ಹೆಸರಾಯಿತು ಕರ್ನಾಟಕ ಉಸಿರಾಯಿತು ಕನ್ನಡ 68.ನೆಯ ರಾಜ್ಯೋತ್ಸವದ ಸಂಬ್ರಮ ಸಡಗರದ ಆಚರಣೆ.
ಕೊಟ್ಟೂರು ನವೆಂಬರ್.1

68.ನೇ ಕನ್ನಡ ರಾಜ್ಯೋತ್ಸವ ಸಮಾರಂಭ ಎಪಿಎಂಸಿ ಆವರಣದಲ್ಲಿ ತಾಲೂಕು ಆಡಳಿತ ಹಾಗೂ ತಾಲೂಕು ಪಂಚಾಯಿತಿ ಮತ್ತು ಪಟ್ಟಣ ಪಂಚಾಯ್ತಿ ವತಿಯಿಂದ ಹೆಸರಾಯಿತು ಕರ್ನಾಟಕ ಉಸಿರಾಯಿತು ಕನ್ನಡ 50ನೇ ಕನ್ನಡ ಸಂಭ್ರಮ ಪಟ್ಟಣದ ಶ್ರೀ ಗುರುಬಸವೇಶ್ವರ ದೇವಸ್ಥಾನದಿಂದ ಪಟ್ಟಣದ ಎಲ್ಲಾ ಶಾಲೆಯ ಮಕ್ಕಳು ಹಾಗೂ ಎಲ್ಲಾ ಅಧಿಕಾರಿ ವರ್ಗದವರು ಸಕಲ ವಾದ್ಯ- ಮೇಳಗಳೊಂದಿಗೆ ತಾಯಿ ಭುವನೇಶ್ವರಿ ಫೋಟೋವನ್ನು ಟ್ರ್ಯಾಕ್ಟರ್ ಮೂಲಕ ಕೊಟ್ಟೂರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು ನಂತರ ಎಪಿಎಂಸಿ ಅವರಣದಲ್ಲಿ ತಾಯಿ ಭುವನೇಶ್ವರಿಯ ಭಾವ ಚಿತ್ರಕ್ಕೆ ಪುಷ್ಪವನ್ನು ಹಾಕುವುದರ ಮೂಲಕ ತಾಶಿಲ್ದಾರರಾದ ವಿ ಕಾರ್ತಿಕ್ ರವರು ಕಾರ್ಯಕ್ರಮವನ್ನು ಚಾಲನೆ ನೀಡಿದರು.

ಗುರು ಬಸವರಾಜ್ ವೇದಿಕೆ ಮೇಲಿರುವ ಗಣ್ಯರನ್ನು ಸ್ವಾಗತಿಸಿದರು ನಂತರ ಮಾನ್ಯ ದಂಡಾಧಿಕಾರಿಗಳಾದ ವಿ ಕಾರ್ತಿಕ್ ನೋಡಿಕೊಂಡು ಕನ್ನಡ ರಾಜ್ಯೋತ್ಸವ ಸಂದೇಶ ನೀಡಿದರು.ಮತ್ತಿತರರು ಕನ್ನಡದ ಬಗ್ಗೆ ಮಾತನಾಡಿದರು ಹಾಗೂ ವಿಶೇಷವಾಗಿ ಕನ್ನಡದ 5 ಗೀತೆಗಳನ್ನುತುಂಬಾ ಸೊಗಸಾಗಿ ಹಾಡಲಾಗಿತ್ತು ತದನಂತರ ಶ್ರೀ ಭುವನೇಶ್ವರಿ ದೇವಿ ಕುರಿತು ಎಲ್ಲಾ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.ಹಾಗೂ ಶ್ರೀಮತಿ ಪದ್ಮ ಜಾಗಟಗೇರೆ ಸಾಹಿತ್ಯ ಶ್ರೀ ನಾಗೇಶ್ ಪೂಜಾರ್ ರಂಗಭೂಮಿ ಶ್ರೀ ಮೂಲಿಮನಿ ಕೊಟ್ರೇಶ್ ಸಂಗೀತ ಕ್ಷೇತ್ರ ಶ್ರೀ ಸತೀಶ್ ನಿವೃತ್ತಿ ಪ್ರಾಧ್ಯಾಪಕರು ಸಮಾಜ ಸೇವೆ ಶ್ರೀ ಶಿವರಾಜ್ ಕನ್ನಡಿಗ ಮಾಧ್ಯಮ ರಂಗ ಇವರುಗಳಿಗೆ ತಾಲೂಕು ಆಡಳಿತ ಹಾಗೂ ತಾಲೂಕು ಪಂಚಾಯಿತಿ ಮತ್ತು ಪಟ್ಟಣ ಪಂಚಾಯತಿ ವತಿಯಿಂದ ಸನ್ಮಾನ ಮಾಡಲಾಯಿತು.ಈ ಸಂದರ್ಭದಲ್ಲಿ ವಿಜಯಕುಮಾರ್ ಸಹ ನಿರ್ದೇಶಕರು ತಾಲೂಕು ಪಂಚಾಯಿತಿ ಕೊಟ್ಟೂರು ಎ ನಸುರುಲ್ಲಾ ಪಟ್ಟಣ ಪಂಚಾಯಿತಿ ಕಾರ್ಯಾಲಯ ವೀರಣ್ಣ ಎಪಿಎಂಸಿ ಕಾರ್ಯದರ್ಶಿಗಳು ಕೆಂಗರಾಜ್ ಪಟ್ಟಣ ಪಂಚಾಯಿತಿ ಸದಸ್ಯರು ಮತ್ತು ಕೆ ಕೊಟ್ರೇಶ್ ಅಧ್ಯಕ್ಷರು ಕಾರ್ಯನಿರತ ಪತ್ರಿಕೆ ಸಂಘ ಶಶಿಧರ್ ಮೈದೂರ್ ಚೀಪ್ ಕಮಿಟಿ ಕೊಟ್ಟೂರು ಅಜ್ಜಪ್ಪ ಎಲ್ಲಾ ಇಸಿಒ ಮತ್ತುಸಿ ಆರ್ ಪಿ ಗಳು ಹಾಗೂ ತಾಲೂಕಿನ ಎಲ್ಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಸಾರ್ವಜನಿಕರು ಸೇರಿದ್ದರು.
ತಾಲೂಕ ವರದಿಗಾರರು:ಪ್ರದೀಪ್.ಕುಮಾರ್.ಸಿ ಕೊಟ್ಟೂರು