಜ್ಯ ಎಂದು ಮಾಡಲಾಯಿತು. ನಂತರ ಕರ್ನಟಕ ಎಂದು ಮರುನಾಮಕರಣ ಮಾಡಲಾಯಿತು ಎಂದು ಹೇಳಿದರು. ಕನ್ನಡಿಗರು ಕನ್ನಡದಲ್ಲೇ ವ್ಯವಹಾರ ನಡೆಸಬೇಕು, ಮಾತು ಎಲ್ಲಾ ಕಡೆ ಹೆಚ್ಚಾಗಿ ಕನ್ನಡವನ್ನೇ ಬಳಸಿದರೆ. ಕನ್ನಡ ಮತ್ತಷ್ಟು ಶ್ರೀಮಂತ ಗೊಳ್ಳುವುದು ಹಾಗೂ ಅನ್ಯ ಭಾಷೆ  ಮಾತನಾಡುವವರು ಅವರ ಮನೆಗಳಲ್ಲಿ ಮಾತನಾಡಬೇಕು.

ಜನ ಸಾಮಾನ್ಯರೊಂದಿಗೆ ಕನ್ನಡದಲ್ಲೇ ಮಾತನಾಡಬೇಕು ಎಂದರು. ಅನ್ಯ ಭಾಷೆಗಳು ಮನೆಗೆ ಕಿಟಕಿ ಬಾಗಿಲುಗಳ ಹಾಗೆ ಇರಬೇಕೆ ಹೊರತು ಮನೆಯಾಗಬಾರದು ಎಂದು ಕಿವಿ ಮಾತು ಹೇಳಿದರು. ನಮ್ಮ ಅನುಕೂಲಕ್ಕೆ ಬೇರೆ ಭಾಷೆಗಳನ್ನು ಬಳಸಬೇಕು ಆದರೆ ಅದೇ ಹೆಚ್ಚಾಗ ಬಾರದು. ಮತ್ತು ಕನ್ನಡ ಜ್ಞಾನ ಭಂಡಾರ ದೊಡ್ಡದು ಇದೆ. ಅದಕ್ಕೆ ಸಾಕ್ಷಿ ಎಂಬಂತೆ ಕನ್ನಡ ಕ್ಕೆ 8 ಜ್ಞಾನ ಪೀಠ ಪ್ರಶಸ್ತಿ ದೊರೆತಿದೆ ಎಂದು ಮಾತನಾಡಿದರು. ಈ ಸಂಧರ್ಭದಲ್ಲಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಶ್ರೀಮತಿ ಗಂಗಮ್ಮ ಕರಿಬಸಪ್ಪ ರವರು ೬೮ ನೇ ಕನ್ನಡ ರಾಜ್ಯೋತ್ಸವ ಅಂಗವಾಗಿ ಧ್ವಜಾರೋಹಣ ನೆರವೇರಿಸಿದರು. ಉಪಾಧ್ಯಕ್ಷರಾದ ಬಸವರಾಜಪ್ಪ. ಗ್ರಾಮ ಪಂಚಾಯತಿ ಸದಸ್ಯರಾದ ಮರಿಯಪ್ಪ. ಕಾಶಿ ಗೌಡ. ರಾಯಮ್ಮ. ಚಂದ್ರಮ್ಮ . ಸರ್ವ ಸದಸ್ಯರು ಹಾಗೂ ಸಿಬ್ಬಂದಿ ವರ್ಗದವರು ಮತ್ತು ಸಂಘ ಸಂಸ್ಥೆಗಳ ಕಾರ್ಯಕರ್ತರು, ಸಾರ್ವಜನಿಕರು ಭಾಗವಹಿಸಿದ್ದರು.

ಹೋಬಳಿ ವರದಿಗಾರರು:ಕೆ.ಎಸ್.ವೀರೇಶ್. ಕಾನಾ ಹೊಸಹಳ್ಳಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button