ರಾಜ್ಯದಲ್ಲಿ ಬಿಜೆಪಿಗೆ ಸೋಲು ಕೋಮುವಾದ ಪ್ರಚಾರದಿಂದ – ಸಿದ್ದನಗೌಡ ಪಾಟೀಲ್.
ಕೂಡ್ಲಿಗಿ ನವೆಂಬರ್.10

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕೂಡ್ಲಿಗಿ ಪಟ್ಟಣದ ಪ್ರವಾಸ ಮಂದಿರದಲ್ಲಿ ಬುಧವಾರ ರಂದು ಅಖಿಲ ಭಾರತ ಕಿಸಾನ್ ಸಭಾದ ಮುಖಂಡರು ಕರೆದಿದ್ದ ಪತ್ರಿಕಾ ಗೋಷ್ಠಿಯಲ್ಲಿ ರಾಜ್ಯಾಧ್ಯಕ್ಷ ಸಿದ್ದನಗೌಡ ಪಾಟೀಲ್ ರವರು ಕಳೆದ ಚುನಾವಣೆಯಲ್ಲಿ ಬಿಜೆಪಿ ಪಕ್ಷವು ರಾಜ್ಯದಲ್ಲಿ ಹೀನಾಯವಾಗಿ ಸೋಲು ಕಾಣಲು ಮುಖ್ಯ ಕಾರಣ ರಾಜ್ಯದ ಜನರ ಸಮಸ್ಯೆಗಳನ್ನು ಹರಿಯದೆ ಕೋಮುವಾದದೆಡೆಗೆ ಬಿಜೆಪಿ ಕಾರ್ಯಕರ್ತರನ್ನು ಬಳಸಿ ಕೊಂಡು ಮತ್ತು ಹಿಂದುತ್ವ ವಾದವನ್ನೇ ಚುನಾವಣೆಗೆ ಅಸ್ತ್ರವಾಗಿ ಬಳಸಿ ಕೊಂಡಿತು ಆದ್ದರಿಂದ ಬಿಜೆಪಿಗೆ ಅಂತ ದೊಡ್ಡ ಸೋಲು ಕಂಡಿದೆ ಎಂದು ಸಿದ್ದನಗೌಡ ಪಾಟೀಲ್ ರವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು ಈ ಬಾರಿ ಕಾಂಗ್ರೆಸ್ ಪಕ್ಷ ಸಹ ಅಪ ಪ್ರಚಾರದ ಜೊತೆಗೆ ಆಸೆಗಳನ್ನು ಜನರಿಗೆ ತಿಳಿಸುತ್ತಾ ಬಿಟ್ಟಿ ಯೋಜನೆಗಳನ್ನು ಮುಂದಿಟ್ಟು ಕೊಂಡು ಗೆಲುವಿಗೆ ಕಾರಣವಾಗಿದೆ ಎಂದು ತಿಳಿಸಿದರು ಹಾಗೆ ಮೋದಿಯವರು 2014ರಲ್ಲಿ ದೇಶದ ಜನತೆಗೆ ವಸತಿಗಳನ್ನು ನೀಡುವುದಾಗಿ ಹಾಗೂ ನಿರುದ್ಯೋಗದ ಯುವಕರಿಗೆ ಎರಡು ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಸುಳ್ಳು ಭರವಸೆಗಳನ್ನು ಹೇಳುತ್ತಾ ಬಿಜೆಪಿ ಪಕ್ಷವು ಸಹ ಇಂಥ ಬಿಟ್ಟಿ ಯೋಜನೆಗಳನ್ನು ಮಾಡುದಾಗಿ ಅಪ ಪ್ರಚಾರಗಳಿಂದ ಗೆಲುವನ್ನು ಕಂಡಿರುವುದು ತಿಳಿಸಿದರು ಹಾಗೆ ಈ ಸಂದರ್ಭದಲ್ಲಿ ಇನ್ನೋರ್ವ ರಾಜ್ಯ ಕಾರ್ಯದರ್ಶಿಯಾದ ಪಿ ವಿ ಲೋಕೇಶ್ ಇವರು ಮಾತನಾಡಿ ಈ ವರ್ಷ ರಾಜ್ಯದಲ್ಲಿ ತೀವ್ರ ಬರಗಾಲ ಎದುರಾಗಿದ್ದರು ಕೇಂದ್ರ ಸರ್ಕಾರ ಇಂತಹ ಸಮಯದಲ್ಲಿ ಸಹ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದರು. ಕರ್ನಾಟಕ ರಾಜ್ಯಕ್ಕೆ ಈಗಾಗಲೇ ಕೇಂದ್ರದ ಬರ ಪೀಡಿತ ಅಧ್ಯಯನಕ್ಕೆ ತಂಡ ಬಂದು ವೀಕ್ಷಣೆ ಮಾಡಿ ವರದಿಯನ್ನು ನೀಡಿದರು ಕೇಂದ್ರದಿಂದ ರಾಜ್ಯಕ್ಕೆ ಬಿಡಿಗಾಸನು ಇವತ್ತಿಗೂ ನೀಡಿಲ್ಲ ಎಂದು ಆರೋಪಿಸಿ ಹಾಗೆ ರಾಜ್ಯದಿಂದ ಗೆದ್ದು ಹೋದಂತಹ ಯಾವ ಸಂಸದರು ಬರಗಾಲದ ಪರಿಸ್ಥಿತಿಯ ಬಗ್ಗೆ ಚಕಾರ ಎತ್ತಿಲ್ಲ ಎಂದು ದೂರಿದರು. ರಾಜ್ಯದ ರೈತರನ್ನು ಹಾಗೂ ಕಾರ್ಮಿಕರನ್ನು ಒಕ್ಕಲೆಬ್ಬಿಸುವ ಕಾರ್ಯ ಕೇಂದ್ರ ಬಿಜೆಪಿ ಸರ್ಕಾರ ಮಾಡುತ್ತಿದೆ ಎಂದು ಅವರು ಆಕ್ರೋಶ ಹೊರ ಹಾಕಿದರು. ಕಾರಣ ಈ ಹಿಂದೆ ಇದ್ದಂತ ಕಾರ್ಮಿಕರ ಕೆಲಸ 8 ಗಂಟೆ ಗಳಿದ್ದು ಈಗ ಸುಮಾರು 4 ಗಂಟೆಗಳ ತಾಸು ಹೆಚ್ಚಾಗಿ. ಮಾಡಿ 12 ಗಂಟೆಗೆ ವಿಸ್ತರಿಸಿದ್ದಾರೆ. ಕಾರ್ಪೊರೇಟ್ ಸಂಸ್ಥೆಗಳಿಗೆ ರಾಜ್ಯದ ಭೂಮಿ ಸೇರಿದಂತೆ ಸ್ಥಳೀಯ ಕಾರ್ಮಿಕರನ್ನು ಸಹ ಬಲಿ ಕೊಡುತ್ತಿರುವುದು ವಿಷಾದನೀಯ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಅಖಿಲ ಭಾರತ ಕಿಸಾನ್ ಸಭಾದ ಕಾರ್ಯದರ್ಶಿಯಾದ ಎಚ್ ವೀರಣ್ಣ, ತಾಲೂಕು ಅಧ್ಯಕ್ಷರಾದ ಕರಿಯಪ್ಪ, ಇತರರು ಇದ್ದರು.
ಜಿಲ್ಲಾ ವರದಿಗಾರರು:ರಾಘವೇಂದ್ರ.ಬಿ.ಸಾಲುಮನೆ ಕೂಡ್ಲಿಗಿ