ಮಕ್ಕಳ ಪ್ರೀತಿಯ ಚಾಚಾ…..
![](https://i0.wp.com/sknewskannada.in/wp-content/uploads/2023/11/IMG-20231114-WA00261.jpg?resize=615%2C1024&ssl=1)
ಭಾರತದ ಮೊದಲ ಪ್ರಧಾನಿ ಇವರು
ಶಾಂತಿ ಮಾರ್ಗದ ಸ್ವಾತಂತ್ರ್ಯ
ಹೋರಾಟಗಾರರು
ಗಾಂಧೀಜಿಯವರ ಮಾರ್ಗದರ್ಶನದಿ
ನಡೆದವರು
ಆಧುನಿಕ ಭಾರತದ ಶಿಲ್ಪಿ ಎಂದು
ಪರಿಗಣಿಸಲ್ಪಟ್ಟವರು
ಮಕ್ಕಳ ಪಾಲಿಗೆ ಪ್ರೀತಿಯ ಚಾಚಾ ಆದವರು
1889 ರಂದು ಭೂಮಿಗೆ ಬಂದ ಭಗವಂತರು
ಮೋತಿಲಾಲ್ ನೆಹರು-ಸ್ವರೂಪರಾಣಿ
ಮಾತಾಪಿತರು
ಕಮಲಾ ನೆಹರು ರವರ ಪ್ರೀತಿಯ ಪತಿದೇವರು
ಪ್ರೀತಿಯ ಮಗಳು ಇಂದಿರಾ ಗಾಂಧಿಗೆ
ತಂದೆಯಾಗಿ
ಜನ್ಮದಿನವ ಮೀಸಲಿಟ್ಟರು ನೆಚ್ಚಿನ ಮಕ್ಕಳಿಗಾಗಿ
1955 ರ ಭಾರತ ರತ್ನ ಪಡೆದರು ಸಮಾಜ
ಸೇವೆಗಾಗಿ
ವಿಶ್ವದಿ ಮೆಚ್ಚುಗೆ ಪಡೆದರು ಆದರ್ಶ ಮತ್ತು
ನಿಷ್ಠಾವಂತತೆಗಾಗಿ
ಶಿಕ್ಷಣ ಮತ್ತು ಅಕ್ಷರ ಪ್ರೇಮಿಯಾಗಿ
ಬಲಿಷ್ಠ ಮತ್ತು ಸ್ವತಂತ್ರ ಭಾರತವನ್ನು
ರೂಪಿಸುವದ್ದಕ್ಕಾಗಿ
ಸ್ವಾತಂತ್ರ ಹೋರಾಟದಿ ಹೋರಾಡಿದರು
ಸ್ವಾತಂತ್ರಕ್ಕಾಗಿ
1964 ರಂದು ಅಗಲಿದರು ಭಾರತೀಯರ
ಮಾಡಿ ಒಂಟಿಯಾಗಿ
ಶ್ರೀ ಮುತ್ತು.ಯ.ವಡ್ಡರ
( ಶಿಕ್ಷಕರು ಹಿರೇಮಾಗಿ )
ಬಾಗಲಕೋಟ
Mob-9845568484