ಕನ್ನಡ ಹೃದಯ ಭಾಷೆಗಿಂತ ಅದು ನಮ್ಮ ಉಸಿರಾಗಬೇಕು.

ಹೊಸಹಳ್ಳಿ ನವೆಂಬರ್.1

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಹೊಸಹಳ್ಳಿ ಹೋಬಳಿಯ ಹೊಸಹಳ್ಳಿ ನಾಡ ಕಛೇರಿಯಲ್ಲಿ 68.ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಧ್ವಜಾರೋಹಣ ನೆರವೇರಿಸಿ ಮತ್ತು ಭುವನೇಶ್ವರಿ ಭಾವ ಚಿತ್ರಕ್ಕೆ ಪೂಜಿಸಲ್ಲಿಸಿ. ಪುಷ್ಪ ನಮನ ಸಲ್ಲಿಸಿದರು. ನಂತರ ಉಪ ತಹಶೀಲ್ದಾರ್ ಕುಮಾರಸ್ವಾಮಿ ಮಾತನಾಡಿ ಕನ್ನಡ ಹೃದಯ ಭಾಷೆಯಾಗಿದ್ದು ಅದು ನಮ್ಮ ಉಸಿರಾಗಬೇಕು. ಕನ್ನಡಕ್ಕಾಗಿ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷವಾಗುತ್ತದೆ ಎಂಬ ಹಿರಿಯರ ವಾಣಿಯಂತೆ. ಕನ್ನಡದ ನೆಲ. ಜಲ.ಭಾಷೆಯ ಬಗ್ಗೆ ಪ್ರತಿಯೊಬ್ಬರಲ್ಲಿಯೂ ಆತ್ಮಭಿಮಾನ ಬೆಳೆಯಬೇಕು ಎಂದು ಸ್ಮರಿಸಿದರು. ನಂತರ ಹಿರಿಯ ಸಾಹಿತಿಗಳು ಮತ್ತು ಕವಿಗಳಾದ ಯು ಜಗನ್ನಾಥ್ ಮಾತನಾಡಿ ಕನ್ನಡ ಎಂಬುದು ಬರಿ ಭಾಷೆಯಲ್ಲ ಅದು ಈ ನೆಲದ ಸಂಸ್ಕೃತಿ, ಸಂಸ್ಕಾರ ಪರಂಪರೆ ಸಾರುವ ಶಕ್ತಿಯಾಗಿದೆ. ಪ್ರತಿಯೊಬ್ಬ ಕನ್ನಡಿಗರಲ್ಲೂ ಕನ್ನಡ ಭಾಷೆ ನೆಲ ಜಲದ ಬಗ್ಗೆ ಅಭಿಮಾನ,ಸ್ವಾಭಿಮಾನ ಇರಬೇಕು. 2000 ವರ್ಷದ ಇತಿಹಾಸ ಹೊಂದಿರುವ ಕನ್ನಡ ನಾಡು ನುಡಿಯನ್ನು ಮತ್ತಷ್ಟು ಶ್ರೀಮಂತ ಗೊಳಿಸುವಲ್ಲಿ ನುಡಿಗಿಂತ ನಡೆ ಮುಖ್ಯವಾಗಿದೆ. ರಾಜ್ಯೋತ್ಸವ ಆಚರಣೆ ನಿತ್ಯೋತ್ಸವ ಆಗಬೇಕು. ಎಂದು ಕನ್ನಡದ ಬಗ್ಗೆ ಸ್ವವಿವರ ತಿಳಿಸಿದರು. ಇದೇ ಸಂದರ್ಭದಲ್ಲಿ ಕಂದಾಯ ಪರಿವೀಕ್ಷಕರಾದ ಬಿ ಮುರಳಿ ಕೃಷ್ಣ . ಗ್ರಾಮ ಲೆಕ್ಕಾಧಿಕಾರಿಗಳಾದ ಚನ್ನಬಸಯ್ಯ. ರಮೇಶ್. ಶ್ರೀನಿವಾಸ ಕೊಂಡಿ.ಚೈತ್ರ. ಸಂಪ್ರೀತ. ಜ್ಯೋತಿ. ನಾಡ ಕಚೇರಿ ಸಿಬ್ಬಂದಿ ಅನಿತಾ ಪೂಜಾರ್ ಗ್ರಾಮದ ಮುಖಂಡರಾದ ನಿವೃತ್ತ ಶಿಕ್ಷಕರಾದ ಮಹದೇವಪ್ಪ. ಗ್ರಾಮದ ಮುಖಂಡರಾದ ಕೆ. ಸುಭಾಷ್ ಚಂದ್ರ. ನಡಲು ಮನೆ ತಿಪ್ಪೇಸ್ವಾಮಿ. ಮಾರಪ್ಪ. ಯಶ್ವಂತ್ ಸಿದ್ದಾಪುರ. ಬಸವೇಶ್ವರ. ಫೋಟೋ ನಾಗರಾಜ್. ನಾಡ ಕಚೇರಿ ಆಪರೇಟರ್ ಅಗ್ರಹಾರದ ಮಂಜುನಾಥ್. ಗ್ರಾಮ ಸಹಾಯಕರದ . ಶಾಂತರಾಜ್ ತಳವಾರ್ ಬೋರಪ್ಪ. ಸೇರಿದಂತೆ ಇತರರು ಸಾರ್ವಜನಿಕರು ಉಪಸ್ಥಿತರಿದ್ದರು.

ಹೋಬಳಿ ವರದಿಗಾರರು:ಕೆ.ಎಸ್.ವೀರೇಶ್. ಕಾನಾ ಹೊಸಹಳ್ಳಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button