ಅಂಧ:ರ ಪಾಲಿಗೆ ಬೆಳಕು ಸ್ನೇಹಿತರ ಬಳಗ ರೆಹಮಾನ್ – ಪ್ರಶಾಂತ ಸಾಗರ ಸ್ವಾಮೀಜಿ.

ಕೂಡ್ಲಿಗಿ ನವೆಂಬರ್.1

ವಿಜಯನಗರ ಜಿಲ್ಲೆಯ ಕೂಡ್ಲಿಗಿಯ ಸ್ನೇಹಿತರ ಬಳಗದ ಅಬ್ದುಲ್ ರಹೆಮಾನ್ ರವರು, ಪೊರೆ ಬಂದ ಅಂಧಃರಿಗೆ ಬೆಳಕು ಆಗಿದ್ದಾರೆಂದು ಪ್ರಶಾಂತ ಸಾಗರ ಸ್ವಾಮೀಜಿ ನುಡಿದರು. ಅವರು ಅಕ್ಟೋಬರ್ 31.ರಂದು ಪಟ್ಟಣದ ಹಿರೇಮಠ ಕಲ್ಯ‍ಾಣ ಮಂಟಪದಲ್ಲಿ, ಸ್ನೇಹಿತರ ಬಳಗ ಹಾಗೂ ಹೊಸಪೇಟೆಯ ಅಶ್ವಿನಿ ಕಣ್ಣಿನ ಅಸ್ಪತ್ರೆ, ಐಕೇರ್ ಸಮಾಜ ಸೇವಾ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿದ್ದ. ಉಚಿತ ಕಣ್ಣಿನ ತಪಾಸಣೆ ಮತ್ತು ಶಸ್ತ್ರಚಿಕಿತ್ಸೆ ಶಿಬಿರದಲ್ಲಿ, ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು. ಸ್ನೇಹಿತರ ಬಳಗವು ಹಲವು ವರ್ಷಗಳಿಂದ, ನಿರಂತರವಾಗಿ ಸಮಾಜ ಸೇವೆಯಲ್ಲಿ ಗುರುತಿಸಿಕೊಂಡಿದೆ. ಮುಖಂಡ ಅಬ್ದುಲ್ ರಹೆಮಾನರವರು ಪರಿಸರ ಕಾಳಜಿ ಸೇರಿದಂತೆ, ಕಳೆದ ಆರು ವರ್ಷಗಳಿಂದ ಪ್ರತಿ ವರ್ಷವೂ ಉಚಿತ ಕಣ್ಣಿನ ಕ್ಯಾಂಪ್ ನಡೆಸುತ್ತಿದ್ದಾರೆ. ಈ ಮೂಲಕ ಸಾವಿರಾರು ಅಂಧಃರ ಪಾಲಿಗೆ ಬೆಳಕಾಗಿದ್ದಾರೆ,

ಸರ್ವಜನ ಸುಖಿನೋ ಭವಂತು ಎಂಬು ಧ್ಯೇಯದೊಂದಿಗೆ ಸರ್ವರ ಒಳಿತಿಗಾಗಿ ಶ್ರಮಿಸುತ್ತಿದ್ದಾರೆ ಎಂದರು. ಮಾಜಿ ಸಚಿವರಾದ ಎನ್.ಎಮ್.ನಬಿ ಸಾಹೇಬರು,ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸ್ನೇಹಿತರ ಬಳಗದ ಮುಖಂಡ, ಅಬ್ದುಲ್ ರಹೆಮಾನ ಪ್ರಾಸ್ತಾವಿಕವಾಗಿ ಮಾತನಾಡಿದರು. ಪಟ್ಟಣ ಪಂಚಾಯ್ತಿ ಸದಸ್ಯ ಕಾವಲ್ಲಿ ಶಿವಪ್ಪನಾಯಕ, ಡಾಕ್ಟರ್ ಎ. ಶ್ರೀನಿವಾಸಲು, ಬೆಂಗಳೂರಿನ ಶೇಕ್ಷ ವಲಿ. ಹೊಸಪೇಟೆ ಅಶ್ವನಿ ಕಣ್ಣಿನ ಆಸ್ಪತ್ರೆ ತಜ್ಞರಾದ ದೇಶಪಾಂಡೆ, ಹಾಗೂ ದಿಶಾ ಭಾರದ್ವಾಜ್ ಮಾತನಾಡಿದರು. ಕಾಂಟ್ರಾಕ್ಟರ್ ಇಸ್ಮಾಯಿಲ್ ಸಾಬ್, ಬರಾಹಾನ್ ರಿಯಾಜ್ ಇರ್ಫಾನ್,ಐ ಕೇರ್ ಫೌಂಡೇಶನ್ ಅಧ್ಯಕ್ಷ ಮೋಸಿನ್ ಕಮಾಲ್.ತಾಲೂಕು ನೌಕರರ ಸಂಘದ ಅಧ್ಯಕ್ಷ ಪಿ.ಶಿವರಾಜ್. ಅರಣ್ಯ ಅಧಿಕಾರಿ ಶ್ರೀಧರ, ವಿಭೂತಿ ಈರಣ್ಣ, ಫೈರೋಜ್, ಅಲಂಕಾರ, ಸ್ಟೇಟ್ ಬ್ಯಾಂಕ್ ಮ್ಯಾನೇಜರ್ ಕುಮಾರ್ ಗುಳಗಿ ವೀರಭದ್ರಪ್ಪ ವೀರಣ್ಣ ಸುನೀಲ್ ಗೌಡ, ಬಸವರಾಜ್ ಅಕ್ರಂ, ಪಟ್ಟಣ ಪಂಚಾಯತಿ ಸದಸ್ಯ ಪೂರ್ಯಾನಾಯ್ಕ,ಎಸ್ ಬಿ ಐ ಬ್ಯಾಂಕ್ ಮ್ಯಾನೇಜರ್ ಕುಮಾರ್ ಕುಶಾನ ವೇದಿಕೆಯಲ್ಲಿದ್ದರು. ಸಮಾಜ ಸೇವಕ ನಜೀರ್ ಅಹಮದ್, ಸ್ನೇಹಿತರ ಬಳಗದ ಉಪಾಧ್ಯಕ್ಷ ಖಾದರ್ ಭಾಷಾ, ಮಹಮ್ಮದ್ ಫಯಾಜ್ ,ನಿಸಾರ್ ಅಹಮದ್, ರೈಲ್ವೆ ಇಲಾಖೆಯ ಅಬ್ದುಲ್ ವಾಹಿದ್, ನೂರ್ ಅಹಮದ್. ಶ್ರೀರಾಘವೇಂದ್ರ ಪ್ಯಾರಾಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು ಸೇರಿದಂತೆ, ಮತ್ತಿತರು ಕಾರ್ಯಕ್ರಮದಲ್ಲಿ ಸರ್ಕೀಯವಾಗಿದ್ದು ಯಶಸ್ವಿಗೊಳಿಸಿದರು.

ಪತ್ರಕರ್ತ ಹಾಗೂ ಸಾಹಿತಿ ಕೆ.ಎಮ್.ವೀರೇಶ ಕಾರ್ಯಕ್ರಮ ನಿರೂಪಿಸಿದರು. ಪಟ್ಟಣ ಸೇರಿದಂತೆ ತಾಲೂಕಿನ ಹಾಗೂ ನೆರೆ ಹೆೊರೆಯ ಗ್ರಾಮಗಳಿಂದ, 1800ಕ್ಕೂ ಹೆಚ್ಚು ಜನರು ನೇತ್ರ ತಪಾಸಣೆಗೊಳಗಾದರು. 625ಜನರು ಪೊರೆ ಸಮಸ್ಯೆಯಿಂದಾಗಿ ಶಸ್ತ್ರ ಚಿಕಿತ್ಸೆಗೆ ಗುರುತಿಸಲಾಯಿತು, ಇವರೆಲ್ಲರಿಗೂ ಉಚಿತ ಶಸ್ತ್ರಚಿಕಿತ್ಸೆಗಾಗಿ ಸರದಿಯಂತೆ ದಿನಾಂಕ ಸೂಚಿಸಲಾಗುವುದೆಂದು ಆಯೋಜಕ ರಹೆಮಾನ್ ರು ತಿಳಿಸಿದ್ದಾರೆ. ಸ್ನೇಹಿತರ ಬಳಗದಿಂದ ಸತತ ಆತನೇ ಭಾರಿ ಸತತವಾಗಿ, ಉಚಿತ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ಅಯೋಜಿಸಲಾಗಿದ್ದು. ಒಟ್ಟು ಹದಿನೈದು ಸಾವಿರಕ್ಕೂ ಅಧಿಕ ಜನರು ಉಚಿತ ತಪಾಸಣೆಗೊಳಗಾಗಿದ್ದು, ಹತ್ತು ಸಾವಿರ ಜನರು ಶಸ್ತ್ರಚಿಕಿತ್ಸೆಗೊಳಗಾಗಿದ್ದಾರೆ. ಸ್ನೇಹಿತರ ಬಳಗದ ಸರ್ವಸದಸ್ಯರ ಸಹಕಾರ, ನಾಗರೀಕರ ಸಾರ್ವಜನಿಕರ ಸಹಭಾಗಿತ್ವ ಶಿಬಿರ ಯಶಸ್ವಿಯಾಗಲು ಕಾರಣವಾಗಿದ್ದು. ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಶಿಬಿರಗಳನ್ನು ಯಶಸ್ವಿಯಾಗಲು, ಕಾರಣರಾದ ಸರ್ವರಿಗೂ ಅಭಿನಂದನೆ ಈ ಮೂಲಕ ಸಲ್ಲಿಸುವುದಾಗಿ ಅವರು ತಿಳಿಸಿದ್ದಾರೆ.

ಜಿಲ್ಲಾ ವರದಿಗಾರರು:ರಾಘವೇಂದ್ರ.ಸಾಲುಮನೆ.ಕೂಡ್ಲಿಗಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button