ಕಾನಾ ಹೊಸಹಳ್ಳಿಯಲ್ಲಿ ಕರ್ನಾಟಕ ಜ್ಯೋತಿ ರಥ ಯಾತ್ರೆಗೆ ಕನ್ನಡ ಮನಸ್ಸುಗಳಿಂದ ಭವ್ಯ ಸ್ವಾಗತ.

ಕಾನಾ ಹೊಸಹಳ್ಳಿ ನವೆಂಬರ್.13

ರಾಜ್ಯಕ್ಕೆ ಕರ್ನಾಟಕ ಎಂಬ ನಾಮಕರಣ ಮಾಡಿ 50 ವರ್ಷ ತುಂಬಿದ ಪ್ರಯುಕ್ತ ನ,13 ಸೋಮವಾರ ಕಾನಾ ಹೊಸಹಳ್ಳಿ ಪಟ್ಟಣಕ್ಕೆ ಆಗಮಿಸಿದ ಕನ್ನಡ ಜ್ಯೋತಿ ರಥ ಯಾತ್ರೆಗೆ ಕಂದಾಯ ಇಲಾಖೆ, ತಾಲೂಕು ಪಂಚಾಯಿತಿ, ಶಿಕ್ಷಣ ಇಲಾಖೆ, ಕನ್ಮಡ ಸಾಹಿತ್ಯ ಪರಿಷತ್ತು ಹಾಗೂ ಗ್ರಾಮ ಪಂಚಾಯಿತಿ ಇತರೆ ಸಂಘ ಸ ಇತರೆ ಕನ್ನಡ ಸಂಘ ಸಂಸ್ಥೆ ಯಿಂದ ಭವ್ಯವಾಗಿ ಸ್ವಾಗತ ಮಾಡಿ ಕೊಳ್ಳಲಾಯಿತು. ಭುವನೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿ, ಬರಮಾಡಿ ಕೊಂಡರು. ರಥ ಯಾತ್ರೆಯಲ್ಲಿ ವೀರಗಾಸೆ, ಮುಂತಾದ ಜಾನಪದ ತಂಡಗಳು, ನಂದಿಕೋಲು, ಸಮಾಳ ವಾದ್ಯದೊಂದಿಗೆ ಆಗಮಿಸಿದ ರಥದ ಯಾತ್ರೆ ಮರೆವಣಿಗೆ ಪಟ್ಟಣದ ಗ್ರಾಮ ಪಂಚಾಯಿತಿ ಆವರಣದ ಅಂಬೇಡ್ಕರ ವೃತ್ತದಿಂದ ಮದಕರಿ ನಾಯಕ ವೃತ್ತದ ಮೂಲಕ ಭವ್ಯವಾಗಿ ಬರಮಾಡಿ ಕೊಂಡು ಕಳಿಸಿ ಕೊಡಲಾಯಿತು.

ಈ ವೇಳೆ ತಾಲೂಕು ಪಂಚಾಯತಿ ಕಾರ್ಯ ನಿರ್ವಾಹಣಾಧಿಕಾರಿ ವೈ ರವಿಕುಮಾರ್, ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಪದ್ಮನಾಭರಣಂ, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಎಸಿ ಚೇತನ್, ಉಪಾಧ್ಯಕ್ಷರು ನೇತ್ರಾವತಿ ಮಂಜುನಾಥ, ಅಭಿವೃದ್ಧಿ ಅಧಿಕಾರಿ ಬಿ ಬಸಮ್ಮ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಕೆ ಸುಭಾಷ್ ಚಂದ್ರ, ಕನ್ನಡ ಸಾಹಿತ್ಯ ಪರಿಷತ್ತಿನ ಹೋಬಳಿ ಘಟಕದ ಅಧ್ಯಕ್ಷ ಎನ್.ಎಸ್ ತಿಪ್ಪೇಸ್ವಾಮಿ, ಹೊಸಹಳ್ಳಿ ಕಂದಾಯ ಪರೀಕ್ಷಕರಾದ ಮುರಳಿ ಕೃಷ್ಣ, ಗ್ರಾಮ ಆಡಳಿತಾಧಿಕಾರಿ ಎಸ್ಎಂ ಚನ್ನಬಸಯ್ಯ ಸೇರಿದಂತೆ ಗ್ರಾಮ ಪಂಚಾಯಿತಿಯ ಸರ್ವ ಸದಸ್ಯರು, ಅಂಗನವಾಡಿ ಕಾರ್ಯ ಕರ್ತೆಯರು. ಆಶಾ ಕಾರ್ಯ ಕರ್ತೆಯರು. ಕನ್ನಡ ಮನಸ್ಸುಗಳು ಕವಿಗಳು, ಶಾಲಾ ವಿದ್ಯಾರ್ಥಿಗಳು ಕನ್ನಡಪರ ಸಂಘಟನೆ ಹೋರಾಟಗಾರರು ಮತ್ತು ವಿವಿಧ ಸಂಘಟನೆಯ ಪದಾಧಿಕಾರಿಗಳು ಸರ್ಕಾರಿ ಇಲಾಖೆಯ ಎಲ್ಲಾ ಅಧಿಕಾರಿಗಳು ರಥ ಯಾತ್ರೆಯಲ್ಲಿ ಭರ್ಜರಿಯಾಗಿ ಸ್ವಾಗತ ಮಾಡಿ ಬರಮಾಡಿ ಕೊಂಡರು.

ಹೋಬಳಿ ವರದಿಗಾರರು:ಕೆ.ಎಸ್.ವೀರೇಶ್ ಕಾನಾ ಹೊಸಹಳ್ಳಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button