ಕಾಂತರಾಜು ಆಯೋಗದ ವರದಿ ಮತ್ತು ಎ.ಜೆ. ಸದಾಶಿವ ಆಯೋಗದ ವರದಿ ಜಾರಿ ಮಾಡಿ ಇಲ್ಲದಿದ್ದರೆ ಖುರ್ಚಿ ಖಾಲಿ – ಸಾಮಾಜಿಕ ನ್ಯಾಯಕ್ಕಾಗಿ ಬಿ.ಎಸ್.ಪಿ ಆಂದೋಲನ.

ಬಾಗಲಕೋಟ ನವೆಂಬರ್.21

ಈ ಎರಡು ವರದಿ ಜಾರಿಗೊಳಿಸಲು ಒತ್ತಾಯಿಸಿ ಇಂದು ಬಾಗಲಕೋಟೆ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ಧರಣಿ ನಡೆಸಿ ಮನವಿ ಪತ್ರವನ್ನು ಬಾಗಲಕೋಟ ಜಿಲ್ಲಾಧಿಕಾರಿಗಳ ಮೂಲಕ ಮಾನ್ಯ ಮುಖ್ಯ ಮಂತ್ರಿಗಳಿಗೆ ಸಲ್ಲಿಸಲಾಯಿತು. ಈ ಮನವಿಯನ್ನು ಹೆಚ್ಚುವರಿ ಜಿಲ್ಲಾಧಿಕಾರಿಗಳಾದ ಪರಶುರಾಮ ಶಿನ್ನಾಳಕರ ಸ್ವೀಕರಿಸಿದರು.ಈ ಸಂಧರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ವೈ ಸಿ ಕಾಂಬಳೆ, ಜಿಲ್ಲಾ ಸಂಯೋಜಕರಾದ ಗುರುಶಾಂತಪ್ಪ ಮದಿನಕರ, ಜಿಲ್ಲಾ ಅಧ್ಯಕ್ಷರಾದ ಯಲ್ಲಪ್ಪ ಶ ಸನಕ್ಯಾನವರ, ಶೀಲವಂತ ವಿಜಾಪುರ, ರಾಕೇಶ ಸಾನಕ್ಯಾನವರ, ರಾಜು ಯಾದವಾಡ, ದಿಲೀಪ ವಿಜಾಪುರ, ದುರಗಪ್ಪ ಭಾರತಗಿ, ಶೇಖರಪ್ಪ ಶೈರಾವತಿ, ಗೌತಮ ಕಾಂಬಳೆ ಸೇರಿದಂತೆ ಕಾರ್ಯಕರ್ತರು ಉಪಸ್ಥಿತರಿದ್ದರು.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button