ಶಾಲಾ ಮಕ್ಕಳನ್ನು ಸ್ವಂತ ಮಕ್ಕಳಂತೆ ನೋಡಿರಿ – ಗೀತಾ ಶಂಕರ್.
ತರೀಕೆರೆ ನವೆಂಬರ್.22

ಬಿಸಿಯೂಟದ ಅಡಿಗೆ ಮನೆಯನ್ನು ಸ್ವಚ್ಛವಾಗಿ ಇಡಬೇಕು ಮತ್ತು ಮಕ್ಕಳಿಗೆ ಯಾವುದೇ ರೀತಿಯ ತಾರತಮ್ಯವಿಲ್ಲದೆ ಹೊಟ್ಟೆ ತುಂಬಾ ಶುಚಿ ಮತ್ತು ರುಚಿಯಾದ ಊಟವನ್ನು ಬಡಿಸಿರಿ ಎಂದು ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಗೀತಾ ಶಂಕರ್ ರವರು ಹೇಳಿದರು. ಅವರು ಇಂದು ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಪಂಚಾಯಿತಿ ಚಿಕ್ಕಮಗಳೂರು, ತಾಲೂಕು ಪಂಚಾಯಿತಿ ತರೀಕೆರೆ, ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ್, (ಮ, ಉ, ಯೋ ) ರಾಜ್ಯ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ ಸಂಸ್ಥೆ ಮೈಸೂರು ಇವರ ಸಹಯೋಗದೊಂದಿಗೆ ರಾಷ್ಟ್ರೀಯ ಗ್ರಾಮ ಸ್ವರಾಜ್ ಯೋಜನೆಯಲ್ಲಿ ಏರ್ಪಡಿಸಿದ್ದ ಬಿಸಿಯೂಟ ಸಿಬ್ಬಂದಿಯವರಿಗೆ ತರಬೇತಿ 2023-24 ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದರು. ಶಾಲಾ ಮಕ್ಕಳನ್ನು ಸ್ವಂತ ಮಕ್ಕಳಂತೆ ನೋಡಿರಿ ಎಲ್ಲಾ ಮಕ್ಕಳಿಗೂ ಸಹ ನೀವೇ ತಾಯಿಯಾಗಿದ್ದೀರಿ ಎಂದು ಹೇಳಿದರು. ಅಕ್ಷರ ದಾಸೋಹದ ಸಹಾಯಕ ನಿರ್ದೇಶಕರಾದ ಗಣೇಶ್ ಹಾಗೂ ತರೀಕೆರೆ ತಾಲೂಕು ಅಡುಗೆ ಸಿಬ್ಬಂದಿ ಸಂಘದ ಅಧ್ಯಕ್ಷರಾದ ಚಂದ್ರಮ್ಮ ಉಪಸ್ಥಿತರಿದ್ದು ತಾಲೂಕಿನಾದ್ಯಂತ ನೂರಾರು ಜನ ಬಿಸಿಯೂಟ ಸಿಬ್ಬಂದಿಗಳು ತರಬೇತಿಯಲ್ಲಿ ಭಾಗವಹಿಸಿದ್ದರು.
ಜಿಲ್ಲಾ ವರದಿಗಾರರು:ಎನ್.ವೆಂಕಟೇಶ್.ತರೀಕೆರೆ